-ಮತ್ತೇ ಮತದಾರರ ವಿರುದ್ಧ ಸೋಲಿನ ಬೇಸರ ಹೊರ ಹಾಕಿದ ಮಾಜಿ ಸಚಿವ
ದಾವಣಗೆರೆ: ಉಪಕಾರ ಮಾಡಿದವರನ್ನೇ ಸೋಲಿಸಿದ್ದೀರಿ. ಹೀಗಿರುವಾಗ ಒಳ್ಳೆಯದನ್ನು ಮಾಡುವುದೇ ತಪ್ಪೇ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಹರಪ್ಪನಹಳ್ಳಿಯ ಎಡಿಬಿ ಕಾಲೇಜು ಮೈದಾನದಲ್ಲಿ ನಡೆದ ಎಂ.ಪಿ.ರವೀಂದ್ರ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವರು, ಎಂ.ಪಿ.ರವೀಂದ್ರ ಹಾಗೂ ನಮ್ಮಂತವನ್ನು ಸೋಲಿಸಿದ್ದೀರಿ. ಹೀಗಾಗಿ ಬಡವರಿಗೆ ಉಪಕಾರ ಮಾಡುವುದೇ ಕಷ್ಟವಾಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಅಂತ ಹೇಳುವವರ್ನು ಕೈಬಿಡುತ್ತಿದ್ದೀರಿ. ನಾವು ಹೇಗಪ್ಪ ಬದುಕುವುದು ಎನ್ನುವ ಪ್ರಶ್ನೆಗೆ ಸಿಲುಕಿದ್ದೇವೆ ಎಂದು ಅಸಮಾಧಾನ ಹೊರಹಾಕಿದರು.
ಎಂ.ಪಿ.ರವೀಂದ್ರ ಒಬ್ಬ ಅಭಿವೃದ್ಧಿ ಹರಿಕಾರ. ಅವರ ತಂದೆಯಂತೆ ಕ್ಷೇತ್ರದ ಅಭಿವೃದ್ಧಿಗೆ ಹಲವು ಕನಸುಗಳನ್ನು ಕಂಡಿದ್ದರು. ಒಂದು ಬಾರಿ ಶಾಸಕರಾಗಿ ಜಯಗಳಿಸಿದ್ದ ಅವರು ಕೆರೆಗಳ ಜೋಡಣೆ ಕಾಮಗಾರಿ ಆರಂಭಿಸಿದ್ದರು. ಕ್ಷೇತ್ರದ ಅಭಿವೃದ್ಧಿಗೆ ನಿತ್ಯವೂ ಶ್ರಮಿಸಿದರು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಅವರನ್ನು ನೀವು ಸೋಲಿಸಿದ್ದೀರಿ. ಇದೇ ಕಾರಣಕ್ಕೆ ಯಾರಿಗೂ ಉಪಕಾರ ಮಾಡಬಾರದು ಅಂತಾ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ವೇಳೆ ಎಂ.ಪಿ.ರವೀಂದ್ರ ಅವರನ್ನು ನೀವು ಆಯ್ಕೆ ಮಾಡಿದ್ದರೆ ಸಚಿವರಾಗುತ್ತಿದ್ದರು. ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿದ್ದವು. ಅವರನ್ನು ಹಾಗೂ ನಮ್ಮಂತವರನ್ನು ಸೋಲಿಸುವ ಮೂಲಕ ಅಭಿವೃದ್ಧಿಯನ್ನು ಕುಂಠಿತಗೊಳಿಸಲಾಗಿದೆ ಎಂದು ಕಿಡಿಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv