Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
BELAKU

ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

Public TV
Last updated: April 22, 2017 5:57 pm
Public TV
Share
3 Min Read
KWR 3
SHARE

ಕಾರವಾರ: ಮುಪ್ಪು ಆವರಿಸಿದಾಗ ಮಕ್ಕಳು ತಮ್ಮ ಆಸರೆಗೆ ಇರಬೇಕು ಎಂದು ಪ್ರತಿಯೊಬ್ಬ ಹೆತ್ತವರು ಬಯಸುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೇರಿ ಗ್ರಾಮದಲ್ಲಿರುವ ಕುಟುಂಬದಲ್ಲಿ ಬೆಳೆದು ನಿಂತ ಮೂವರು ಮಕ್ಕಳನ್ನ ಕಡು ಬಡತನದ ಮುಪ್ಪಿನಲ್ಲೂ ಪೊಷಕರೇ ನೋಡಿಕೊಳ್ಳಬೇಕಾದ ಸ್ಥಿತಿಯಿದೆ. ಎಂಡೋಸಲ್ಫಾನ್ ನಿಂದಾಗಿ ಮೂವರು ಮಕ್ಕಳಿಗೆ ಬುದ್ದಿಮಾಂದ್ಯತೆ ಆವರಿಸಿದ್ದು ಈ ಕುಟುಂಬದ ಬೆಳಕನ್ನೇ ಕಿತ್ತುಕೊಂಡಿದೆ.

kwr 1

ಕಿತ್ತು ತಿನ್ನುವ ಬಡತನದ ಸ್ಥಿತಿಯಲ್ಲೂ ತನ್ನ ಮೂವರು ಮಕ್ಕಳನ್ನು ಸಾಕಿ ಸಲುಹುತ್ತಿರುವ 52 ವರ್ಷದ ತಾಯಿ ವತ್ಸಲಾ. ತಂದೆ ಚಂದ್ರಕಾಂತ್ ಲಕ್ಷ್ಣಣ್ ಶೇಟ್ ವಯಸ್ಸು 60. ವತ್ಸಲಾ ಮತ್ತು ಚಂದ್ರಕಾಂತ್ ದಂಪತಿ ತಮ್ಮ ಮೂವರು ಮಕ್ಕಳಾದ ನಾಗರಾಜ್, ಹೇಮಲತಾ, ಜಗದೀಶ್ ಎಂಬುವವರೊಂದಿಗೆ ವಾಸವಾಗಿದ್ದಾರೆ. ಇನ್ನು ಈ ಕುಟುಂಬ ಜೀವನೋಪಯಾಕ್ಕಾಗಿ ಕೂಲಿ ಕೆಲಸವನ್ನು ನಂಬಿಕೊಂಡಿದೆ. ಲಕ್ಷ್ಮಣ್ ಅವರು ಚೀರೆಕಲ್ಲು ಕೋರೆಯಲ್ಲಿ ಕಲ್ಲು ಕೀಳುವ ಕೆಲಸ ಮಾಡಿದರೆ, ವತ್ಸಲಾ ಸಹ ಮಕ್ಕಳ ಆರೈಕೆ ಜೊತೆ ಕೂಲಿ ಕೆಲಸ ಮಾಡುತ್ತಾರೆ.

ಈ ಕುಟುಂಬಕ್ಕೆ ಇರಲು ಸಹ ಒಂದು ಸ್ವಂತ ಮನೆಯಿಲ್ಲ. ಅರಣ್ಯ ಒತ್ತುವರಿ ಪ್ರದೇಶದಲ್ಲಿ ಚಿಕ್ಕ ಗೂಡನ್ನ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ದಂಪತಿಗೆ ಮೊದಲು ಒಂದು ಗಂಡುಮಗುವಿನ ಜನನವಾಯ್ತು. ಆದ್ರೆ ಆ ಮಗು ಎಂಡೋಸಲ್ಫಾನ್ ನಿಂದ ಬುದ್ದಿಮಾಂದ್ಯತೆಯಿಂದ ಹುಟ್ಟಿರುವುದನ್ನ ವೈದ್ಯರು ತಿಳಿಸಿದ್ರು. ಹೀಗಾಗಿ ಒಂದರ ಮೇಲಂತೆ ಮೂರು ಮಕ್ಕಳು ಜನಿಸಿದ್ರೂ ಎಲ್ಲಾ ಮಕ್ಕಳೂ ಬುದ್ದಿಮಾಂದ್ಯರಿದ್ದು ಇದರಲ್ಲಿ 31 ವರ್ಷದ ಹೇಮಲತಾ ಹಾಗೂ 29 ವರ್ಷದ ಜಗದೀಶ್ ಬುದ್ದಿಮಾಂದ್ಯತೆಯ ಜೊತೆಯಲ್ಲಿ ಇರುಳುಗಣ್ಣಿನ ಸಮಸ್ಯೆ ಯಿಂದ ಬಳಲಿದ್ರೆ 33 ವರ್ಷದ ಹಿರಿಯ ಮಗ ನಾಗರಾಜ್ ಬುದ್ದಿಮಾಂದ್ಯತೆಯನ್ನ ಹೊಂದಿದ್ದು ಇವರನ್ನ ನೋಡಿಕೊಳ್ಳುವ ಹೊಣೆಭಾರ ವತ್ಸಲಾ ಮೇಲಿದೆ.

KWR 1

ವಯೋಸಹಜ ಅನಾರೋಗ್ಯ: ಒಂದರ ನಂತರ ಹುಟ್ಟಿದ ಮೂರು ಮಕ್ಕಳೂ ಸಹ ಎಂಡೋಸಲ್ಫಾನ್ ಕಾಯಿಲೆಯಿಂದ ಬಳಲುತ್ತಿದ್ದರೆ, ಮನೆಯ ಯಜಮಾನ ಚಂದ್ರಕಾಂತ್ ಚಿಕ್ಕ ಅಪಘಾತದಲ್ಲಿ ಕೈಗೆ ಪೆಟ್ಟಾಗಿ ರಾಡನ್ನ ಹಾಕಿಸಿಕೊಳ್ಳಬೇಕಾಯ್ತು, ಇನ್ನು ಸರ್ಕಾರ ಚೀರೇಕಲ್ಲಿನ ಗಣಿಗಾರಿಕೆ ನಿಷೇಧಿಸಿದ್ದರಿಂದ ಇರುವ ಕೆಲಸವೂ ಇಲ್ಲದಂತಾಗಿದೆ. ಜೊತೆಯಲ್ಲಿ ಇಬ್ಬರಿಗೂ ವಯೋಸಹಜತೆಯಿಂದಾಗಿ ಆರೋಗ್ಯ ಹದಗೆಟ್ಟಿದ್ದು ಇಬ್ಬರೂ ಕೆಲಸ ಮಾಡಲು ಸಾಧ್ಯವಾಗದೇ ಮನೆಯಲ್ಲಿರುವಂತೆ ಮಾಡಿದೆ. ಒಂದು ಕಡೆ ಬೆಳದು ನಿಂತ ಈ ಮಕ್ಕಳ ಪೋಷಣೆ ಇನ್ನೊಂದೆಡೆ ತಮ್ಮ ನಂತರ ಇವರ ಪಾಲನೆಯ ಚಿಂತೆ ಹೀಗೆ ಎಂದು ಚಂದ್ರಕಾಂತ್ ಮತ್ತು ವತ್ಸಲಾ ದಂಪತಿ ಚಿಂತೆಯಲ್ಲಿದ್ದಾರೆ.

kwr 2

ಹುಸಿ ಭರವಸೆ: ಇವರಿಗೆ ಸ್ಥಳೀಯ ಶಾಸಕರಿಂದ ಹಿಡಿದು ಕೆಲವು ರಾಜಕಾರಣಿಗಳು ಸಹಾಯ ಮಾಡುವ ಭರವಸೆ ನೀಡಿದ್ರು. ಆದ್ರೆ ಕೇವಲ ಪ್ರಚಾರಕ್ಕೆ ಇವರನ್ನ ಬಳಸಿಕೊಂಡು ನಂತರ ಯಾವ ಸಹಾಯವನ್ನೂ ಮಾಡಲಿಲ್ಲ. ಇನ್ನು ಕೂಲಿ ಕೆಲಸ ಮಾಡುತಿದ್ದ ಇವರಿಗೆ ಆರೋಗ್ಯ ಹದಗೆಟ್ಟು ಜೀವನ ನೆಡೆಸದಷ್ಟು ಸಂಕಷ್ಟ ಎದುರಾಗಿದೆ. ಜೊತೆಯಲ್ಲಿ ಜೀವನ ಸಾಗಿಸಲು ಇದ್ದ ಮನೆಕೂಡ ಶಿಥಿಲಾವಸ್ಥೆ ತಲುಪಿದ್ದು ಆಗಲೋ ಈಗಲೂ ಬೀಳುವ ಸ್ಥಿತಿಯಲ್ಲಿದೆ.

