ಕಾನ್ಪುರ: ಉತ್ತರಪ್ರದೇಶದ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ 24 ಗಂಟೆಗಳೊಳಗೆ ಐದು ಮಂದಿ ರೋಗಿಗಳು ಮೃತಪಟ್ಟ ಘಟನೆ ವರದಿಯಾಗಿದೆ.
ಕಳೆದ ಹಲವು ದಿನಗಳಿಂದ ಸರ್ಕಾರಿ ಆಸ್ಪತ್ರೆಯ ಐಸಿಯುವಿನಲ್ಲಿದ್ದ ಎಸಿ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಈ ಅವಘಡಕ್ಕೆ ಕಾರಣ ಅಂತ ಮೃತರ ಸಂಬಂಧಿಗಳು ಆರೋಪಿಸುತ್ತಿದ್ದಾರೆ.
ಕಳೆದ ಗುರುವಾರದಿಂದ ಆಸ್ಪತ್ರೆಯ ಐಸಿಯು ಕೋಣೆಯಲ್ಲಿದ್ದ ಎಸಿಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈ ಬಗ್ಗೆ ಅಲ್ಲಿನ ಹಿರಿಯ ದಾದಿಯೊಬ್ಬರು ಲಿಖಿತ ದೂರು ನೀಡಿದ್ದರು. ರೋಗಿಗಳು ಇರುವ ಕೊಠಡಿಯ ಕಿಟಕಿ ಮತ್ತು ಬಾಗಿಲು ತೆರೆದಿಡಲಾಗುತ್ತಿದೆ. ಆದ್ರೂ ನಗರದಲ್ಲಿ ವಿಪರೀತ ಸೆಕೆ ಇದ್ದು, ಈ ಗಾಳಿ ಸಾಲುತ್ತಿಲ್ಲ. ಹೀಗಾಗಿ ನಾವು ಕೈಯಲ್ಲೇ ಗಾಳಿ ಬೀಸುವ ಮೂಲಕ ರೋಗಿಗಳಿಗೆ ಸೆಕೆಯಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತೇವೆ ಅಂತ ರೋಗಿಗಳ ಸಂಬಂಧಿಕರು ತಿಳಿಸಿದ್ದಾರೆ. ಬುಧವಾರ ಮತ್ತು ಗುರುವಾರ ಸುಡುಬಿಸಿಲು ಇದ್ದುದರಿಂದ ರೋಗಿಗಳು ಸೆಕೆಯಿಂದ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 5 ಮಂದಿ ರೋಗಿಗಳು ಮೃತಪಟ್ಟಿದ್ದಾರೆ ಅಂತ ವರದಿಯಾಗಿದೆ.
Kanpur: People allege 4 patients died due to failure of air conditioning system at ICU ward of Ganesh Shankar Vidyarthi Memorial Medical College. Principal GSVM says, "2 deaths occurred due to cardiac arrest & other 2 due to chronic illness; AC plant to be repaired soon." pic.twitter.com/ds5LVFSFrh
— ANI UP/Uttarakhand (@ANINewsUP) June 8, 2018
ಎಸಿಯುನಲ್ಲಿ ಅಳವಡಿಸಿದ್ದ ಎಸಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆಸ್ಪತ್ರೆ ಒಪ್ಪಿಕೊಂಡಿದೆ. ಆದರೆ ಎಸಿ ಕಾರಣದಿಂದಾಗಿ ಸಾವು ಸಂಭವಿಸಿದೆ ಎಂಬ ಆರೋಪವನ್ನು ನಿರಾಕರಿಸಿದ್ದು, ಐಸಿಯು ರೋಗಿಗಳು ಸ್ಥಿತಿ ಗಂಭೀರವಾಗಿರುತ್ತದೆ. ಜೊತೆಗೆ ನೈಸರ್ಗಿಕ ಕಾರಣಗಳಿಂದಾಗಿ ಸಾವುಗಳು ಸಂಭವಿಸುತ್ತಿವೆ ಎಂದು ಐಸಿಯು ವಿಭಾಗದ ಉಸ್ತುವಾರಿ ಸೌರಬ್ ಅಗರ್ವಾಲ್ ಹೇಳಿದ್ದಾರೆ.
ಗಣೇಶ ಶಂಕರ್ ವಿದ್ಯಾರ್ಥಿ ಮೆಮೋರಿಯಲ್ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಕೂಡಾ ಹೃದಯಾಘಾತ ಮತ್ತು ದೀರ್ಘಕಾಲದ ಅನಾರೋಗ್ಯದ ಕಾರಣದಿಂದ ಸಾವು ಸಂಭವಿಸಿದೆ ಎಂದು ಹೇಳಿದ್ದಾರೆ. ಈ ಕುರಿತು ತನಿಖೆ ಮಾಡಲು ಜಿಲ್ಲಾ ನ್ಯಾಯಾಧೀಶರೊಬ್ಬರಿಗೆ ದೂರು ನೀಡಲಾಗಿದೆ.
ಈ ಹಿಂದೆ ಉತ್ತರಪ್ರದೇಶ ಗೋರಖ್ಪುರದ ಬಿಆರ್ಡಿ ಮೆಡಿಕಲ್ ಕಾಲೇಜಿನಲ್ಲಿ ಅನೇಕ ಮಕ್ಕಳು ಆಮ್ಲಜನಕ ಸಿಲಿಂಡರ್ ಕೊರತೆಯ ಕಾರಣದಿಂದಾಗಿ ಮೃತಪಟ್ಟಿದ್ದವು.