ಬಳ್ಳಾರಿ: ನದಿಗೆ ಸ್ನಾನಕ್ಕೆ ತೆರಳಿ, ನೀರುಪಾಲಾಗಿದ್ದ ಮಹಾರಾಷ್ಟ್ರ ಪೊಲೀಸರು ಅದೃಷ್ಟವಶಾತ್ ಬದುಕುಳಿದ ಘಟನೆ ಹಂಪಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ.
ಐವರು ಮಹಾರಾಷ್ಟ್ರ ಪೊಲೀಸರು ವಿರೂಪಾಕ್ಷ ದೇವರ ದರ್ಶನಕ್ಕಾಗಿ ಹಂಪಿಗೆ ಬಂದಿದ್ದರು. ಈ ವೇಳೆ ಎಲ್ಲರೂ ಸ್ನಾನ ಮಾಡಲು ತುಂಗಭದ್ರಾ ನದಿಗೆ ಇಳಿದಿದ್ದು, ಈಜಲು ಮುಂದಾಗಿದ್ದ ವೇಳೆ ಪ್ರವಾಹಕ್ಕೆ ಸಿಲುಕಿದ್ದರು. ಇದನ್ನು ಕಂಡ ಸ್ಥಳೀಯರು ಹಾಗೂ ಮೀನುಗಾರರು ತಕ್ಷಣವೇ ನದಿಯಲ್ಲಿ ದೋಣಿ ಮೂಲಕ ತೆರಳಿ ಅವರನ್ನು ರಕ್ಷಿಸಿದ್ದಾರೆ.
ಸದ್ಯ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.