ಚಿಕ್ಕಮಗಳೂರು: ಕಳೆದ ಆರು ದಿನಗಳಿಂದ ಬಂಡಿಪುರ ಅರಣ್ಯದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದು, ಸಾವಿರಾರು ಎಕರೆ ಅರಣ್ಯ ನಾಶವಾಗಿದೆ. ಈಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೊಂದು ಬೆಂಕಿ ದುರಂತ ನಡೆದಿದೆ.
ತಡರಾತ್ರಿ ಕೊಪ್ಪ ತಾಲೂಕಿನ ಗುಂಡಿಕ್ಕಿ ಅರಣ್ಯ ಹೊತ್ತಿ ಉರಿದಿದ್ದು, ಸುಟ್ಟು ಕರಕಲಾಗಿದೆ. ನೂರಾರು ಎಕರೆ ಸಸ್ಯ ಸಂಪತ್ತು ಬೆಂಕಿಗಾಹುತಿಯಾಗಿದ್ದು, ಗಾಳಿ ಹೆಚ್ಚಾದಂತೆ ಬೆಂಕಿಯ ತೀವ್ರತೆಯು ಹೆಚ್ಚಾದ ಕಾರಣ ಬೆಂಕಿ ನಂದಿಸುವ ಕಾರ್ಯಾಚರಣೆಗೆ ತೊಡಕಾಗಿದೆ. ಸೋಮವಾರ ಮಧ್ಯಾಹ್ನ ಗುಂಡಿಕ್ಕಿ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಇದನ್ನೂ ಓದಿ: ಬಂಡೀಪುರ ಬೆಂಕಿ ನಂದಿಸುವ ಕಾರ್ಯ ಶುರು – ಕರಡಿಹಳ್ಳಿ, ಚಮ್ಮನಹಳ್ಳಿಯಲ್ಲಿದೆ ಕಾಪ್ಟರ್
ಅಗ್ನಿಶಾಮಕ ವಾಹನಗಳು ನಿಂತಲ್ಲೇ ನಿಂತಿವೆ. ಅರಣ್ಯ ಹೊತ್ತಿ ಉರಿಯುತ್ತಿರುವ ಘಟನೆಯಿಂದ ಹೇರೂರು ಮತ್ತು ಗುಂಡಿಕ್ಕಿ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ. ಇತ್ತ ಗೋಪಾಲಸ್ವಾಮಿ ಬೆಟ್ಟದ ಚಿಮ್ಮನಹಳ್ಳ ಬಳಿ ಸೇನಾ ಹೆಲಿಕಾಪ್ಟರ್ ನಿಂದ ಕಾರ್ಯಚರಣೆ ಆರಂಭವಾಗಿದೆ.
ಹೆಲಿಕಾಪ್ಟರ್ ಮದ್ದೂರು ಕೆರೆಯಿಂದ ನೀರು ತುಂಬಿಸಿಕೊಂಡು ಬಂದು ಅರಣ್ಯದಲ್ಲಿ ಬೆಂಕಿ ಕಂಡ ಸ್ಥಳದಲ್ಲಿ ಮೇಲಿನಿಂದ ನೀರನ್ನು ಹಾಕುತ್ತಿದೆ. ಎರಡು ಇಂಡಿಯನ್ ಏರ್ ಪೋರ್ಸ್ ಹೆಲಿಕಾಪ್ಟರ್ ನಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv