ಮೈಸೂರು: ಜಾತಿ ಮೀರಿ ಜಿಲ್ಲೆಯಲ್ಲಿ ಜೋಡಿಯೊಂದು ಬುದ್ಧನ ತತ್ವಗಳನ್ನು ಬೋಧಿಸುವ ಮೂಲಕ ಸರಳವಾಗಿ ಸಪ್ತಪದಿ ತುಳಿದಿದ್ದಾರೆ.
ಶಿಲ್ಪಾ ಮತ್ತು ಸಾಗರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೊಸ ಜೋಡಿ. ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಈ ಸರಳ ವಿವಾಹ ನಡೆದಿದ್ದು, ಬುದ್ಧನ ತತ್ವಗಳನ್ನು ಬೋಧಿಸುವ ಮೂಲಕ ಸರಳವಾಗಿ ಅಂತರ್ಜಾತಿಯ ಮದುವೆ ನಡೆದಿದೆ. ಒಡನಾಡಿಯಲ್ಲಿ ಸಂಸ್ಥೆಯಲ್ಲಿ ನೆರವೇರಿದ 88ನೇ ಸರಳ ವಿವಾಹ ಇದಾಗಿದೆ.
ಮೈಸೂರಿನ ಅರವಿಂದನಗರದ ಸಿದ್ದರಾಜು ಮತ್ತು ಭಾಗ್ಯಲಕ್ಷ್ಮೀ ಪುತ್ರಿ ಶಿಲ್ಪಾ ಮತ್ತು ಮೈಸೂರಿನ ವಿಜಯನಗರ ನಿವಾಸಿಗಳಾದ ಕುಮಾರಸ್ವಾಮಿ ಮತ್ತು ಕಲಾವತಿ ಪುತ್ರ ಸಾಗರ್ ಸರಳ ವಿವಾಹವಾಗಿದ್ದಾರೆ. ಶಿಲ್ಪಾ ಮತ್ತು ಸಾಗರ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಬಂಧು ಮಿತ್ರರ ಸಮ್ಮುಖದಲ್ಲಿ ಇಂದು ನಡೆದ ವಿವಾಹದಲ್ಲಿ ನವಜೋಡಿಗಳಿಬ್ಬರು ಬುದ್ಧನ ತತ್ವಗಳನ್ನು ಹೇಳಿದರು. ಈ ವಿಶೇಷ ಸಮಾರಂಭಕ್ಕೆ ಸಾಕ್ಷಿಯಾದ ಹಲವರು ದಂಪತಿಗೆ ಆಶೀರ್ವದಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv