ನವದೆಹಲಿ: ಲೋಕಸಭೆಯಲ್ಲಿ ಈ ಹಿಂದೆ ತಿರಸ್ಕೃತಗೊಂಡಿದ್ದ ಡಿಲಿಮಿಟೇಷನ್ ಬಿಲ್ (Delimitation Bill) ಅನ್ನು ಮುಂಗಾರು ಅಧಿವೇಶನದಲ್ಲಿ (Monsoon Session) ಮತ್ತೆ ಪ್ರಸ್ತುತಪಡಿಸಲು ಕೇಂದ್ರ ಸರ್ಕಾರ (Central Government) ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಟಿಎಂಸಿ ಜೊತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ.
ಟಿಎಂಸಿ ಸಂಸದರು ಸರ್ಕಾರದ ಪ್ರಸ್ತಾಪಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಕ್ಷೇತ್ರ ಪುನರ್ ವಿಂಗಡಣೆ ವಿಷಯದಲ್ಲಿ ಚರ್ಚೆಗೆ ತಯಾರಿದ್ದಾರೆ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಬಿಲ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದ ಡಿಎಂಕೆ ಕೂಡ ಈ ಬಾರಿ ವಿರೋಧಿ ನಿಲುವು ತೋರಿಸದೆ, ಸರ್ಕಾರದ ಪರಿಷ್ಕೃತ ಮುದ್ರಣಕ್ಕೆ ಕಾಯುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್ ಆಗಿದೆ: ಸಿಎಂ ಡಿಕೆಶಿ
ಈ ಹಿಂದೆ ಏಪ್ರಿಲ್ 16 ರಿಂದ 18ರವರೆಗೆ ನಡೆದ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಾನೂನು ನಾರಿ ಶಕ್ತಿ ವಂದನ ಅಧಿನಿಯಮ ಅನ್ನು 2029ರೊಳಗೆ ಜಾರಿಗೆ ತರುವ ಗುರಿಯೊಂದಿಗೆ ಬಿಲ್ ಮಂಡಿಸಲಾಗಿತ್ತು. ಇದರಲ್ಲಿ ಡಿಲಿಮಿಟೇಷನ್ ಅಂದರೆ ಜನಸಂಖ್ಯೆ ಬದಲಾವಣೆಗೆ ಅನುಗುಣವಾಗಿ ಮತಕ್ಷೇತ್ರಗಳ ಮರುರಚನೆಯನ್ನು ಹೊಸ ಜನಗಣತಿ ಇಲ್ಲದೆಯೇ ಕೈಗೊಳ್ಳುವ ಪ್ರಸ್ತಾಪವೂ ಇತ್ತು. ಆದರೆ ಬಿಲ್ 2/3 ಬಹುಮತ ಪಡೆಯಲು ವಿಫಲವಾಗಿತ್ತು. ಇದನ್ನೂ ಓದಿ: ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಸುಳಿವು – ಸಿಎಂ ಡಿಕೆಶಿ ಫುಲ್ ಆಕ್ಟೀವ್













