ಚೆನ್ನೈ: ತಮಿಳುನಾಡು ಸಿಎಂ ವಿಜಯ್ (Vijay) ಅವರು ಗೆದ್ದು ಬಳಿಕ ರಾಜೀನಾಮೆ ತಿರುಚ್ಚಿ (Trichy) ಪೂರ್ವ ಕ್ಷೇತ್ರದಿಂದ ನಟ, ನಿರ್ಮಾಪಕ ರಾಘವ ಲಾರೆನ್ಸ್ (Raghava Lawrence) ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
ರಾಜಕೀಯ ಪ್ರವೇಶ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಲಾರೆನ್ಸ್, ‘ಅನೇಕ ಜನರು ಸ್ಪಷ್ಟೀಕರಣಕ್ಕಾಗಿ ನನ್ನನ್ನು ಸಂಪರ್ಕಿಸುತ್ತಿದ್ದಾರೆ. ನಾನು ಊಹಾಪೋಹಗಳನ್ನು ಒಪ್ಪಿಕೊಳ್ಳಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿದೇಶದಲ್ಲಿನ ಕೆಲ ಶಕ್ತಿಗಳು ದೇಶದ ಯುವಜನರನ್ನ ಕೈಗೊಂಬೆಯಾಗಿ ಮಾಡಿಕೊಳ್ಳಲು ಬಯಸ್ತಿವೆ; ʻಕಾಕ್ರೋಚ್ʼಗೆ ನಬಿನ್ ಚಾಟಿ
Hi everyone, News about me contesting in Trichy East election has been circulating across various media platforms.
All my Media friends have been reaching out to me over phone and requesting to meet me asking for clarification. Since the speculation has grown to a point where I… pic.twitter.com/68ZyN6P0l9
— Raghava Lawrence (@offl_Lawrence) June 7, 2026
ಎಲ್ಲರಿಗೂ ನಮಸ್ಕಾರ, ನಾನು ತಿರುಚ್ಚಿ ಪೂರ್ವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂಬ ಸುದ್ದಿ ವಿವಿಧ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನನ್ನ ಎಲ್ಲಾ ಮಾಧ್ಯಮ ಸ್ನೇಹಿತರು ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ಸ್ಪಷ್ಟೀಕರಣ ಕೇಳುತ್ತಿದ್ದಾರೆ. ಊಹಾಪೋಹಗಳು ನಾನು ಅದನ್ನು ಪರಿಹರಿಸಬೇಕೆಂದು ಭಾವಿಸುವ ಹಂತಕ್ಕೆ ಬೆಳೆದಿರುವುದರಿಂದ, ನಾನು ಈ ಟಿಪ್ಪಣಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಪ್ರಸ್ತುತ ಬೆಂಜ್ ಚಿತ್ರೀಕರಣದಲ್ಲಿ ನಿರತನಾಗಿದ್ದೇನೆ. ನನ್ನ ಶೆಡ್ಯೂಲ್ ಜೂ.10 ರಂದು ಕೊನೆಗೊಳ್ಳುತ್ತದೆ. ನನ್ನ ತಾಯಿಯ ಆಶೀರ್ವಾದದೊಂದಿಗೆ, ನನ್ನ ಜೀವನದ ಬಗ್ಗೆ ಒಂದು ಪ್ರಮುಖ ನಿರ್ಧಾರವನ್ನು 11 ನೇ ಗುರುವಾರ ಬೆಳಗ್ಗೆ 9:30 ಕ್ಕೆ ಘೋಷಿಸಲಾಗುವುದು ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಈಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರು ತಿರುಚ್ಚಿ (ಪೂರ್ವ) ಮತ್ತು ಪೆರಂಬೂರು ಎರಡೂ ಕ್ಷೇತ್ರಗಳಲ್ಲೂ ಜಯಗಳಿಸಿದ್ದರು. ತಿರುಚ್ಚಿ (ಪೂರ್ವ)ಯಲ್ಲಿ ಡಿಎಂಕೆಯ ಇನಿಗೊ ಇರುದಯರಾಜ್ ಅವರನ್ನು 27,416 ಮತಗಳಿಂದ ಸೋಲಿಸಿದ್ದರು. ಪೆರಂಬೂರು ಉಳಿಸಿಕೊಂಡು ತಿರುಚ್ಚಿ ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಹಿಟ್ಲರ್ನಿಂದ ಸ್ಫೂರ್ತಿ ಪಡೆದು ಒತ್ತುವರಿ ವಿರೋಧಿ ಪಡೆಗೆ ಹೈಡ್ರಾ ಎಂದು ಹೆಸರಿಟ್ಟಿದ್ದೇವೆ – ರೇವಂತ್ ರೆಡ್ಡಿ
