ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ – ಶೀಘ್ರವೇ ಕಾಂಗ್ರೆಸ್‌ ಸೇರಲಿದ್ದಾರೆ ಮಾಜಿ ಎಂಎಲ್‌ಸಿ

Public TV
1 Min Read
Koppala JDS Leader HR Srinivas will Join Congress Soon 2

ಕೊಪ್ಪಳ: ಪರಿಷತ್‌ ಚುನಾವಣೆಯ ಶ್ರೀನಿವಾಸ್‌ ಗೌಡ ಮತ್ತು ಗುಬ್ಬಿ ಶ್ರೀನಿವಾಸ್‌ ಅಡ್ಡ ಮತದಾನ ಮಾಡಿದ ಬೆನ್ನಲ್ಲೇ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾಗಲಿದೆ.

ಶೀಘ್ರದಲ್ಲೇ ಜೆಡಿಎಸ್ ಮುಖಂಡ ಎಚ್‌ಆರ್‌ ಶ್ರೀನಾಥ್ ಕಾಂಗ್ರೆಸ್‌ ಸೇರಲಿದ್ದಾರೆ. ಗಂಗಾವತಿಯ ಮಾಜಿ ಪರಿಷತ್‌ ಸದಸ್ಯರಾದ ಶ್ರೀನಾಥ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಮತುಕತೆ ನಡೆಸಿದ್ದಾರೆ.

Koppala JDS Leader HR Srinivas will Join Congress Soon 1

ಮಾಜಿ ಸಂಸದ ಎಚ್‌ಜಿ ರಾಮುಲು ಅವರ ಪುತ್ರರಾದ ಎಚ್‌.ಆರ್‌. ಶ್ರೀನಾಥ್ ಕಳೆದ ವಿಧಾನ ಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಜೆಡಿಎಸ್‌ ಸೇರಿದ್ದರು. ಈಗ ಮತ್ತೆ ಕಾಂಗ್ರೆಸ್‌ ಕದ ತಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷ ಸೇರಲು ಡಿಕೆ ಶಿವಕುಮಾರ್ ಒಪ್ಪಿಗೆ ನೀಡಿದ್ದು ಕೆಲವೇ ದಿನಗಳಲ್ಲಿ ಸೇರ್ಪಡೆಯಾಗಲಿದ್ದಾರೆ.

ಮೂಲಗಳ ಪ್ರಕಾರ ಶ್ರೀನಾಥ್ ಗಂಗಾವತಿ ವಿಧಾನಸಭೆ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಈ ಹಿಂದೆ ಶ್ರೀನಾಥ್‌ ಅವರನ್ನು ವಿರೋಧಿಸಿದ್ದರು. ಕಳೆದ ಚುನಾವಣೆಯಲ್ಲಿ ಅನ್ಸಾರಿ ವಿರೋಧಿಸಿ ಶ್ರೀನಾಥ್ ಜೆಡಿಎಸ್ ಸೇರಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *