Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಣ್ಮನ ಸೆಳೆಯುತ್ತಿವೆ ಕಾಡಿನ ರೈತ ಪಕ್ಷಿಗಳ ಉತ್ಸವ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಣ್ಮನ ಸೆಳೆಯುತ್ತಿವೆ ಕಾಡಿನ ರೈತ ಪಕ್ಷಿಗಳ ಉತ್ಸವ

Districts

ಕಣ್ಮನ ಸೆಳೆಯುತ್ತಿವೆ ಕಾಡಿನ ರೈತ ಪಕ್ಷಿಗಳ ಉತ್ಸವ

Public TV
Last updated: February 4, 2018 4:11 pm
Public TV
Share
3 Min Read
KWR BIRDS
SHARE

ಕಾರವಾರ: ಬೆಳೆಯುತ್ತಿರುವ ನಾಗರೀಕತೆಯಲ್ಲಿ ಪ್ರಾಣಿ ಪಕ್ಷಿಗಳ ಸಂತತಿ ನಾಶವಾಗುತ್ತಿವೆ. ಮುಂದಿನ ಪೀಳಿಗೆಗಳಿಗೆ ಚಿತ್ರಪಟದಲ್ಲಿ ಪಕ್ಷಿ ಪ್ರಾಣಿಗಳ ಫೋಟೋಗಳನ್ನು ತೋರಿಸಿ ಸಮಾಧಾನ ಪಟ್ಟುಕೊಳ್ಳುವ ಪರಿಸ್ಥಿತಿ ಬಂದಿದೆ. ಇಂತಹ ಕಾಲಘಟ್ಟದಲ್ಲಿ ಪ್ರಾಣಿ ಪಕ್ಷಿಗಳನ್ನ ರಕ್ಷಣೆ ಮಾಡುವ ಹೊಣೆ ನಮ್ಮದು.

ಇದೇ ಮೊದಲ ಬಾರಿಗೆ ಹಾರ್ನ್ ಬಿಲ್ ಉತ್ಸವವನ್ನು ಅರಣ್ಯ ಇಲಾಖೆ ಆಯೋಜನೆ ಮಾಡಿತ್ತು. ದೇಶದಲ್ಲಿಯೇ ಅವಸಾನದ ಅಂಚಿನಲ್ಲಿರುವ ಈ ಹಾರ್ನ್‍ಬಿಲ್ ಗಳು ಕಾಳಿ ನದಿಯ ಪ್ರದೇಶವಾದ ದಾಂಡೇಲಿಯ ದಟ್ಟ ಕಾಡಿನಲ್ಲಿ ತಮ್ಮ ಬದುಕು ರೂಪಿಸಿಕೊಂಡಿವೆ.

KWR BIRDS 1

ಕಾಡಿನ ರೈತ ಎಂದೇ ಪ್ರಸಿದ್ಧವಾಗಿರುವ ಈ ಹಕ್ಕಿಗಳ ನಾಲ್ಕು ಪ್ರಬೇಧಗಳು ಈ ಭಾಗದಲ್ಲಿ ನೋಡಲು ಸಿಗುತ್ತವೆ. ಹೀಗಾಗಿ ಪಕ್ಷಿ ಪ್ರಿಯರಿಗಾಗಿ ಅರಣ್ಯ ಇಲಾಖೆ ಮೂರು ದಿನಗಳ ಹಾರ್ನ್ ಬಿಲ್ ಉತ್ಸವ ಮಾಡುವ ಮೂಲಕ ಪಕ್ಷಿ ಪ್ರಿಯರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸೆಳೆಯುತ್ತಿದೆ. ಪಕ್ಷಿವೀಕ್ಷಣೆ, ಛಾಯಾಚಿತ್ರ ಪ್ರದರ್ಶನ ಮತ್ತು ಮಾಹಿತಿ ಕಾರ್ಯಗಾರವನ್ನು ಮೂರು ದಿನಗಳವರೆಗೆ ಆಯೋಜನೆ ಮಾಡಿದ್ದಾರೆ.

