Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಖಾದರ್ ಮನೆಯಲ್ಲಿ ಸಿಎಂ ಇದ್ರೂ ಸಂತೋಷ್ ಮನೆಗೆ ಭೇಟಿ ನೀಡಿಲ್ಲ, ಕನಿಕರ-ಸೌಜನ್ಯ ಎಲ್ಲಾ ಮರೆತು ಹೋಗಿದೆ- ಬಿಎಸ್‍ವೈ ವಾಗ್ದಾಳಿ

Public TV
Last updated: February 2, 2018 12:02 pm
Public TV
Share
2 Min Read
CM BSY
SHARE

ಬೆಂಗಳೂರು: ಇತ್ತೀಚೆಗೆ ಜೆಸಿ ನಗರದಲ್ಲಿ ಹತ್ಯೆಗೀಡಾದ ಸಂತೋಷ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭೇಟಿ ನೀಡಿ ಸಾಂತ್ವನ ಹೇಳಿದ್ರು.

ಚಿನ್ನಪ್ಪ ಗಾರ್ಡನ್‍ನಲ್ಲಿರುವ ಸಂತೋಷ್ ಮನೆಗೆ ಮಾಜಿ ಮಂತ್ರಿ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಹಲವರ ಜೊತೆ ತೆರಳಿದ ಯಡಿಯೂರಪ್ಪ ಮೃತನ ಪತ್ನಿ, ತಾಯಿ ಮತ್ತು ಅಣ್ಣನಿಗೆ ಸಾಂತ್ವನ ಹೇಳಿ 1 ಲಕ್ಷ ರೂ. ಪರಿಹಾರ ನೀಡಿದ್ರು.

ಈ ವೇಳೆ ಬಿಎಸ್ ಯಡಿಯೂರಪ್ಪರನ್ನು ಭೇಟಿಯಾದ ಸ್ಥಳೀಯರು, ಇಲ್ಲಿ ಗಾಂಜಾ ಹೊಡೆಯುವವರ ಹಾವಳಿ ಜಾಸ್ತಿ ಆಗಿದೆ. ಹೆಣ್ಣು ಮಕ್ಕಳು ಓಡಾಟ ಮಾಡೋದು ಕಷ್ಟವಾಗಿದೆ. ಪುಂಡರ ಕಾಟಕ್ಕೆ ಕಡಿವಾಣ ಹಾಕಿ ಅಂತಾ ಮನವಿ ಮಾಡಿದ್ರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತನ ಸಾವಿನ ಮಧ್ಯೆ ರಾಜಕೀಯ- ಸಂತೋಷ್ ಮನೆ ಸಮೀಪದಲ್ಲೇ ಸಿಎಂ ಬಿರಿಯಾನಿ ಪಾರ್ಟಿ

BSY 5

ಬಳಿಕ ಮಾತನಾಡಿದ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ತಮ್ಮ ಸ್ವಾರ್ಥಕ್ಕಾಗಿ ಕಾನೂನು ಸುವ್ಯವಸ್ಥೆ ಜೊತೆ ಆಟ ಆಡ್ತಿದ್ದಾರೆ. ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಹತ್ಯೆ ಸೇರಿದಂತೆ 24 ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ. ಗೃಹ ಸಚಿವ ರಾಮಲಿಂಗಾರೆಡ್ಡಿ ಕೂಡ ಬೇಜಾವಾಬ್ದಾರಿ ಹೇಳಿಕೆ ನೀಡ್ತಾ ತಾವು ಗೃಹ ಸಚಿವ ಅನ್ನೋದನ್ನೇ ಮರೆತಿದ್ದಾರೆ. ಅನ್ಯಾಯದ ವಿರುದ್ಧ ಮಾತಾಡಿದ್ದಕ್ಕೆ ಸಂತೋಷ್ ಕೊಲೆಯಾಗಿದ್ದಾನೆ. ಇನ್ನೆಷ್ಟು ಕೊಲೆ ಆಗಬೇಕು ಅಂತ ಸಿಎಂ ಹಾಗೂ ಗೃಹ ಸಚಿವರ ಮನಸ್ಸಿನಲ್ಲಿ ಇದೆಯೋ ಗೊತ್ತಿಲ್ಲ. ಜನರೇ ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು ಅಂದ್ರು. ಇದನ್ನೂ ಓದಿ: ಬಿಜೆಪಿಯವರು ಸತ್ತ ಮೇಲೆ ಎಲ್ಲರನ್ನೂ ಪಕ್ಷಕ್ಕೆ ಸೇರಿಸುತ್ತಾರೆ: ರಾಮಲಿಂಗಾ ರೆಡ್ಡಿ ವ್ಯಂಗ್ಯ

BSY 2

ಸಚಿವ ಯುಟಿ ಖಾದರ್ ಮನೆಯಲ್ಲಿ ಸಿಎಂ ಇದ್ರೂ, ಸಂತೋಷ್ ಮನೆಗೆ ಭೇಟಿ ನೀಡಿಲ್ಲ. ಸಿದ್ದರಾಮಯ್ಯರಿಗೆ ಕನಿಕರ, ಸೌಜನ್ಯ ಎಲ್ಲಾ ಮರೆತು ಹೋಗಿದೆ. ಸಿದ್ದರಾಮಯ್ಯ ಆರೂವರೆ ಕೋಟಿ ಜನರ ಮುಖ್ಯಮಂತ್ರಿ ಅನ್ನೋದು ಮರೆತಿದ್ದಾರೆ. ಪಕ್ಕದಲ್ಲೇ ಇದ್ರೂ ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳುವ ಸಮಯ ಅವರಿಗಿಲ್ಲ. ಸಿದ್ದರಾಮಯ್ಯ ನಡವಳಿಕೆ ಜನರು ನೋಡ್ತಿದ್ದಾರೆ. ಬೇಜಾವಾಬ್ದಾರಿ ಮುಖ್ಯಮಂತ್ರಿ ರಾಜ್ಯ ಆಳ್ತಿದ್ದಾರೆ. ಇನ್ನು ಮೂರು ತಿಂಗಳು ಇದನ್ನ ಸಹಿಸಿಕೊಳ್ಳಬೇಕು. ಜನರೇ ಇವರಿಗೆ ಮುಂದೆ ಪಾಠ ಕಲಿಸ್ತಾರೆ ಅಂತ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಬಂಟಿಂಗ್ಸ್ ಗಲಾಟೆಗೆ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ: ಪ್ರತಾಪ್ ಸಿಂಹ

