ಗಳಿಕೆಯಾದ ಹಣ ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮೀಸಲು
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಚಿತ್ರ ಪ್ರದರ್ಶನದಿಂದ ಬಂದ ಹಣವನ್ನು ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೆರವು ನೀಡಲು ಚಿತ್ರತಂಡ ನಿರ್ಧರಿಸಿದೆ.
ಶನಿವಾರದಂದು ನಡೆದ ಮಂಡ್ಯ ಬಸ್ ದುರಂತದಿಂದ ಅಂಬರೀಶ್ ಅವರು ಆಘಾತಕ್ಕೊಳಗಾಗಿದ್ದರು. ಹಾಗೆಯೆ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸಂತಾಪ ಸೂಚಿಸಿದ್ದರು. ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಅಂಬರೀಶ್ ಅವರು ಬಯಸಿದ್ದರು. ಆದರೆ ವಿಪರ್ಯಾಸವೆಂದರೇ ಮಂಡ್ಯ ಬಸ್ ದುರಂತದ ದಿನವೇ ರೆಬೆಲ್ ಸ್ಟಾರ್ ನಿಧನರಾದರು.
`ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಉಸ್ತವಾರಿಯನ್ನು ಕಿಚ್ಚ ಸುದೀಪ್, ಜಾಕ್ ಮಂಜು ಹಾಗೂ ಗುರದತ್ತ್ ಗಾಣಿಗ ಅವರು ವಹಿಸಿಕೊಂಡಿದ್ದರು. ಅಂಬರೀಶ್ ಅವರ ಆಸೆಯನ್ನು ಪೂರ್ತಿಗೊಳಿಸಬೇಕು ಎಂದು `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರತಂಡ ಸಿನಿಮಾವನ್ನು ರೀ- ರಿಲೀಸ್ ಮಾಡಲು ಮುಂದಾಗಿದೆ. ಚಿತ್ರ ಪ್ರದರ್ಶನದಿಂದ ಬಂದ ಹಣವನ್ನು ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ನೆರವು ನೀಡಲು ಚಿತ್ರತಂಡ ತೀರ್ಮಾನಿಸಿದೆ.
ಹೀಗಾಗಿ ಇದೇ ಶುಕ್ರವಾರದಂದು ಮಂಡ್ಯ, ಬೆಂಗಳೂರು, ಮೈಸೂರು ಹಾಗೂ ಅಮೇರಿಕದಲ್ಲಿ ರೆಬೆಲ್ ಸ್ಟಾರ್ ಅಭಿನಯದ ಕೊನೆಯ ಚಿತ್ರ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾವನ್ನು ರೀ-ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಮೂಲಕ ಅಂಬರೀಶ್ ಅವರ ಆಸೆಯನ್ನು ತೀರಿಸಿ ಜನರಿಗೆ ಒಳ್ಳೆಯದನ್ನ ಮಾಡುವ ಚಿತ್ರತಂಡದ ಕೆಲಸವನ್ನು ಎಲ್ಲರು ಮೆಚ್ಚಲೇಬೇಕು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv