ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಗೋರಖ್ಪುರ (Gorakhpur) ಮೃಗಾಲಯಕ್ಕೆ (Zoo) ಭೇಟಿ ನೀಡಿ ಚಿರತೆ ಮರಿಗೆ (Leopard) ಹಾಲು ಕುಡಿಸಿದ್ದಾರೆ.
ಯೋಗಿ ಆದಿತ್ಯನಾಥ್ ಹಾಲಿನ ಬಾಟಲಿಯಲ್ಲಿ ಚಿರತೆ ಮರಿಗೆ ಹಾಲು ಕುಡಿಸುತ್ತಿರುವ ವೀಡಿಯೋವನ್ನು ಸರ್ಕಾರದ ಅಧಿಕೃತ ಖಾತೆ ಹಂಚಿಕೊಂಡಿದೆ. ಈ ವೇಳೆ ಸಂಸದ ರವಿ ಕೀಶನ್, ಪಶುವೈದ್ಯರು ಹಾಗೂ ಮೃಗಾಲಯ ಅಧಿಕಾರಿಗಳು ಭಾಗಿಯಾಗಿದ್ದರು.
अथाह शक्ति, अपार गति और अद्वितीय सौंदर्य का अद्भुत संयोजन…
सफेद बाघिन ‘गीता’ के आने से गोरखपुर के प्राणि उद्यान की शोभा बढ़ गई है… pic.twitter.com/YkEQgpn885
— Yogi Adityanath (@myogiadityanath) October 5, 2022
ವೀಡಿಯೋದಲ್ಲಿ ಮೊದಲು ಚಿರತೆ ಮರಿ ಹಾಲು ಕುಡಿಯಲು ಹಿಂದೇಟು ಹಾಕುತ್ತದೆ. ನಂತರ ಪಶುವೈದ್ಯರು ಚಿರತೆ ಮರಿಯನ್ನು ಕರೆದುಕೊಂಡು ಯೋಗಿ ಆದಿತ್ಯನಾಥ್ ಅವರ ಬಳಿಗೆ ತರುತ್ತಾರೆ. ಅದಾದ ಬಳಿಕ ಆ ಚಿರತೆ ಮರಿಗೆ ಆಹಾರ ನೀಡಲು ಪ್ರಯತ್ನಿಸುತ್ತಾರೆ. ಈ ಸಮಯದಲ್ಲಿ ಚಿರತೆ ಮರಿ ಬಾಟಲಿಯಿಂದ ಹಾಲು ಕುಡಿಯುತ್ತದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡುತ್ತೇವೆ: ಅಮಿತ್ ಶಾ
#WATCH | Uttar Pradesh CM Yogi Adityanath visits Saheed Ashfakulah Khan Zoological Park & veterinary hospital in Gorakhpur, feeds milk to leopard cubs pic.twitter.com/O2wljxg3we
— ANI UP/Uttarakhand (@ANINewsUP) October 5, 2022
ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಝೂಲಾಜಿಕಲ್ ಪಾರ್ಕ್ ಎಂಬ ಈ ಮೃಗಾಲಯವನ್ನು ಕಳೆದ ವರ್ಷ ಮಾರ್ಚ್ನಲ್ಲಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದರು. ಮೃಗಾಲಯದ ಅಧಿಕೃತ ವೆಬ್ಸೈಟ್ನ ಪ್ರಕಾರ ಇದು ಪೂವಾರ್ಂಚಲ್ ಪ್ರದೇಶದಲ್ಲಿ ಮೊದಲ ಮತ್ತು ಉತ್ತರ ಪ್ರದೇಶದ ಮೂರನೇ ಪ್ರಾಣಿಶಾಸ್ತ್ರೀಯ ಉದ್ಯಾನವನವಾಗಿದೆ. ಇದನ್ನೂ ಓದಿ: ನಕಲಿ ಉದ್ಯೋಗ ದಂಧೆ – ಮ್ಯಾನ್ಮಾರ್ನಲ್ಲಿ ಸಿಲುಕಿದ್ದ 45 ಭಾರತೀಯರ ರಕ್ಷಣೆ