ಈ ಬಾರಿ ಬಿಗ್ ಬಾಸ್ (Bigg Boss Kannada) ಟ್ರೋಫಿ ನಟಿ ಸಂಗೀತಾ ಶೃಂಗೇರಿ (Sangeetha Sringeri) ಸಿಗಲಿದೆ ಎಂದೇ ನಂಬಲಾಗಿತ್ತು. ಮೊದಲ ದಿನದಂದು ಕೊನೆಯ ವಾರದವರೆಗೂ ಸಂಗೀತಾ ಉತ್ತಮ ರೀತಿಯಲ್ಲೇ ಸ್ಪರ್ಧೆ ನೀಡಿದ್ದರು. ಲೇಡಿ ರೆಬಲ್ ಅಂತಾನೇ ಫೇಮಸ್ ಆಗಿದ್ದರು. ಜೊತೆಗೆ ಫಿನಾಲೆಗೆ ಆಯ್ಕೆಯಾದ ಮೊದಲ ಕಂಟೆಸ್ಟ್ ಅವರಾಗಿದ್ದರು. ಹಾಗಾಗಿ ಸಂಗೀತಾನೇ ಈ ಬಾರಿಯ ವಿನ್ನರ್ ಎಂದು ಹೇಳಲಾಗಿತ್ತು. ಕೊನೆಯ ಕ್ಷಣದಲ್ಲಿ ಚಿತ್ರವಣೇ ಬದಲಾಗಿದೆ.
ಈ ಕುರಿತಂತೆ ಸಂಗೀತಾ ಶೃಂಗೇರಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಟ್ರೋಫಿ ಗೆಲ್ಲದೇ ಇರುವ ಕುರಿತಂತೆಯೂ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್ ಬಾಸ್ ಜರ್ನಿ, ಜನರ ಪ್ರೀತಿ ಹಾಗೂ ತಮ್ಮ ಮೇಲೆ ಇಟ್ಟಂತೆ ನಂಬಿಕೆಯ ಬಗ್ಗೆ ಅವರು ವಿವರವಾಗಿ ಬರೆದುಕೊಂಡಿದ್ದಾರೆ.
ನನ್ನ ಪ್ರೀತಿಯ ಅಭಿಮಾನಿಗಳಿಗೆ, ಪ್ರೋತ್ಸಾಹಕರಿಗೆ, ಕನ್ನಡದ ಜನೆತೆಗೆ ನಿಮ್ಮ ಸಂಗೀತಾ ಮಾಡುವ ನಮಸ್ಕಾರಗಳು. ಎಲ್ಲಾ ಹೇಗಿದ್ದೀರಿ? ನಮ್ಮ ಬಿಗ್ ಬಾಸ್ ಹೇಗಿತ್ತು? ನನ್ನ ಬಿಗ್ ಬಾಸ್ ಜರ್ನಿ ಅಂತೂ ನಿಮಗೆ ಗೊತ್ತೇ ಇದೆ. ಆದರೆ, ನೀವು ಇಲ್ಲಿ ನನಗೆ ಕೊಟ್ಟ ಪ್ರೀತಿ ಸಹಕಾರ ಈಗ ತಿಳಿಯುತ್ತಿರುವ ನನಗೆ, ನಿಮಗೆ ಹೇಗೆ ನನ್ನ ಧನ್ಯವಾದ ಅರ್ಪಿಸಲಿ ತಿಳಿಯದಾಗಿದೆ. ನನ್ನ ಬೆನ್ನೆಲುಬಾಗಿ ನಿಂತ ನಿಮ್ಮ ಪ್ರೀತಿಯ ಪ್ರೋತ್ಸಾಹಕ್ಕೆ ನಾನು ಎಂದಿಗೂ ಆಭಾರಿ. ಬಿಗ್ ಬಾಸ್ ಟ್ರೋಫಿ ನನಗೆ ಸಿಗದಿರಬಹುದು, ನಿಮ್ಮ ಪ್ರೀತಿ ನನಗೆ ನಿಜವಾದ ಗೆಲುವನ್ನೇ ತಂದುಕೊಟ್ಟಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ಬಾರಿ ಪ್ರಬಲ ಕಂಟೆಸ್ಟೆಂಟ್ ಆಗಿದ್ದ ವಿನಯ್ ಅವರಿಗೆ ಸರಿಯಾದ ರೀತಿಯಲ್ಲಿ ಠಕ್ಕರ್ ಕೊಟ್ಟಿದ್ದು ಸಂಗೀತಾ. ವಾರದಿಂದ ವಾರಕ್ಕೆ ಅನೇಕ ರೀತಿಯಲ್ಲಿ ಬದಲಾದ ಮೊದಲ ಕಂಟೆಸ್ಟೆಂಟ್ ಕೂಡ ಇವರಾಗಿದ್ದಾರೆ. ಆದರೆ, ಮೂರನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ.