ಚಾಮರಾಜನಗರ: ಕೃಷಿ ಹೊಂಡದಲ್ಲಿ ಬಿದ್ದಿದ್ದ ಮೂರು ಆನೆಗಳನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ ಘಟನೆ ಸತ್ಯಮಂಗಲದ ಬಳಿ ನಡೆದಿದೆ.
ಚಾಮರಾಜನಗರ ಮತ್ತು ತಮಿಳುನಾಡಿನ ಗಡಿ ಪ್ರದೇಶದಲ್ಲಿರುವ ಸತ್ಯಮಂಗದ ಕಾಡಂಚಿನ ಗ್ರಾಮವಾದ ಕನಕುಂದೂರು ಗ್ರಾಮದ ಕೃಷಿ ಹೊಂಡಕ್ಕೆ ಮೂರು ಕಾಡಾನೆಗಳು ಬಿದ್ದಿವೆ. ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದಾಗ, ಮಣ್ಣು ಕುಸಿದು ಆಳವಾದ ಕೃಷಿ ಹೊಂಡಕ್ಕೆ ಬಿದ್ದಿವೆ. ಕೃಷಿ ಹೊಂಡ ಆಳವಾಗಿದ್ದ ಕಾರಣ ಆನೆಗಳು ಮೇಲೆ ಬರಲು ಸಾಧ್ಯವಾಗದೇ ಗಾಬರಿಗೊಂಡು ಚೀರಾಟ ನಡೆಸಿವೆ.
ಆನೆಗಳ ಧ್ವನಿ ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಆನೆಗಳು ಕೃಷಿ ಹೊಂಡದಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಆನೆಗಳನ್ನು ಮೇಲೆ ತರಲು ಜೆಸಿಬಿ ಯಂತ್ರದ ಸಹಾಯದಿಂದ ಕೃಷಿ ಹೊಂಡದ ಬಳಿ ದಾರಿ ಮಾಡಿಕೊಟ್ಟಿದ್ದಾರೆ.
ಕಾಡಾನೆಗಳು ಒಂದರ ಸಹಾಯದೊಂದಿಗೆ ಮತ್ತೊಂದು ಆನೆ ಕೃಷಿ ಹೊಂಡದಿಂದ ಮೇಲೆ ಬಂದು ಮರಳಿ ಕಾಡಿಗೆ ಸೇರಿವೆ.