ಚಿಕ್ಕಮಗಳೂರು: ಜೀವ ಉಳಿಸಿಕೊಳ್ಳಲು ಬಾವಲಿಯೊಂದು ಕೆಂಜಿಗ ಇರುವೆಗಳ ಜೊತೆ ಹೋರಾಟ ನಡೆಸಿದ ಘಟನೆಗೆ ಚಿಕ್ಕಮಗಳೂರಿನ ಪ್ರವಾಸಿ ಮಂದಿರ ಸಾಕ್ಷಿಯಾಗಿದೆ.
ಆಹಾರದ ಅರಸಿ ಪ್ರವಾಸಿ ಮಂದಿರದ ಆವರಣಕ್ಕೆ ಬಂದಿದ್ದ ದೊಡ್ಡ ಗಾತ್ರದ ಬಾವಲಿ ಕೆಂಜಿಗಗಳ ಕೈಗೆ ಸಿಕ್ಕಿ ತಪ್ಪಿಸಿಕೊಳ್ಳಲು ಹೋರಾಡಿದೆ. ಮರವೊಂದರ ಕೆಳಗೆ ಕಂಡ ಕೆಂಜಿಗವನ್ನು ತಿನ್ನಲು ಬಂದ ಬಾವಲಿ ಅರಿವಿಲ್ಲದೆ ಕೆಂಜಿಗಗಳ ಗೂಡಿನ ಮೇಲೆ ಇಳಿದಿದೆ. ಒಂದೊಂದೇ ಕೆಂಜಿಗವನ್ನು ತಿನ್ನಲು ಪ್ರಾರಂಭಿಸುತ್ತಿದ್ದಂತೆ ರಾಶಿ-ರಾಶಿ ಪ್ರಮಾಣದ ಕೆಂಜಿಗ ಇರುವೆಗಳು ಬಾವಲಿಯನ್ನು ಸಂಪೂರ್ಣ ಮುತ್ತಿಕೊಂಡು ಕಚ್ಚಲು ಆರಂಭಿಸಿವೆ.
- Advertisement 2
- Advertisement 3
ಹಾರಲು ಆಗದೆ, ತಪ್ಪಿಸಿಕೊಳ್ಳಲು ಆಗದ ಬಾವಲಿ ನೋವಿನಿಂದ ಸ್ಥಳದಲ್ಲೇ ಬಿದ್ದು ಒದ್ದಾಡಿದೆ. ಬಾವಲಿ ದೊಡ್ಡ ರೆಕ್ಕೆಗಳನ್ನು ಹರಡಿಕೊಂಡಿದ್ದರಿಂದ ಬೇರಿಗೆ ಸಿಕ್ಕಿಕೊಂಡು ತಪ್ಪಿಸಿಕೊಳ್ಳಲಾಗದೆ ವಿಫಲ ಹೋರಾಟ ನಡೆಸಿತ್ತು. ಆ ನೋವಿನ ಮಧ್ಯೆಯೂ ಬಾವಲಿ ಒಂದೊಂದೆ ಕೆಂಜಿಗವನ್ನು ತಿನ್ನಲು ಆರಂಭಿಸಿತು. ಆದರೆ ಕೆಂಜಿಗಗಳು ಕೂಡ ಮತ್ತೊಂದು ಕಡೆಯಿಂದ ಬಾವಲಿ ಮೇಲೆ ದಾಳಿ ಮಾಡಿದೆ.
- Advertisement 4
ಹಾಗೋ-ಹೀಗೋ ಕಷ್ಟಪಟ್ಟು ಮರ ಏರಲು ಪ್ರಾರಂಭಿಸಿದ ಬಾವುಲಿ ನೋವಿನಿಂದ ನಿಂತ್ರಾಣಗೊಂಡು ಮತ್ತದೇ ಕೆಂಜಿಗಗಳ ಗೂಡಿನ ಮೇಲೆ ಬಿದ್ದಿತ್ತು. ಸಾಮಾನ್ಯವಾಗಿ ರಾತ್ರಿ ಪಾಳಯದಲ್ಲಿ ಆಹಾರ ಸೇವನೆ ಮಾಡೋ ಬಾವಲಿಗಳು ಹಗಲಲ್ಲೇ ಆಹಾರ ಹುಡಿಕಿಕೊಂಡು ಬಂದು ಕೆಂಜಿಗಗಳನ್ನ ತಿನ್ನುತ್ತಿರುವುದು ವಿಶೇಷವಾಗಿದೆ.