ಹಾರ್ನ್ ಬಿಲ್ ಪಕ್ಷಿಯ ಮಹತ್ವವೇನು?
ಗ್ರೇಟ್ ಹಾರ್ನ್ ಬಿಲ್ (ಬ್ಯುಸೆರೊಸ್ ಬೈಕಾರ್ ನಿಸ್), ಇದನ್ನು ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ (ಬಣ್ಣಬಣ್ಣದ ಮಹಾ ಹಾರ್ನ್ ಬಿಲ್) ಎಂದು ಕೂಡ ಕರೆಯಲಾಗುತ್ತದೆ. ಕನ್ನಡದಲ್ಲಿ `ಮಂಗಟ್ಟೆ’ ಎಂದು ಕರೆಯುತ್ತಾರೆ. ಹಾರ್ನ್ ಬಿಲ್ ಕುಟುಂಬದ ದೊಡ್ಡ ಪ್ರಭೇದಗಳ ಪೈಕಿ ಇದು ಒಂದಾಗಿದೆ. ಗ್ರೇಟ್ ಹಾರ್ನ್ ಬಿಲ್ ಭಾರತ, ಮಲಯ್ ಪರ್ಯಾಯ ದ್ವೀಪ ಮತ್ತು ಸುಮಾತ್ರಾ, ಇಂಡೋನೇಷ್ಯಾದ ಅರಣ್ಯಗಳಲ್ಲಿ ಕಂಡುಬರುತ್ತದೆ. ಅವುಗಳ ಆಕರ್ಷಕ ಗಾತ್ರ ಮತ್ತು ಬಣ್ಣ ಅನೇಕ ಬುಡಕಟ್ಟು ಜನಾಂಗದ ಸಂಸ್ಕೃತಿಗಳಲ್ಲಿ ಮತ್ತು ಆಚರಣೆಗಳಲ್ಲಿ ಅವುಗಳನ್ನು ಪ್ರಮುಖವಾಗಿಸಿವೆ.

KWR BIRDS 2

ಗ್ರೇಟ್ ಹಾರ್ನ್ ಬಿಲ್ ದೀರ್ಘಕಾಲದವರೆಗೆ ಜೀವಿಸುವ ಪಕ್ಷಿಯಾಗಿದ್ದು, 50 ವರ್ಷಗಳವರೆಗೆ ಬದುಕುಳಿಯುತ್ತವೆ. ಇವುಗಳು ಹೆಚ್ಚಾಗಿ ಫಲಾಹಾರಿಗಳಾದರೂ ಕೂಡ ಇವು ಅನುಕೂಲವರ್ತಿಗಳಾಗಿದ್ದು, ಸಣ್ಣ ಸಸ್ತನಿ, ಸರೀಸೃಪ ಮತ್ತು ಪಕ್ಷಿಗಳನ್ನು ಬೇಟೆಯಾಡುತ್ತವೆ. ಇವುಗಳು ಸೇವಿಸಿದ ಹಣ್ಣುಗಳು ಅದರ ಹಿಕ್ಕಿಯಿಂದ ಬೀಜವಾಗಿ ಸಸಿಗಳಾಗಿ ಅರಣ್ಯ ಹೆಚ್ಚಲು ಕಾರಣವಾಗಿದೆ. ಈ ಕಾರಣದಿಂದ ಅರಣ್ಯದ ರೈತ ಎಂಬ ಹೆಸರು ಕೂಡ ಈ ಪಕ್ಷಿಗಳ ಹೆಗ್ಗಳಿಕೆಗೆ ಸೇರಿಕೊಂಡಿವೆ. ಸ್ಥಳೀಯ ಜನರು ಇವುಗಳ ಬೇಟೆಯಾಡಿ ಮಾಂಸ ಹಾಗೂ ಔಷಧಕ್ಕೆ ಬಳಕೆ ಮಾಡುತ್ತಿದ್ದರು.

ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನಾಲ್ಕು ಪ್ರಬೇಧಗಳಿವೆ. ಇವುಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದಲ್ಲಿ ಹೆಚ್ಚು ಕಂಡುಬರುತ್ತವೆ. ಈ ಕಾರಣದಿಂದ 2008 ರಲ್ಲಿ ಹಾರ್ನ್ ಬಿಲ್ ರಕ್ಷಿತ ಪ್ರದೇಶವಾಗಿ ಈ ಭಾಗವನ್ನು ಘೋಷಿಸಲಾಗಿದೆ. ಇದಲ್ಲದೇ ಪರಿಸರ ಪ್ರಿಯರು ಈ ಭಾಗದಲ್ಲಿ ಇವುಗಳ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷವೂ ಅರಣ್ಯ ಇಲಾಖೆ ಪಕ್ಷಿಗಳ ವೀಕ್ಷಣೆಗಾಗಿ ಅವಕಾಶ ಮಾಡಿಕೊಡುತ್ತಿದ್ದು, ಬರ್ಡ್ ವಾಚ್ ಕಾರ್ಯಗಾರಗಳನ್ನು ಮಾಡುವ ಮೂಲಕ ಅನೇಕ ಹೊಸ ಪಕ್ಷಿಗಳನ್ನ ಈ ಭಾಗದಲ್ಲಿ ಗುರುತಿಸಿವೆ. ಅವಸಾನದ ಅಂಚಿಗೆ ತಲುಪಿರುವ ಈ ಹಾರ್ನ್ ಬಿಲ್‍ಗಳನ್ನು ರಕ್ಷಿಸುವ ಸಲವಾಗಿ ಇವುಗಳಿಗೆ ಬೇಕಾದ ಪೂರಕ ವಾತಾವರಣಕ್ಕೆ ತೊಂದರೆಯಾಗದಂತೆ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡು ಸಂತತಿ ರಕ್ಷಿಸುವಲ್ಲಿ ಪ್ರಯತ್ನಿಸುತ್ತಿದೆ.

KWR BIRDS 4

ಈ ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ರಕ್ಷಣೆಗಾಗಿ ಹಾರ್ನ್ ಬಿಲ್ ಉತ್ಸವ ಆಯೋಜನೆ ಮಾಡಿದ್ದು, ದೇಶ ವಿದೇಶದಿಂದ 150 ಕ್ಕೂ ಹೆಚ್ಚು ಪಕ್ಷಿ ವೀಕ್ಷಕರು ಹಾಗೂ ವನ್ಯ ಜೀವಿ ಛಾಯಾಗ್ರಾಹಕರು ಕಳೆದ ಮೂರು ದಿನಗಳಲ್ಲಿ ಉತ್ಸವದಲ್ಲಿ ಭಾಗವಹಿಸಿ ಮಂಗಟ್ಟೆ ಹಕ್ಕಿಯ ಮಧುರ ಕ್ಷಣಗಳನ್ನು ಯಾಂತ್ರಿಕ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಆಸಕ್ತಿ ಇದ್ದರೂ ಬಿಡುವಿಲ್ಲದೆ ಪಕ್ಷಿ ವೀಕ್ಷಣೆಯನ್ನು ಮಿಸ್ ಮಾಡಿಕೊಂಡವರಿಗಾಗಿ ವನ್ಯಜೀವಿ ಛಾಯಾಗ್ರಾಹಕ ಕೈಗಾದ ಪುಟ್ಟರಾಜುರವರು ತೆಗೆದ ಕೆಲವು ಅಪರೂಪದ ಚಿತ್ರಗಳನ್ನು ನಾವಿಲ್ಲಿ ನೀಡಿದ್ದೇವೆ. ಮುಂದಿನ ಬಾರಿ ನೀವೂ ಈ ಸ್ಥಳಕ್ಕೆ ಬಂದು ವೀಕ್ಷಿಸಬಹುದು. ಪಕ್ಷಿ ಪ್ರಿಯರಿಗೆ ಅರಣ್ಯ ಇಲಾಖೆ ಜಂಗಲ್ ರೆಸಾರ್ಟ್ ನಿಂದ ಹಿಡಿದು ಖಾಸಗಿ ಹೋಂ ಸ್ಟೇ ವ್ಯವಸ್ಥೆಗಳಿವೆ. ಆನ್‍ಲೈನ್ ನಲ್ಲಿ ಕೂಡ ಬುಕ್ ಮಾಡಿ ಬಿಡುವು ಮಾಡಿಕೊಂಡು ಹೋಗಬಹುದು. ಇದಲ್ಲದೇ ಕಾಳಿ ನದಿಯಲ್ಲಿ ಜಲಕ್ರೀಡೆ, ವನ್ಯಜೀವಿ ವೀಕ್ಷಣೆಗೂ ಅವಕಾಶವಿದೆ.

KWR BIRDS 19

KWR BIRDS 20

KWR BIRDS 18

KWR BIRDS 17

KWR BIRDS 15

KWR BIRDS 13

KWR BIRDS 12

KWR BIRDS 10

KWR BIRDS 9

KWR BIRDS 8

KWR BIRDS 6

KWR BIRDS 5

KWR BIRDS 3

TAGGED:festivalforest departmentHornbillkarwarPublic TVಅರಣ್ಯ ಇಲಾಖೆಉತ್ಸವಕಾರವಾರಪಬ್ಲಿಕ್ ಟಿವಿಹಾರ್ನ್ ಬಿಲ್
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

4 Of Mumbai Family Die Of Suspected Food Poisoning After Eating Biryani Watermelon
Crime

ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
2 minutes ago
Auto
Latest

ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ ಆದೇಶಕ್ಕೆ 6 ತಿಂಗಳ ಬ್ರೇಕ್ ಹಾಕಿದ `ಮಹಾ’ ಸರ್ಕಾರ

Public TV
By Public TV
5 minutes ago
H.S Shivashankar
Davanagere

ಶ್ರೀಗಳನ್ನು ಎಳೆದು ಹೊರಗೆ ಹಾಕ್ತಾರಂತೆ, ತಾಕತ್‌ ಇದ್ರೆ ಮುಟ್ಟಿ – ಟ್ರಸ್ಟಿಗಳಿಗೆ ಹೆಚ್.ಎಸ್ ಶಿವಶಂಕರ್ ಎಚ್ಚರಿಕೆ

Public TV
By Public TV
13 minutes ago
mangaluru cooker blast case auto driver
Dakshina Kannada

ಉಗ್ರ ಶಾರಿಕ್‌ಗೆ ಜೀವಾವಧಿ ಶಿಕ್ಷೆ ನೀಡಬೇಕಿತ್ತು: ಕುಕ್ಕರ್‌ ಬ್ಲಾಸ್ಟ್‌ನಿಂದ ಗಾಯಗೊಂಡಿದ್ದ ಆಟೋ ಚಾಲಕ ಮಾತು

Public TV
By Public TV
1 hour ago
E Khata
Bengaluru City

ಇನ್ಮುಂದೆ ಆನ್‌ಲೈನ್ ಮೂಲಕವೇ ಇ-ಖಾತಾ ಡೌನ್‌ಲೋಡ್‌ಗೆ ಅವಕಾಶ

Public TV
By Public TV
1 hour ago
Mangaluru Blast Case The Shariq cooker bomb capable of blowing up the bus FSL Investigation report 1
Bengaluru City

ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಕೇಸ್‌ – ಉಗ್ರ ಶಾರಿಕ್‌ಗೆ 10 ವರ್ಷ ಜೈಲು ಶಿಕ್ಷೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?