ದಾವಣಗೆರೆ: ಒಬ್ಬ ಅಧಿಕಾರಿ ಮನಸ್ಸು ಮಾಡಿದ್ರೆ ಸಮಾಜದಲ್ಲಿ ಎಂಥಾ ಬದಲಾವಣೆ ತರಬಹುದು ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ. ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಓ ಇಂಥಾ ಜನಮೆಚ್ಚುಗೆಯ ಕೆಲಸಕ್ಕೆ ಪಾತ್ರರಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಅದೆಷ್ಟೋ ಗ್ರಾಮಗಳ ಮನೆಗಳಲ್ಲಿ ಶೌಚಾಲಯಗಳೇ ಇರಲಿಲ್ಲ. ಇದನ್ನು ಮನಗಂಡ ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಿಇಒ ಅಶ್ವತಿ, ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸೋ ಸಲುವಾಗಿ ಒಂದು ವಿಶಿಷ್ಟ ಯೋಜನೆ ರೂಪಿಸಿದ್ರು. ಮೌಢ್ಯತೆ ಮೆಟ್ಟಿನಿಂತು ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ, ಬಾಣಂತಿಯರಿಗೆ ಮಡಿಲು ತುಂಬುವ ಜೊತೆಗೆ ಶೌಚಾಲಯ ನಿರ್ಮಿಸಿಕೊಂಡ ಮಕ್ಕಳಿಗೆ ಪ್ರಶಂಸಾ ಪತ್ರ ನೀಡುವ ಯೋಜನೆಗೆ ಕೈ ಹಾಕಿದ್ರು. ಸಿಇಓ ಅವರ ಈ ಕಳಕಳಿಗೆ ಗ್ರಾಮದ ಜನರೂ ಸಾಥ್ ನೀಡಿದ್ರು. ಪರಿಣಾಮ ಎಲ್ಲವೂ ಅವರಂದುಕೊಂಡತೆಯೇ ಆಗ್ತಿದೆ. ಬಯಲು ಶೌಚಮುಕ್ತ ಜಿಲ್ಲೆಯಲ್ಲಿ 18ನೇ ಸ್ಥಾನದಲ್ಲಿದ್ದ ದಾವಣಗೆರೆ ಈಗ 3 ಸ್ಥಾನಕ್ಕೆ ಬಂದಿದೆ.
ಸಿಇಒ ಅಶ್ವಥಿ ಕಳೆದ 3 ತಿಂಗಳಿನಿಂದ ಅಧಿಕಾರಿಗಳೊಂದಿಗೆ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ರು. ಜನರಲ್ಲಿರುವ ಮೂಢನಂಬಿಕೆಯನ್ನ ದೂರವಾಗಿಸಿದ್ರು. ಜಿಲ್ಲೆಯಲ್ಲಿ 300 ಗರ್ಭಿಣಿಯರು ಹಾಗೂ 35 ಬಾಣಂತಿಯರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಸೈ ಎನಿಸಿಕೊಂಡ್ರು.
ಬೆಣ್ಣೆನಗರಿಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಿಇಓ ಪಣ ತೊಟ್ಟು ಯಶಸ್ವಿ ಹಾದಿಯಲ್ಲಿದ್ದಾರೆ. ಇನ್ನು ಅಕ್ಟೋಬರ್ 2ರಂದು ಬಯಲು ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡುವುದೊಂದೇ ಬಾಕಿ ಇದೆ.