ಮೈಸೂರು: ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸುರಪುರ ಶಾಸಕ ರಾಜೂಗೌಡ ಅವರು ಫ್ಯಾಮಿಲಿ ಜೊತೆಗೆ ಹೆಚ್ ಡಿ ಕೋಟೆಯ ಸುತ್ತಮುತ್ತ ಪ್ರದೇಶಗಳಲ್ಲಿ ಜಾಲಿ ಟ್ರಿಪ್ ಮಾಡುತ್ತಿದ್ದಾರೆ.
#familytime #goldengang #EvolveBack #kabini pic.twitter.com/IbIp6zbmgP
— Ganesh (@Official_Ganesh) September 11, 2021
ಸಚಿವ ಸ್ಥಾನದಿಂದ ವಂಚಿತಗೊಂಡು ಮತ್ತು ಸಚಿವ ಆನಂದ್ ಸಿಂಗ್ ರಾಜೀನಾಮೆ ವಿಚಾರದಲ್ಲಿ ಸದಾ ಸುದ್ದಿಯಲ್ಲಿದ್ದ ಸುರಪುರ ಶಾಸಕ ಈಗ ಫ್ಯಾಮಿಲಿ ಜೊತೆಗೆ ಜಾಲಿ ಟ್ರಿಪ್ನಲ್ಲಿದ್ದಾರೆ. ಗಣೇಶ್ ಮತ್ತು ರಾಜೂಗೌಡರ ಕುಟುಂಬದ ಜೊತೆಗೆ ಸದ್ಯ ಎಂಜಾಯ್ಮೆಂಟ್ ಮೂಡ್ನಲ್ಲಿದ್ದಾರೆ. ಇದನ್ನೂ ಓದಿ: ಮತದಾರ ಪ್ರಭುಗಳ ಖುಣ ತೀರಿಸುವ ಕೆಲಸ ಮಾಡುತ್ತೇನೆ: ಮುನಿರತ್ನ
View this post on Instagram
ಹೆಚ್ ಡಿ ಕೋಟೆ ಕಾನನ ಪ್ರದೇಶದಲ್ಲಿ ಚಾರಣ ಮಾಡುತ್ತಿರುವ ರಾಜೂಗೌಡರಿಗೆ, ಗಣೇಶ್ ಮತ್ತು ನಟ ರವಿಶಂಕರ್ ಜೊತೆಯಾಗಿದ್ದಾರೆ. ಮೊದಲಿಂದಲೂ ಸಿನಿಮಾ ಮಂದಿಜೊತೆಗೆ ಉತ್ತಮ ಒಡನಾಟ ಹೊಂದಿರುವ ರಾಜೂಗೌಡ ಒಂದೆರಡು ದಿನ ರಾಜಕೀಯ ಜಂಜಾಟ ಬಿಟ್ಟು ಕುಟುಂಬದವರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಹೆಚ್ ಡಿ ಕೋಟೆ ಅರಣ್ಯ ಪ್ರದೇಶದಲ್ಲಿ ವನಮಹೋತ್ಸವ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ಸಮಯ ಪ್ರಜ್ಞೆ ಮೆರೆದ KSRTC ಚಾಲಕ – 50ಕ್ಕೂ ಅಧಿಕ ಮಂದಿ ಪ್ರಯಾಣಿಕರು ಪಾರು
View this post on Instagram
ಕಬಿನಿ ನದಿಯಲ್ಲಿ ಫ್ಯಾಮಿಲಿ ಜೊತೆಗೆ ಬೋಟ್ನಲ್ಲಿ ಕುಳಿತು ಎಂಜಾಯ್ ಮಾಡಿದ್ದಾರೆ. ಕಬಿನಿ ಫಾರೆಸ್ಟ್ನಲ್ಲಿ ಸಫಾರಿ ಹೋಗುವಾಗ ಗಣೇಶ್ ಅವರ ಕ್ಯಾಮೆರಾಗೆ ಚಿರತೆ ಸೆರೆ ಸಿಕ್ಕಿದೆ. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಗಣೇಶ್ ಅವರು ಕುಟುಂಬದ ಜೊತೆಗೆ ಜಾಲಿ ಟ್ರಿಪ್ ಮಾಡುತ್ತಿರುವುದಾಗಿ ಬರೆದುಕೊಂಡಿದ್ದಾರೆ.