ಬೆಂಗಳೂರು: ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಪಂದ್ಯ ನಡೆಯಿತು. ಅಲ್ಲದೆ ಬುಧವಾರ ವರನಟ ಡಾ. ರಾಜ್ಕುಮಾರ್ ಅವರ ಹುಟ್ಟುಹಬ್ಬ ಆಗಿದ್ದರಿಂದ ಕ್ರೀಡಾಂಗಣದ ಸ್ಕ್ರೀನ್ನಲ್ಲಿ ಅವರ ಫೋಟೋ ಹಾಕಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ.
ಬುಧವಾರ ರಾಜ್ಕುಮಾರ್ ಅವರ ಹುಟ್ಟುಹಬ್ಬ ಇರುವುದರಿಂದ ಕ್ರೀಡಾಂಗಣದ ಎಲ್ಇಡಿ ಸ್ಕ್ರೀನ್ನಲ್ಲಿ ಅವರ ಫೋಟೋ ಹಾಕುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿತ್ತು. ಫೋಟೋ ಕೆಳಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಕೂಡ ಬರೆದಿತ್ತು. ಇದನ್ನು ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಕರ್ನಾಟಕದ ಜನರಿಗೆ ತಮ್ಮ ಚಿತ್ರಗಳ ಮೂಲಕ ಕನ್ನಡದ ಮಹತ್ವವನ್ನು ಸಾರಿದ, Dr. Rajkumar ಅವರಿಗೆ 91ನೇ ಜನ್ಮ ವಾರ್ಷಿಕೋತ್ಸವದ ಶುಭಾಶಯಗಳು.
ಇವರು ಕನ್ನಡಿಗರ ಪಾಲಿಗೆ ಕರ್ನಾಟಕ ರತ್ನ , ಬಂಗಾರದ ಮನುಷ್ಯ , ನಟಸಾರ್ವಭೌಮ! @RCBTweets @StarSuvarnaPlus #DrRajkumar #NammaTeamRCB #PlayBold #Kannada #Bangalore #RCBvKXIP pic.twitter.com/3AZYlVQTKN
— Namma Team RCB Official (@nammateamrcb) April 24, 2019
ರಾಯಲ್ ಚಾಲೆಂಜರ್ಸ್ ಕೂಡ ಡಾ. ರಾಜ್ಕುಮಾರ್ ಅವರ ಹುಟ್ಟುಹಬ್ಬದ ಬಗ್ಗೆ ಟ್ವೀಟ್ ಮಾಡಿತ್ತು. ರಾಯಲ್ ಚಾಲೆಂಜರ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ, “ಅಣ್ಣಾವ್ರ ಹುಟ್ಟುಹಬ್ಬವನ್ನು ಯಾವ ರೀತಿ ಆಚರಿಸಿದ್ದೇವೆ, ಅಲ್ವಾ?” ಎಂದು ಬರೆದು ಹುಟ್ಟುಹಬ್ಬದ ಶುಭಾಶಯಗಳು ಡಾ. ರಾಜ್ಕುಮಾರ್ ಎಂದು ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿತ್ತು.
What a way to celebrate the birth anniversary of Annavru, alva? #HappyBirthdayDrRajkumar
— Royal Challengers Bangalore (@RCBTweets) April 24, 2019
ಇನ್ನೊಂದು ವಿಶೇಷ ಏನೆಂದರೆ ಆರ್ಸಿಬಿ ಪಂದ್ಯವನ್ನು ವೀಕ್ಷಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಆಗಮಿಸಿದರು. ಶಿವರಾಜ್ಕುಮಾರ್ ಅವರ ಜೊತೆ ನಿರ್ದೇಶಕ ರಘುರಾಮ್ ಹಾಗೂ ನಿರ್ಮಾಪಕ ಶ್ರೀಕಾಂತ್ ಆಗಮಿಸಿದರು. ಮೂವರು ಪಂದ್ಯವನ್ನು ಸಾಕಷ್ಟು ಎಂಜಾಯ್ ಮಾಡಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ 202 ರನ್ ಬಾರಿಸಿ ಪಂಜಾಬ್ಗೆ 203 ರನ್ ಗುರಿ ನೀಡಿತ್ತು. 203 ಗುರಿ ಬೆನ್ನತ್ತ ಪಂಜಾಬ್ ತಂಡ 185 ರನ್ ಸಿಡಿಸಿ 17 ರನ್ಗಳಿಂದ ಸೋಲನ್ನು ಕಂಡಿತ್ತು. ಈ ಪಂದ್ಯದಲ್ಲಿ ಆರ್ಸಿಬಿ ಆಟಗಾರ ಎಬಿಡಿ 44 ಎಸೆತಗಳಲ್ಲಿ 82 ರನ್ ಸಿಡಿಸಿದರು.