ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿಯನ್ನು ಲೀಸ್ ನೀಡುವ ವಿಚಾರದಲ್ಲಿ ಕಾಂಗ್ರೆಸ್ನ ಶಾಸಕ ಎಚ್.ಕೆ.ಪಾಟೀಲ್ ಹಾಗೂ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಮಧ್ಯೆ ಬಹಿರಂಗ ಜಟಾಪಟಿ ಶುರುವಾಗಿದೆ.
ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನನ್ನು ಲೀಸ್ ನೀಡುವ ಸಚಿವ ಸಂಪುಟದ ನಿರ್ಣಯದ ಕುರಿತು ನೀವು ಪ್ರತಿಕ್ರಿಯಿಸುತ್ತಾ, ಜಿಂದಾಲ್ ಕಂಪನಿಯವರು ರಾಜ್ಯ ಸರ್ಕಾರಕ್ಕೆ ಬಾಕಿ ಇಲ್ಲ ಎಂದು ತಿಳಿಸಿದ್ದೀರಿ. ನಿಮ್ಮ ಹೇಳಿಕೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಲಗತ್ತಿಸಿರುವೆ ಪರಿಶೀಲಿಸಿ ಎಂದು ಶಾಸಕರ ಎಚ್.ಕೆ.ಪಾಟೀಲ್ ಅವರು, ಕೆ.ಜೆ.ಜಾರ್ಜ್ ಅವರಿಗೆ ಚಾಟಿ ಬೀಸಿದ್ದಾರೆ.
ಈ ಎಲ್ಲಾದಾಖಲೆಗಳನ್ನು ತಾವು ಒಮ್ಮೆ ಪರಿಶೀಲಿಸಿ. ಈದಾಖಲೆಗಳು ವಾಸ್ತವಿಕವಾಗಿ ನಾನು ಕಳುಹಿಸಬೇಕಾದ ಅಗತ್ಯವಿಲ್ಲ. ಈ ಎಲ್ಲಾ ದಾಖಲೆಗಳು ಸರ್ಕಾರದ ಕಡತಗಳಲ್ಲಿ ಲಭ್ಯವಿವೆ. ಆದರೂ ತಮ್ಮ ಗಮನಕ್ಕಾಗಿ ಕಳುಹಿಸುತ್ತಿದ್ದೇನೆ. ಕೊನೆಯ ೨ ಪುಟಗಳು. pic.twitter.com/lfOz8fbhQE
— HK Patil (@HKPatilINC) June 5, 2019
ಈ ಎಲ್ಲಾ ದಾಖಲೆಗಳನ್ನು ತಾವು ಒಮ್ಮೆ ಪರಿಶೀಲಿಸಿ. ಈ ದಾಖಲೆಗಳು ವಾಸ್ತವಿಕವಾಗಿ ನಾನು ಕಳುಹಿಸಬೇಕಾದ ಅಗತ್ಯವಿಲ್ಲ. ಇವು ಸರ್ಕಾರದ ಕಡತಗಳಲ್ಲಿ ಲಭ್ಯವಾಗುತ್ತವೆ. ಆದರೂ ತಮ್ಮ ಗಮನಕ್ಕಾಗಿ ಕಳುಹಿಸುತ್ತಿದ್ದೇನೆ ಎಂದು ಎಚ್.ಕೆ.ಪಾಟೀಲ್ ಶಾಸಕರು ಸರಣಿ ಟ್ವೀಟ್ ಮೂಲಕ ಪ್ರಮುಖ ದಾಖಲೆಗಳನ್ನು ಪ್ರಕಟಿಸಿದ್ದಾರೆ.
ಜಾರ್ಜ್ ಹೇಳಿದ್ದೇನು?:
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಚಿವ ಕೆ.ಜೆ.ಜಾರ್ಜ್ ಅವರು, ಹಣ ಪಡೆದು ಮೈತ್ರಿ ಸರ್ಕಾರ ಜಿಂದಾಲ್ ಕಂಪನಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದರು.
ದಾಖಲೆ ೨ pic.twitter.com/SAqy45Ku9O
— HK Patil (@HKPatilINC) June 5, 2019
ಜಿಂದಾಲ್ ಉತ್ತಮ ಕಂಪನಿಯಾಗಿದ್ದು ಸರ್ಕಾರಕ್ಕೆ ಯಾವುದೇ ರೀತಿಯ ಬಾಕಿ ಉಳಿಸಿಕೊಂಡಿಲ್ಲ. 1971ರಲ್ಲಿ 7 ಸಾವಿರ ಎಕರೆ ಭೂಮಿಯನ್ನು ಕೇಂದ್ರ ಸರ್ಕಾರ ವಶ ಪಡಿಸಿಕೊಂಡಿತ್ತು. ಆಗ ದೇವೇಗೌಡರು ನೇತೃತ್ವದ ಸರ್ಕಾರ 1995 ರಲ್ಲಿ 3 ಸಾವಿರ ಎಕ್ರೆಯನ್ನು ವಿಜಯನಗರ ಘಟಕಕ್ಕೆ ನೀಡಿದ್ದರು. ನಂತರ ಈ ಭೂಮಿಯನ್ನು 2005 ರಲ್ಲಿ ಧರ್ಮಸಿಂಗ್ ಸಿಎಂ ಆಗಿದ್ದಾಗ ಲೀಸ್ ಕೊಡಲಾಗಿತ್ತು. 2006ರಲ್ಲಿ ಸಿಎಂ ಆದ ಕುಮಾರಸ್ವಾಮಿ ಅವರು ಎಕ್ರೆಗೆ 90 ಸಾವಿರ ನಿಗದಿ ಮಾಡಿ 2007ರಲ್ಲಿ ಸುಮಾರು 1,200 ಎಕ್ರೆರೆ ಜಾಗವನ್ನು ಹೆಚ್ಚುವರಿಯಾಗಿ ನೀಡಿದ್ದರು ಎಂದು ತಿಳಿಸಿದ್ದರು.
ದಾಖಲೆ ೪ ರ ಮೊದಲ ೪ ಪುಟಗಳು pic.twitter.com/jKVPByk9Z0
— HK Patil (@HKPatilINC) June 5, 2019
ಈಗ 90 ಸಾವಿರ ಬದಲಾಗಿ 1.26 ಲಕ್ಷ ಪ್ರತಿ ಎಕರಗೆ ಬೆಲೆ ನಿಗದಿ ಮಾಡಲಾಗಿದೆ. ಹೊಸ ದರದ ಅನ್ವಯ ಸರ್ಕಾರ ಭೂಮಿಯನ್ನು ನೀಡಿದೆ. ಜೆಎಸ್ಡಬ್ಲೂ ಈಗ ಎಲ್ಲಾ ಷರತ್ತುಗಳನ್ನ ಒಪ್ಪಿಕೊಂಡಿದೆ ಮತ್ತು ಯಾವುದೇ ಹಣವನ್ನು ಬಾಕಿ ಉಳಿಸಿಕೊಂಡಿಲ್ಲ. ಹೀಗಾಗಿ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ನೀಡಲಾಗಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಬಂದ ಹಿನ್ನಲೆಯಲ್ಲಿ ಅದನ್ನು ಆಗ ಮಾಡಲು ಸಾಧ್ಯವಾಗಿರಲಿಲ್ಲ. ರಾಜ್ಯಕ್ಕೆ ಕೈಗಾರಿಕೆ ಬರುವ ಹಿನ್ನಲೆಯಲ್ಲಿ ನಾವು ಜಿಂದಾಲ್ಗೆ ಭೂಮಿ ನೀಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕೆ.ಜೆ ಜಾರ್ಜ್ ಸಮರ್ಥಿಸಿಕೊಂಡಿದ್ದರು.
ಇದೇ ವೇಳೆ ಎಚ್.ಕೆ ಪಾಟೀಲ್ ಅವರ ಪತ್ರದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ಸಚಿವರು, ಶಾಸಕರಿಗೆ ಏನಾದರೂ ಸಂಶಯ ಇದ್ದರೆ ಅವರು ನನ್ನ ಕೇಳಿದರೆ ಹೇಳುತ್ತೇನೆ. ಆ ರೀತಿಯ ಅಕ್ರಮ ನಡೆದಿರುವ ಬಗ್ಗೆ ದಾಖಲಾತಿ ಇದ್ದರೆ ನೀಡಲಿ ನಾನು ಪರಿಶೀಲನೆ ಮಾಡಿಸುತ್ತೇನೆ. ಅವರು ನನ್ನ ಸಹೋದ್ಯೋಗಿ ಅವರ ಜೊತೆ ನಾನು ಮಾತನಾಡುತ್ತೇನೆ. ನಮಗೆ ರಾಜ್ಯದ ಹಿತ ಮುಖ್ಯ ಜೆಎಸ್ಡಬ್ಲೂ ಉತ್ತಮ ಸಂಸ್ಥೆ ರಾಜ್ಯಕ್ಕೆ ಕೈಗಾರಿಕೆ ಬಂದರೆ ನಮ್ಮ ಅನುಕೂಲವಾಗುತ್ತದೆ. ಅನಾವಶ್ಯಕವಾಗಿ ಸುದ್ದಿ ಮಾಡಿದರೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತದೆ ಎಂದು ಹೇಳಿದ್ದರು.
ಜಿಂದಾಲ್ ಅಕ್ರಮ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಭಟನೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿದ ಜಾರ್ಜ್, ಈಗ ನಾನು ಹೇಳಿದ ಅಂಶಗಳ ಬಗ್ಗೆ ಯಡಿಯೂರಪ್ಪ ಗಮನಹರಿಸಲಿ. ಇದರಲ್ಲಿ ಏನಾದರೂ ತಪ್ಪು ಇದ್ದರೆ ನನ್ನನ್ನು ಕೇಳಲಿ ಅಮೇಲೆ ನಾನು ಉತ್ತರ ಕೊಡುತ್ತೇನೆ ಎಂದು ಹೇಳಿದ್ದರು.