ಪ್ರಿಯತಮೆಯಿಂದಲೇ ವೈದ್ಯನ ಬರ್ಬರ ಕೊಲೆ- ಸಂಧಾನಕ್ಕೆ ಕರೆದು ಸಾಯಿಸಿದ್ಳು

Public TV
2 Min Read
Bengaluru Doctor Murder 01

ಬೆಂಗಳೂರು: ಚೆನ್ನೈ ಮೂಲದ ವೈದ್ಯನೊಬ್ಬ (Doctor) ಬೆಂಗಳೂರಿನಲ್ಲಿ (Bengaluru) ಬರ್ಬರವಾಗಿ ಕೊಲೆ (Murder) ಯಾಗಿದ್ದಾನೆ. ಆ ಕೊಲೆ ಮಾಡಿದ್ದು ಬೇರೆ ಯಾರೋ ಅಪರಿಚಿತರಲ್ಲ, ಕೊಲೆಯಾದ ವೈದ್ಯನನ್ನು ಮದುವೆಯಾಗಬೇಕಿದ್ದ (Marriage) ಬಾವಿ ಪತ್ನಿ ಮತ್ತವಳ ಮೂವರು ಸ್ನೇಹಿತರು.

ಪ್ರಿಯತಮೆಯಿಂದಲೇ (Lover) ಕೊಲೆಯಾದ ಪ್ರಿಯಕರನನ್ನು ವಿಕಾಸ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬಿಜೆಪಿಯವರದ್ದು ಮೊಟ್ಟೆಯ ಕಮಿಷನ್‍ನಂತೆ, ಶಾಲಾ ಬಟ್ಟೆಯಲ್ಲೂ ಕಮಿಷನ್ ಲೂಟಿಯೇ?: ಕಾಂಗ್ರೆಸ್

Bengaluru Doctor Murder 3

ಏನಿದು ಡಾಕ್ಟರ್ ಲವ್ ಮಿಸ್ಟ್ರಿ?
ತಮಿಳುನಾಡಿನ (Tamilnadu) ಚೆನ್ನೈ ಮೂಲದ ಡಾ.ವಿಕಾಸ್, ಉಕ್ರೇನ್ ನಲ್ಲಿ ಎಮ್‌ಬಿಬಿಎಸ್ (MBBS) ಮಾಡ್ಕೊಂಡು, ಬೆಂಗಳೂರಿನಲ್ಲಿ ವೈದ್ಯನಾಗಿ ಅಭ್ಯಾಸ ಮಾಡ್ತಿದ್ದ. ಇದೇ ವೇಳೆ ಅರ್ಕೆಟಿಕ್ಟ್ ಆಗಿದ್ದ ಪ್ರತಿಭಾ ಅನ್ನೋ ಯುವತಿಯ ಪರಿಚಯವಾಗಿ, ಪರಿಚಯ ಪ್ರೀತಿಯಾಗಿತ್ತು. ನಂತರ ಇಬ್ಬರು ಮದುವೆ ಆಗಬೇಕು ಅಂತಾ ನಿರ್ಧರಿಸಿ ಎರಡು ಕುಟುಂಬಗಳು ಮಾತಾಡಿ ಇನ್ನೇನು ಮೂರು ತಿಂಗಳಲ್ಲಿ ಮದುವೆ ಕೂಡ ಫಿಕ್ಸ್ ಆಗಿತ್ತು.

Bengaluru Doctor Murder 03

ಈ ನಡುವೆ ಅದೊಂದು ದಿನ ಪ್ರತಿಭಾ ಮತ್ತು ವಿಕಾಸ್ (Vikas) ದೈಹಿಕ ಸಂಬಂಧದ ವೇಳೆ ಒಂದಷ್ಟು ನಗ್ನ ಫೋಟೋಗಳನ್ನು ತೆಗೆದುಕೊಂಡಿದ್ರು. ಬರೀ ಇಷ್ಟೇ ಆಗಿದ್ರೆ, ಇವತ್ತು ಡಾಕ್ಟರ್ ವಿಕಾಸ್ ಕೊಲೆಯಾಗ್ತಾ ಇರಲಿಲ್ಲ. ಡಾಕ್ಟರ್ ವಿಕಾಸ್, ಪ್ರಿಯತಮೆ ಜೊತೆಗಿನ ನಗ್ನ ವೀಡಿಯೋವನ್ನು ಸೋಷಿಯಲ್ ಮೀಡಿಯಾದ ಕ್ಲೋಸ್ ಫ್ರೆಂಡ್ಸ್ ಗ್ರೂಪ್ ಗೆ ಶೇರ್ ಮಾಡ್ಕೊಂಡಿದ್ದ.

Bengaluru Doctor Murder

ಸಂಧಾನಕ್ಕೆ ಕರೆದು ಕೊಲೆ:
ಯಾವಾಗ ಪ್ರತಿಭಾಳಿಗೆ ಈ ವಿಚಾರ ಗೊತ್ತಾಯ್ತೋ, ವಿಕಾಸ್ ಬಳಿ ಜಗಳ ಮಾಡಿದಳು. ಡಾಕ್ಟರ್ ವಿಕಾಸ್ ಎಲ್ಲವನ್ನೂ ಡಿಲೀಟ್ ಮಾಡಿ, ಪ್ರಿಯತಮೆಗೆ ಸಾರಿ ಕೂಡ ಕೇಳಿದ್ದ. ಆದರೆ ಇಷ್ಟಕ್ಕೆ ಸುಮ್ಮನಾಗದ ಪ್ರತಿಭಾ, ತನ್ನ ಕ್ಲಾಸ್ ಮೆಟ್‌ಗಳಾದ ಸುಶೀಲ್, ಸೂರ್ಯ, ಗೌತಮ್ ಅನ್ನೋರ ಜೊತೆಗೆ ಪ್ರಿಯಕರ ವಿಕಾಸ್ ನನ್ನು ಮಾತುಕತೆಗೆ ಕರೆಸಿಕೊಂಡಿದ್ರು. ಅದಕ್ಕೆ ಒಪ್ಪಿ ವಿಕಾಸ್ ಕೂಡ ಬಂದಿದ್ದ. ಮಾತಾಡುತ್ತಿದ್ದ ವೇಳೆ ಮಾತಿಗೆ ಮಾತು ಬೆಳೆದು, ಯುವತಿ ಪ್ರತಿಭಾ ಸೇರಿದಂತೆ ನಾಲ್ವರು ಡಾಕ್ಟರ್ ವಿಕಾಸ್‌ಗೆ ಮನೆಯಲ್ಲೇ ಹಿಗ್ಗಾಮುಗ್ಗ ಥಳಿಸಿದ್ರು. ರಾತ್ರಿ ಹತ್ತು ಗಂಟೆಗೆ ಶುರುವಾದ ಗಲಾಟೆ ಮಧ್ಯರಾತ್ರಿ ಒಂದು ಗಂಟೆ ತನಕ ನಡೆದಿತ್ತು. ಕೊನೆಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ವಿಕಾಸ್ ಸಾವನ್ನಪ್ಪಿದ್ದ.

ವಿಕಾಸ್ ಸತ್ತುಬಿದ್ದಿರೋದನ್ನು ಲೆಕ್ಕಿಸದ ಪ್ರತಿಭಾ, ಸುಶೀಲ್, ಸೂರ್ಯ, ಗೌತಮ್, ತುಂಬಾ ಹೊಟ್ಟೆ ಹಸಿತಿದೆ ಅಂತಾ ಒಟ್ಟಿಗೆ ಕೂತು ಊಟ ಮಾಡಿದ್ರು. ನಂತರ ಬೆಳಗ್ಗಿನ ಜಾವದ ಹೊತ್ತಿಗೆ ಪ್ರಿಯತಮೆ ಪ್ರತಿಭಾ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸೋಕೆ ಮುಂದಾದ ವೇಳೆ ಡಾಕ್ಟರ್ ವಿಕಾಸ್ ಸಾವನ್ನಪ್ಪಿರೋದು ಖಚಿತವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೇಗೂರು ಪೊಲೀಸರು ಪ್ರತಿಭಾ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿಯಾಗಿರುವ ಸೂರ್ಯ ನಾಪತ್ತೆಯಾಗಿದ್ದು, ಪೊಲೀಸರು ಶೋಧ ನಡೆಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *