ಚಾಮರಾಜನಗರ: ಲಾರಿ ಟಾರ್ಪಲ್ ಕಿತ್ತು ಆಹಾರಕ್ಕಾಗಿ ಒಂಟಿಸಲಗ ಚೆಕ್ಕಿಂಗ್ ಮಾಡಿದ ಪ್ರಸಂಗವೊಂದು ಚಾಮರಾಜನಗರ ಜಿಲ್ಲೆಯ ತಮಿಳುನಾಡಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
- Advertisement 2
ರಾಷ್ಟ್ರೀಯ ಹೆದ್ದಾರಿಯಲ್ಲಿ ವಸೂಲಿಗೆ ಕಾಡಾನೆ (Wild Elephant) ವಸೂಲಿಗೆ ಇಳಿದಿದೆ. ಲೋಡ್ ಲಾರಿಗಳನ್ನ ಅಡ್ಡಗಟ್ಟಿದ ಕಾಡಾನೆ ಆಹಾರಕ್ಕಾಗಿ ಹುಡುಕಾಟ ನಡೆಸಿದೆ. ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲ ವಾಹನಗಳನ್ನು ತಡೆದು ಟ್ರಾಫಿಕ್ ಜಾಮ್ (Traffic Jam) ಉಂಟಾಗಿದೆ.
- Advertisement 3
- Advertisement 4
ಮೊದಲು ಕಬ್ಬಿನ ಲಾರಿಗಳನ್ನು ಅಡ್ಡಗಟ್ಟುತ್ತಿದ್ದ ಕಾಡಾನೆ, ಇದೀಗ ತರಕಾರಿ ಲಾರಿಗಳು ಹಾಗೂ ಇತರೆ ವಾಹನಗಳನ್ನು ಅಡ್ಡಗಟ್ಟುತ್ತಿದೆ. ಲಾರಿಗಳ ಟಾರ್ಪಾಲ್ ಕೀಳಲು ಸತತ ಪ್ರಯತ್ನ ಮಾಡಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಪತ್ನಿಯನ್ನು ರಕ್ಷಿಸಲು ನೀರಿಗೆ ಧುಮುಕಿದ ಪತಿಯೂ ಸಾವು!