Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

Districts

ಉರಿಗೌಡ, ನಂಜೇಗೌಡ ಹೆಸರುಗಳನ್ನು ನಾನು ಸೃಷ್ಟಿ ಮಾಡಿಲ್ಲ : ಅಡ್ಡಂಡ ಕಾರ್ಯಪ್ಪ

Public TV
Last updated: March 25, 2023 11:30 am
Public TV
Share
3 Min Read
ADDANDA CARIAPPA 1
SHARE

ಹಾಸನ: ಉರಿಗೌಡ, ನಂಜೇಗೌಡ ಆ ಎರಡು ಹೆಸರುಗಳನ್ನು ನಾನು ಸೃಷ್ಟಿ ಮಾಡಿದ್ದಲ್ಲ. ಉರಿಗೌಡ, ನಂಜೇಗೌಡ ವಿಚಾರ ಈಗ ಚರ್ಚೆಗೆ ಬಂದಿದ್ದು ನನ್ನ ದುರದೃಷ್ಟ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda Cariappa) ಹೇಳಿದರು.

ಹಾಸನದಲ್ಲಿ ಬೇಲೂರಿನ ಶ್ರೀ ಚನ್ನಕೇಶವನಿಗೆ ಬೇಕಿಲ್ಲ ಕುರಾನ್ ಪಠಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1996ರಲ್ಲಿ ರಾಜೇಶ್‌ಗೌಡ ಎನ್ನುವವರು ಮುನ್ನಲೆಗೆ ತಂದಿದ್ದಾರೆ. ಆದರೆ ಈಗ ರಾಜೇಶ್‌ಗೌಡ ಇಲ್ಲ, ಅವರು ನಿಧನ ಹೊಂದಿದ್ದಾರೆ. ಅವರು ಸುವರ್ಣ ಮಂಡ್ಯ ಅನ್ನುವ ಪುಸ್ತಕದಲ್ಲಿ ಇದನ್ನು ದಾಖಲಿಸಿದ್ದಾರೆ. ಟಿಪ್ಪು ಸುಲ್ತಾನ್ ಯಾರು ಕೊಂದರು ಅನ್ನುವುದು ಗೊಂದಲದಲ್ಲಿದೆ‌. ನಾನು ನಾಟಕವನ್ನು ಬರೆಯುವುದರೊಳಗೆ ಅದನ್ನು ಅಧ್ಯಯನ ಮಾಡಿದ್ದೇನೆ ಎಂದು ತಿಳಿಸಿದರು.‌

Tipu

ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿಲ್ಲ ಅಂತಾರೆ, ಇನ್ನೊಂದು ಕಡೆ ಬ್ರಿಟಿಷರು ಟಿಪ್ಪುವನ್ನು ಹತ್ಯೆ ಮಾಡಿದರು ಅಂಥ ಹೇಳಿಕೊಂಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹಾಕಿರುವ ಶಿಲಾ‌ಸ್ತಂಭಗಳಲ್ಲಾಗಲಿ ಎಲ್ಲಿಯೂ ಇಲ್ಲ. ಶ್ರೀರಂಗಪಟ್ಟಣ ವಾಟರ್‌ಗೇಟ್ ಬಳಿ ಆತ ಬಿದ್ದಿದ್ದ ಅಂತ ಹೇಳಲಾಗಿದೆ.‌ ಅಲ್ಲಿಂದ ಮುನ್ನೂರು ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿತ್ತು ಎನ್ನುವ ಅನೇಕ ಗೊಂದಲಗಳಿವೆ. ಆ ಪಾತ್ರಗಳು ನನ್ನ ಸೃಷ್ಟಿಯಲ್ಲ, 1996ರಲ್ಲೇ ದಾಖಲಾಗಿದೆ. ಈ ಬಗ್ಗೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಆ ಪುಸ್ತಕ ಬಿಡುಗಡೆಯೂ ಆಗಿದೆ.‌ ಆ ಪುಸ್ತಕದ ದಾಖಲೆಗಳನ್ನು ತೆಗೆದುಕೊಂಡು, ಲಾವಣಿಗಳಲ್ಲಿ ಒಂದು ಲೈನ್ ಬಂದಿರುವುದನ್ನು ನೋಡಿ ನಾನು ದಾಖಲಿಸಿದ್ದೇನೆ ಎಂದರು.