ಪುಟ್ಟ ಅಂಗಡಿಯ ಕನಸು: ಮೂರು ಮಕ್ಕಳ ವೈದ್ಯಕೀಯ ವೆಚ್ಚ ನೋಡಿಕೊಲ್ಳಲು ಕಷ್ಟವಾಗುತಿದ್ದು, ಸರ್ಕಾರದಿಂದ ಬರುತ್ತಿರುವ ಸಹಾಯ ಹಣವೂ ಸಾಲುತಿಲ್ಲ. ತಮ್ಮ ಆರೋಗ್ಯ ಹದಗೆಡುತ್ತಿರುವುದರಿಂದ ಮೂರು ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಇವರನ್ನ ಕಾಡುತ್ತಿದೆ. ಊರಿನಲ್ಲಿ ಚಿಕ್ಕದೊಂದು ಅಂಗಡಿ ಇಟ್ಟು ಮಕ್ಕಳ ಭವಿಷ್ಯ ರೂಪಿಸುವುದರ ಜೊತೆ ತಮ್ಮ ಬದುಕು ಕಟ್ಟಿಕೊಳ್ಳು ಹಂಬಲ ಈ ದಂಪತಿಯದು. ಹೀಗಾಗಿ ಬೆಳಕು ಕಾರ್ಯಕ್ರಮದ ಮೂಲಕ ಆರ್ಥಿಕ ಸಹಾಯ ಬಯಸಿದ್ದಾರೆ. ಇನ್ನು ಇದೇ ಊರಿನ ವೆಂಕಟರಮಣ ವೈದ್ಯ ಎಂಬುವವರು ಇವರ ಸಹಾಯಕ್ಕೆ ಬಂದಿದ್ದು ಅಂಗಡಿ ನೆಡೆಸಲು ಜಾಗವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಲ್ಲದೇ ಗ್ರಾಮ ಪಂಚಾಯ್ತಿಯಿಂದ ಮನೆ ಕಟ್ಟಿಸಿಕೊಡುವ ಪ್ರಯತ್ನದಲ್ಲಿದ್ದಾರೆ.

ಆರೋಗ್ಯ ಸರಿಯಿಲ್ಲದ ಕಾರಣ ಕೂಲಿ ಕೆಲಸ ಕಷ್ಟಸಾಧ್ಯ. ಹೀಗಾಗಿ ಚಿಕ್ಕದೊಂದು ಅಂಗಡಿ ಇಟ್ಟುಕೊಂಡರೆ ಕುಳಿತಲ್ಲಿ ಕೆಲಸ ಮಾಡಿಕೊಳ್ಳಬಹುದು. ಜೊತೆಯಲ್ಲಿ ಮಕ್ಕಳನ್ನೂ ಇದರಲ್ಲಿ ತೊಡಗಿಸಿಕೊಂಡು ಕ್ರೀಯಾ ಶೀಲರಾಗಿರುವಂತೆ ನೋಡಿಕೊಂಡು ಬದುಕು ರೂಪಿಸಿಕೊಳ್ಳುವ ಆಸೆಯಿದೆ.

 

TAGGED:belakuEndosulfanhealthhomePublic TVtreatmentUttara Kannadaಆರೋಗ್ಯಉತ್ತರ ಕನ್ನಡಎಂಡೋಸಲ್ಫಾನ್ಚಿಕಿತ್ಸೆಪಬ್ಲಿಕ್ ಟಿವಿಬೆಳಕುಮನೆ
Share This Article
Facebook Whatsapp Whatsapp Telegram

You Might Also Like

Donald Trump 3
Latest

ಎಲ್ಲಿ ಅಡಗಿರೋದು ಗೊತ್ತಿದೆ – ಈಗ ಹತ್ಯೆ ಮಾಡಲ್ಲ, ಖಮೇನಿ ಶರಣಾಗಬೇಕು: ಟ್ರಂಪ್‌ ವಾರ್ನಿಂಗ್‌

Public TV
By Public TV
2 hours ago
01 10
Big Bulletin

ಬಿಗ್‌ ಬುಲೆಟಿನ್‌ 17 June 2025 ಭಾಗ – 1

Public TV
By Public TV
2 hours ago
02 12
Big Bulletin

ಬಿಗ್‌ ಬುಲೆಟಿನ್‌ 17 June 2025 ಭಾಗ – 2

Public TV
By Public TV
2 hours ago
03 10
Big Bulletin

ಬಿಗ್‌ ಬುಲೆಟಿನ್‌ 17 June 2025 ಭಾಗ – 3

Public TV
By Public TV
2 hours ago
siddaramaiah
Bengaluru City

ವಿಮಾನ ದುರಂತದಲ್ಲಿ ಜನರ ಸಾವಾಯ್ತಲ್ಲ ನಾವೇನಾದ್ರೂ ರಾಜೀನಾಮೆ ಕೇಳಿದ್ವಾ? – ಸಿದ್ದರಾಮಯ್ಯ

Public TV
By Public TV
2 hours ago
NHRC orders investigation against Dakshina Kannada police for visiting Hindu activists homes bharat shetty
Karnataka

ಹಿಂದೂ ಕಾರ್ಯಕರ್ತರ ಮನೆಗೆ ಭೇಟಿ – ದ.ಕ. ಪೊಲೀಸರ ವಿರುದ್ಧವೇ ತನಿಖೆಗೆ NHRC ಆದೇಶ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?