ಬೆಂಗಳೂರು: ರೇಬಿಸ್ನಿಂದ (Rabies) ಬಳಲುತ್ತಿದ್ದ ವ್ಯಕ್ತಿ ತನ್ನ ಪ್ರೇಯಸಿಗೆ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಲೇ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನೆಲಮಂಗಲ ನಿವಾಸಿ ಕಿರಣ್ (22) ರೇಬಿಸ್ಗೆ ಬಲಿಯಾದ ವ್ಯಕ್ತಿ. ರೇಬಿಸ್ ರೋಗಕ್ಕೆ ತುತ್ತಾಗಿ ತೀವ್ರ ಅಸ್ವಸ್ಥಗೊಂಡಿದ್ದ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಹೆಸ್ಕಾಂ ಗುತ್ತಿಗೆ ನೌಕರ ಸಾವು
ನನ್ನ ಅಂತ್ಯಕ್ರಿಯೆಗೆ ನೀನು ಬರಲೇಬೇಕು ಎಂದು ಪ್ರೇಯಸಿಗೆ ಕೈ ಮುಗಿಯುತ್ತಲೇ ಪ್ರಾಣ ಬಿಟ್ಟಿದ್ದಾನೆ. ತಾನು ಬದುಕುವುದಿಲ್ಲ ಎಂದು ತಿಳಿದು ಪ್ರಿಯತಮೆಗೆ ವೀಡಿಯೋ ಕಾಲ್ ಮಾಡಿದ್ದ. ನಾನಿನ್ನು ಹೆಚ್ಚು ದಿನಗಳು ಬದುಕುವುದಿಲ್ಲ. ನಿನ್ನೊಟ್ಟಿಗೆ ಬದುಕುವ ಅದೃಷ್ಟ ನನಗಿಲ್ಲ. ನಿಮ್ಮ ತಂದೆ ಹೇಳಿದಂತೆ ಕೇಳು. ಅವರು ತೋರಿಸಿದ ಹುಡುಗನನ್ನು ಮದುವೆ ಆಗು ಎಂದು ಸಲಹೆ ನೀಡಿದ್ದಾನೆ.
ಈ ಘಟನೆ ಆಗಸ್ಟ್ 9 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಿರಣ್ ತನ್ನ ಪ್ರೇಯಸಿಗೆ ಕಾಲ್ಗೆಜ್ಜೆ, ಉಂಗುರ ಕೊಡಿಸಿದ್ದ. ಈ ವಿಷಯ ತಿಳಿದ ಯುವತಿ ತಂದೆ ಪ್ರೀತಿಯನ್ನು ನಿರಾಕರಿಸಿ, ಬೈದು ಬುದ್ಧಿ ಹೇಳಿದ್ದರಂತೆ. ಇತ್ತ ಕಿರಣ್ ಕುಟುಂಬಸ್ಥರು, ನನ್ನ ಮಗನಿಗೆ ಯುವತಿ ಕುಟುಂಬಸ್ಥರೇ ಏನೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ರಾಯಲ್ ಎನ್ಫೀಲ್ಡ್ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ – ಮೂವರು ಅರೆಸ್ಟ್
Web Stories