ನಿರ್ಮಲಾನಂದನಾಥ ಸ್ವಾಮೀಜಿಯವರು ಈ ನಾಡಿನ ಸಂತ. ಅದರಲ್ಲೂ ನಿರ್ಮಲಾನಂದನಾಥ ಸ್ವಾಮೀಜಿಯವರು ಎಂಟೆಕ್ ಮಾಡಿಕೊಂಡು ವಿಜ್ಞಾನಿ ಆಗಿರುವವರು. ಅವರಿಗೆ ಅವರದ್ದೇ ಆದ ಗೌರವವಿದೆ. ನಾನು ಅವರ ಬಗ್ಗೆ ಅವಹೇಳನಕಾರಿಯಾಗಿ ಅಥವಾ ನೋವಾಗುವ ರೀತಿ ಮಾತನಾಡಿಲ್ಲ. ಆದರೆ ಸಮಾಜದ ಪ್ರಮುಖರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯೇ ಅವರಿಗೆ ಕ್ಷಮೆ ಕೇಳಿದ್ದೇನೆ, ಅದು ಮುಗಿದ ಅಧ್ಯಾಯ, ಮತ್ತೆ ಕೆದಕುವುದು ಬೇಡ. ಒಕ್ಕಲಿಗರು ಅಂದರೆ ಅದು ಗಂಗರಸರು, ವೀರರು. ಮಲ್ಲಗೌಡ ಎನ್ನುವ ಪಾತ್ರ, ಶಾಸನ ಇದೆ ಅವರಲ್ಲಿ ಅನೇಕ ಐತಿಹ್ಯಗಳಿವೆ. ನಮ್ಮ ನಾಡಿನಲ್ಲಿ ದೇವೇಗೌಡರು, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದವರು. ನಾಡಿಗೆ ಬಹಳ ಕೊಡುಗೆಯನ್ನು ಕೊಟ್ಟಿದ್ದಾರೆ. ನಾನು ಆ ಜನಾಂಗವನ್ನು ಎಲ್ಲಿಯೂ ದೂಷಿಸಿಲ್ಲ ಎಂದು ಸ್ಪಷ್ಟಪಡಿಸಿದರು.

mnd nirmalanandanatha swamiji

ಪ್ರೊ. ಕೃಷ್ಣೇಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅದು ಅವರ ಅಭಿಪ್ರಾಯ, ರಾಜಕೀಯ ಮಾತನಾಡಬಾರದು ಅಂತ ಎಲ್ಲೂ ಇಲ್ಲ. ರಾಜಕೀಯ ಅದೊಂದು ಪವಿತ್ರವಾದ ಫೀಲ್ಡ್. ರಾಜಕೀಯವನ್ನು ಕೆಲವರು ಗಬ್ಬು ಎಬ್ಬಿಸಿದ್ದಕ್ಕೆ ಅದರ ಬಗ್ಗೆ ಅಹಸ್ಯ ಹುಟ್ಟಿದೆ.‌ ಅದು ಅವರ ಸ್ವಂತ ಅಭಿಪ್ರಾಯ, ಅವರನ್ನು ರಂಗಾಯಣಕ್ಕೆ ಕರೆಸಿದ್ದೇನೆ, ಅವರ ಬಗ್ಗೆ ಗೌರವವಿದೆ ಎಂದರು. ನಾನು 2012 ರಲ್ಲೇ ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕ ಬರೆದು ಟಿಪ್ಪು ಮತ್ತು ಕೊಡವರು ಅಂತ ಪ್ರಕಟ ಮಾಡಿದ್ದೇನೆ. ಇದು ಚುನಾವಣೆ ಹೊತ್ತಿನಲ್ಲಿ ಕಾಕತಾಳೀಯವಾಗಿ ಬಂದುಬಿಡ್ತು. ಅದೇ ಎಫೆಕ್ಟ್ ಆಗ್ತಿರೋದು, ಚುನಾವಣೆ ಬಂದರುವುದರಿಂದ ಎಲ್ಲಾ ಮಾತಗಳು ರಾಜಕೀಯಕರಣಗೊಳ್ಳುತ್ತಿದೆ. ಸ್ವಾಮೀಜಿಯವರ ಹೇಳಿಕೆಗೆ ನನ್ನ ಸಹಮತವಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ತಂದೆ, ಮಕ್ಕಳಿಗೆ ಟಿಕೆಟ್

Urigowda Nanjegowda 1

ಉರಿಗೌಡ (Urigowda), ನಂಜೇಗೌಡ (Nanjegowda) ಬಗ್ಗೆ ಸಂಶೋಧನೆ ನಡೆಯಬೇಕು ಅಂತ ಸ್ವಾಮೀಜಿ ಹೇಳಿದ್ದಾರೆ, ಅದಕ್ಕೆ ನನ್ನ ಸಹಮತವಿದೆ. ಸಂಶೋಧನೆ ನಡೆಯಲಿ ಅಂತ ನಾನು ಹೇಳುತ್ತಿದ್ದೇನೆ‌. ಉರಿಗೌಡ, ನಂಜೇಗೌಡ ಚಿತ್ರಗಳು ನಾಟಕದ್ದು, ಅದನ್ನು ನಾನು ತಿರಸ್ಕರಿಸುತ್ತೇನೆ.‌ ಆ ಫೋಟೋಗಳನ್ನು ಯಾರು ವ್ಯಾಟ್ಸ‌ಪ್‌ ಅಲ್ಲಿ ಹಾಕಿದ್ದಾರೆ ಅದು ಸುಳ್ಳು. ಅದು ತಮಿಳುನಾಡಿನ ಚಿತ್ರಗಳು. ನಾನು ನನ್ನ ನಾಟಕದ ಅನೇಕ ಫೋಟೋಗಳನ್ನು ಹಾಕಿದ್ದೇನೆ.‌ ಅದರಲ್ಲಿ ನನ್ನ ನಾಟಕದಲ್ಲಿ ಬರುವ ಪಾತ್ರಧಾರಿಗಳ ಫೋಟೋ ಇದೆ.‌ ಟಿಪ್ಪುವನ್ನು ಕೊಂದಿರುವುದು ಉರಿಗೌಡ, ನಂಜೇಗೌಡ ಅಂತ ನನ್ನ ನಾಟಕದಲ್ಲಿ ಬಂದಿದೆ. ಇನ್ನಷ್ಟು ಸಂಶೋಧನೆ ನಡೆಯಲಿ. ನಾನು ಆ ಎರಡು ಪಾತ್ರಗಳನ್ನು ತಂದಿರುವುದಕ್ಕೆ ಅನೇಕ ಕಾರಣಗಳಿವೆ. ಆ ಹೆಸರುಗಳು ನನ್ನ ಸೃಷ್ಟಿ ಅಲ್ಲ ಎಂದು ಹೇಳಿದರು. ಇದನ್ನೂ ಓದಿ: ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 12 ಲಕ್ಷ ರೂ. ಹಣ ಜಪ್ತಿ

TAGGED:Addanda Cariappanirmalanandanatha swamijiUrigowdaurigowda nanjegowdaಅಡ್ಡಂಡ ಸಿ.ಕಾರ್ಯಪ್ಪಉರಿಗೌಡಟಿಪ್ಪು ಸುಲ್ತಾನ್ನಂಜೆಗೌಡ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Akeal Hosein and Sanju Samson
Cricket

ಸಂಜು ಬೆಂಕಿ ಶತಕ| ಚೆನ್ನೈ ಸೂಪರ್‌ ಆಟಕ್ಕೆ ಮುಂಬೈ ಪಲ್ಟಿ – 5ನೇ ಸ್ಥಾನಕ್ಕೆ ಹೈಜಂಪ್‌

Public TV
By Public TV
2 hours ago
Donald Trump USA India Relationship
Latest

ಭಾರತದ ಬಗ್ಗೆ ಬಾಯಿಗೆ ಬಂದಂತೆ ಟ್ರಂಪ್‌ ಪೋಸ್ಟ್‌ – ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಅಮೆರಿಕ

Public TV
By Public TV
3 hours ago
Supreme Court 1
Court

ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

Public TV
By Public TV
4 hours ago
TAMILUNADU ELECTION
Latest

ತಮಿಳುನಾಡು ಇತಿಹಾಸದಲ್ಲೇ ದಾಖಲೆ ಬರೆದ ಮತದಾರ – 89.69% ರಷ್ಟು ಮತದಾನ

Public TV
By Public TV
4 hours ago
ELEPHANT ATTACK
Chikkamagaluru

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
4 hours ago
West Bengal voting
Latest

ಬಂಗಾಳದಲ್ಲಿ ದಾಖಲೆ – ಅತಿ ಹೆಚ್ಚು ಮತದಾರರು ಡಿಲೀಟ್ ಆದ ಕ್ಷೇತ್ರದಲ್ಲಿ ಹೆಚ್ಚು ವೋಟಿಂಗ್‌!

Public TV
By Public TV
5 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?