ಬೆಂಗಳೂರು: ಬುಧವಾರ ರಾತ್ರಿ ನಡೆದ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಶಾಸಕರ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಲೇ ಇಲ್ಲ ಎಂಬ ಮಾತು ಕೇಳಿ ಬಂದಿದೆ.
ಸಭೆ ಕೇವಲ ರಾಜ್ಯಸಭಾ ಚುನಾವಣೆಗೆ ಸೀಮಿತ ಎಂದು ಕಳಕಪ್ಪ ಬಂಡಿಯನ್ನು ಸುಮ್ಮನೆ ಕೂರಿಸಿದ ಪ್ರಸಂಗ ನಡೆದಿದೆ. ಕ್ಷೇತ್ರದ ಬಗ್ಗೆ ದನಿ ಎತ್ತಲು ಕಳಕಪ್ಪ ಬಂಡಿ ಎದ್ದು ನಿಂತಾಗ ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ಕಟೀಲ್ ಮಧ್ಯಪ್ರವೇಶ ಮಾಡಿ ಸುಮ್ಮನಿರಿಸಿದ್ದಾರೆ. ಇದನ್ನೂ ಓದಿ: ಸಂಖ್ಯೆ 19 ರಲ್ಲಿದೆ ಲೆಹರ್ ಸಿಂಗ್ ಗೆಲುವಿನ ಸೀಕ್ರೆಟ್
ಇಂದಿನ ಸಭೆ ಕೇವಲ ರಾಜ್ಯಸಭಾ ಚುನಾವಣೆಗೆ ಸೀಮಿತ. ರಾಜ್ಯಸಭಾ ಚುನಾವಣೆ ಸಮಯದಲ್ಲಿ ಕ್ಷೇತ್ರದ ಬೇರೆ ವಿಚಾರ ಚರ್ಚೆ ಮಾಡುವುದು ಬೇಡ. ಇದರಿಂದ ನಕಾರಾತ್ಮಕ ಸಂದೇಶ, ಸುದ್ದಿ ಹೊರಗೆ ಹೋಗುತ್ತದೆ. ವಿಪಕ್ಷಗಳಿಗೂ ಇದು ಆಹಾರ ಆಗಬಾರದು ಎಂದು ಸಿಎಂ ಮತ್ತು ಕಟೀಲ್ ಹೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.