BSY 3

ಜೆ.ಸಿ. ನಗರದ ನಿವಾಸಿಯಾಗಿರೋ 28 ವರ್ಷದ ಸಂತೋಷ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು, ಬಿಜೆಪಿ ಪರ ಓಡಾಡಿಕೊಂಡಿದ್ದರು. ಬುಧವಾರ ರಾತ್ರಿ ಸುಮಾರು 7:30 ರ ಹೊತ್ತಿಗೆ ಸಂತೋಷ್ ತಮ್ಮ ಮನೆ ಬಳಿ ಇದ್ದ ಬೇಕರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಅದೇ ಏರಿಯಾದ ವಾಸಿಮ್, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಎಂಬವರು ಕೂಡ ಅಲ್ಲೇ ಟೀ ಕುಡಿಯುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ನಡೆದು ವಾಸಿಮ್ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಇರಿದಿದ್ದ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದರು. ಸದ್ಯ ಪ್ರಕರಣ ಸಂಬಂಧ ವಾಸಿಂ, ಫಿಲಿಪ್ಸ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತನ ಕಗ್ಗೊಲೆ – ಗಾಂಜಾ ಸೇದಬೇಡಿ ಅಂದಿದ್ದಕ್ಕೆಯೇ ಹತ್ಯೆ!

https://www.youtube.com/watch?v=WeYiwlokXEU

BJP MURDER 12

BIP MURDER 11

BJP MURDER 1

TAGGED:bengalurubs yeddyurappacm siddaramaiahpublictvSanthoshಪಬ್ಲಿಕ್ ಟಿವಿಬಿಎಸ್ ಯಡಿಯೂರಪ್ಪಬೆಂಗಳೂರುಸಂತೋಷ್ಸಿಎಂ ಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema Updates

Mangli 2
ಬರ್ತ್‌ಡೇ ಪಾರ್ಟಿಯಲ್ಲಿ ಇದ್ದಿದ್ದು ಬರೀ ಲೋಕಲ್‌ ಡ್ರಿಂಕ್ಸ್‌ ಮಾತ್ರ – ಮಂಗ್ಲಿ ಸ್ಪಷ್ಟನೆ
1 hour ago
Singer Mangli
ಮಂಗ್ಲಿ ಬರ್ತ್‍ಡೇ ಪಾರ್ಟಿ ಮೇಲೆ ದಾಳಿ – ಮಾದಕ ವಸ್ತು ಪತ್ತೆ, ಪೊಲೀಸರಿಗೆ ಆವಾಜ್ ಹಾಕಿದ ಗಾಯಕಿ!
17 hours ago
Katrina Kaif
ಭಾರತದ ಜೊತೆ ಸಂಘರ್ಷ ನಡೆಸಿದ್ದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಕತ್ರಿನಾ ಕೈಫ್‌ ರಾಯಭಾರಿ
1 day ago
ZEE Kannada 2
ಹೊಸ ಅಧ್ಯಾಯಕ್ಕೆ ʻಜೀ ಕನ್ನಡʼ ಮುನ್ನುಡಿ…
2 days ago

You Might Also Like

Siddaramaiah and Chandrababu Naidu
Bengaluru City

ರಾಜ್ಯದ ತೋತಾಪುರಿ ಮಾವು ಬೆಲೆ ಕುಸಿತ – ಆಂಧ್ರ ಸಿಎಂಗೆ ಸಿದ್ದರಾಮಯ್ಯ ಪತ್ರ

Public TV
By Public TV
11 minutes ago
USA Pakistan
Latest

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ

Public TV
By Public TV
9 minutes ago
Weather 1
Bengaluru City

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ – ಜೂ.15 ರವರೆಗೆ ಭಾರೀ ಮಳೆ ಮುನ್ಸೂಚನೆ

Public TV
By Public TV
60 minutes ago
Bellary ED Raid
Bellary

ಗಣಿ ನಾಡಲ್ಲಿ ‘ಕೈ’ ನಾಯಕರ ಬೆವರಿಳಿಸಿದ ಇಡಿ – ಮಹತ್ವದ ದಾಖಲೆಗಳು ವಶಕ್ಕೆ

Public TV
By Public TV
1 hour ago
KRS Toll Price Hike
Districts

ಕೆಆರ್‌ಎಸ್ ವೀಕ್ಷಣೆಗೆ ಬರುವ ಪ್ರವಾಸಿಗರ ಜೇಬಿಗೆ ಕತ್ತರಿ – 500 ಮೀ. ಸೇತುವೆ ದಾಟಲು 200 ರೂ.

Public TV
By Public TV
2 hours ago
weather
Chikkamagaluru

ಕರಾವಳಿ ಭಾಗದಲ್ಲಿ ಮಳೆಯ ಆರ್ಭಟ – ಉತ್ತರ ಕನ್ನಡದಲ್ಲಿ ಇಂದು ಶಾಲೆಗಳಿಗೆ ರಜೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?