ಬಾಲಿವುಡ್ (Bollywood) ನಟಿ ಸಾರಾ ಅಲಿಖಾನ್, ದಕ್ಷಿಣದ ಖ್ಯಾತ ನಟ ಚಿತ್ರದಲ್ಲಿ ತಾವು ನಟಿಸುವುದಿಲ್ಲವೆಂದು ಹೇಳಿದ್ದಾರೆ. ನಾಗ ಚೈತನ್ಯ (Naga Chaitanya) ನಟನೆಯ ಚಿತ್ರದಲ್ಲಿ ಸಾರಾ ನಟಿಸಬೇಕಾಗಿತ್ತು. ಹಾಗಾಗಿ ನಿರ್ದೇಶಕರು ಆಕೆಯನ್ನು ಸಂಪರ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಾನು ಅವರ ಜೊತೆ ನಟಿಸಲಾರೆ ಎಂದಿದ್ದಾರೆ.
- Advertisement 2
ಹಾಗೆ ಅನ್ನುವುದಕ್ಕೆ ಕಾರಣವಿದೆ. ಹಾಗಂತ ಸಾರಾ ಅವರು ನಾಗ ಚೈತನ್ಯ ಅವರನ್ನು ದ್ವೇಷಿಸುತ್ತಿಲ್ಲ. ನಾಗ ಚೈತನ್ಯ ನನಗೆ ಅಣ್ಣನಂತೆ ಕಾಣಿಸುತ್ತಾರೆ. ಅವರೊಂದಿಗೆ ನಾನು ಹೇಗೆ ನಟಿಸಲಿ? ಇದರ ಹೊರತಾಗಿ ಯಾವುದೇ ಕಾರಣವಿಲ್ಲವೆಂದು ಅವರು ಧೈರ್ಯದಿಂದ ಹೇಳಿದ್ದಾರೆ ಎಂದು ವರದಿಯಾಗಿದೆ.
- Advertisement 3
- Advertisement 4
ಸಾರಾ ಅಲಿ ಖಾನ್ಗೆ (Sara Ali Khan) ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸಿಗದೇ ಇದ್ರೂ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆಯಷ್ಟೇ ದೇವಸ್ಥಾನದ ಬಳಿ ಬಡವರಿಗೆ ನಟಿ ಸಿಹಿ ಹಂಚಿದ್ದರು. ಸಾರಾ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದರು.
ಮುಂಬೈನ ಜುಹುದಲ್ಲಿರುವ ಶನಿ ದೇವರ ದೇವಸ್ಥಾನಕ್ಕೆ ಸಾರಾ ಭೇಟಿ ನೀಡಿದ್ದರು. ಈ ನಟಿಯ ‘ಮರ್ಡರ್ ಮುಬಾರಕ್’ ಮತ್ತು ‘ಏ ವತನ್ ಮೇರೆ ವತನ್’ ಸಿನಿಮಾಗಳು ರಿಲೀಸ್ ಆದ ಸಮಯವದು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ನಟಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಆವರಣದ ಹೊರಗೆ ಕುಳಿತಿದ್ದ ಬಡವರಿಗೆ ಸಿಹಿ ಪ್ಯಾಕೆಟ್ಗಳನ್ನು ಹಂಚಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ಸುತ್ತುವರಿದ ಪಾಪರಾಜಿಗಳಿಗೆ ವಿಡಿಯೊ ಚಿತ್ರೀಕರಿಸಿದಂತೆ ನಟಿ ಮನವಿ ಮಾಡಿಕೊಂಡಿದ್ದೂ ಗಮನ ಸೆಳೆದಿತ್ತು.