ಪತಿ ಉಪ್ಪಿಗಿಂತಲೂ ಪತ್ನಿ ಪ್ರಿಯಾಂಕಾ ಉಪೇಂದ್ರ ಫಾಸ್ಟ್ : ಡಿಟೆಕ್ಟೀವ್ ತೀಕ್ಷ್ಣ @ 50

Public TV
2 Min Read
priyank upendra

ಪ್ರಿಯಾಂಕಾ ಉಪೇಂದ್ರ ಇದೀಗ ಐವತ್ತನೇ ಸಿನಿಮಾಗೆ ಕಾಲಿಟ್ಟಿದ್ದಾರೆ. ಡಿಟೆಕ್ಟೀವ್ ತೀಕ್ಷ್ಣ ಹೆಸರಿನ ಈ ಚಿತ್ರವು ಏಳು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದ್ದು, ನಿನ್ನೆಯಷ್ಟೇ ಈ ಸಿನಿಮಾದ ಎರಡು ನಿಮಿಷದ ಫಸ್ಟ್‌ಲುಕ್‌ನ್ನು ಪುತ್ರ ಆಯುಷ್‌ ಉಪೇಂದ್ರ ಬಿಡುಗಡೆ ಮಾಡಿದರೆ, ರಿಯಲ್ ಸ್ಟಾರ್ ಉಪೇಂದ್ರ ಮೋಷನ್ ಪೋಸ್ಟರ್‌ನ್ನು ಅನಾವರಣಗೊಳಿಸಿದ್ದಾರೆ. ಇದಕ್ಕೂ ಮುನ್ನ ಆಯುಷ್‌ ಉಪೇಂದ್ರನ ಹುಟ್ಟಹಬ್ಬವನ್ನು ಆಚರಿಸಲಾಯಿತು. ನಂತರ ಮಾತನಾಡಿದ ಉಪೇಂದ್ರ ಚಿತ್ರ 50, ವಯಸ್ಸು 20. ಎಷ್ಟು ಬೇಗ ಕಾಲ ಓಡುತ್ತಿದೆ ಅಂದ್ರೆ ಈಗಾಗಲೇ 50 ಮುಗಿಸಿದ್ದೀರಾ. ನಾನು 53 ಮುಗಿಸಿ 54ರಲ್ಲಿ ಇದ್ದೇನೆ. ನನಗಿಂತ ವೇಗವಾಗಿ ಹೋಗ್ತಿದ್ದೀರಾ. ಶೀರ್ಷಿಕೆ ಚೆನ್ನಾಗಿದೆ. ಸಂಗೀತ ಪ್ರಾಮಿಸಿಂಗ್ ಆಗಿದೆ. ಗೆಟಪ್ ವಿಭಿನ್ನವಾಗಿದೆ. ತೀಕ್ಷ ಎಂದರೆ ಶಾರ್ಪ್. ಕಥೆನೂ ಶಾರ್ಪ್ ಆಗಿದೆ. ಬೇಗನೆ ರಿಲೀಸ್ ಮಾಡಿ. ಕಥೆ ತುಂಬಾ ಚೆನ್ನಾಗಿ ಮಾಡಿದ್ದೀರಾ ಅಂತ ಹೇಳ್ತಿದ್ದರು. ಚಿತ್ರಕ್ಕೆ ಅದೇ ಮುಖ್ಯವಾಗಿರುತ್ತದೆ. ಏನೆಲ್ಲಾ ಬದಲಾವಣೆ ಆಗಬಹುದು. ಕ್ಯಾಮಾರ, ಮೇಕಿಂಗ್ ಬೇರೆ ತರಹ ಬರಬಹುದು. ಆದರೆ ಕಥೆ ಎನ್ನುವುದು ಬಹಳ ಬಹಳ ಮುಖ್ಯ. ಹಾಲಿವುಡ್‌ದಲ್ಲಿ ’ನೋ ಟ್ರಸ್ಟ್ ಸ್ಟಾರ್, ಟ್ರಸ್ಟ್ ಟೇಲ್’ ಎಂದು ಹೇಳಿದ್ದಾರೆ. ಅದನ್ನು ನಂಬಿಕೊಂಡು ಸಿನಿಮಾ ಮಾಡಿ. ನಿಮ್ಮ ಬರವಣಿಗೆ ಮುಖ್ಯ. ಅದನ್ನು ಖಂಡಿತ ಚೆನ್ನಾಗಿ ಮಾಡಿರುತ್ತಿರಾ ಅಂತ ನಂಬಿಕೆ ಇದೆ. ಒಳ್ಳೆಯದಾಗಲಿ ಎಂದರು. ಇದನ್ನೂ ಓದಿ : ಲೇಡಿ ಸೂಪರ್ ಸ್ಟಾರ್ ನಯನತಾರಾ ಚಿತ್ರದ ಮೂಲಕ ಖ್ಯಾತ ಕ್ರಿಕೆಟಿಗೆ ಧೋನಿ ಸಿನಿ ರಂಗಕ್ಕೆ ಎಂಟ್ರಿ

FotoJet 1 26

ಈ ಚಿತ್ರ ನನಗೆ ತುಂಬ ಎಮೋಷನಲ್ ಆಗಿದೆ. ಮಗನ ಹುಟ್ಟು ಹಬ್ಬದ ಸಂಭ್ರಮ. ಕುಟುಂಬದ ಸಹಕಾರದಿಂದ ಇಲ್ಲಿಯವರೆಗೆ ಬಂದಿದ್ದೇನೆ. ಮದುವೆ ನಂತರ ನಟಿಸ್ತಿನಿ ಅಂದುಕೊಂಡಿರಲಿಲ್ಲ. ಮನೆ ಕಡೆಯಿಂದ ಪ್ರೋತ್ಸಾಹ ಸಿಕ್ಕಿದ್ದಕ್ಕೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ’ಮಮ್ಮಿ’ ಚಿತ್ರದಿಂದ ಬದಲಾವಣೆ ಕಂಡುಬಂತು. ಮಹಿಳೆ ಮುಖ್ಯ ಪಾತ್ರದ ಚಿತ್ರವನ್ನು ನಂಬಿಕೊಂಡು ನಿರ್ಮಾಪಕರು ಬಂಡವಾಳ ಹೂಡಿದರು. ನನ್ನ ಚಿತ್ರಗಳನ್ನು ನೋಡಿ ಖುಷಿ ಪಡುತ್ತಿದ್ದೀರಾ. ಅದರಿಂದ ನಿಮಗೆ ಪ್ರೇರಣೆ ಸಿಗುತ್ತೆ. ಮನರಂಜನೆ ಜತೆ ಸಂದೇಶ ಸಿಗುತ್ತದೆ. ನನಗೆ ನಟನೆ ತುಂಬಾ ಇಷ್ಟ. ’ಉಗ್ರಾವತಾರ’ದಲ್ಲಿ ಆಕ್ಷನ್ ಇದೆ. ಅದರಂತೆ ಇದರಲ್ಲಿ ಬೇರೆ ತರಹ ಕಾಣಿಸಿಕೊಳ್ಳುತ್ತೇನೆಂದು ಪ್ರಿಯಾಂಕಾ ಉಪೇಂದ್ರ ಸಂತಸವನ್ನು ಹಂಚಿಕೊಂಡರು. ಇದನ್ನೂ ಓದಿ : ಕಂಗನಾಗೆ ಹುಡುಗರನ್ನು ಕಂಡರೆ ಆಗಲ್ಲವಂತೆ: ಅದಕ್ಕೆ ಮದುವೆ ಆಗಿಲ್ಲವಂತೆ

FotoJet 46

ಗಟ್ಟಿಯಾದ ಕಥೆಯನ್ನು ಮಾಡಿಕೊಂಡಿದ್ದೇವೆ. ಗಾಡ್‌ಫಾದರ್ ಆಗಿ ಉಪೇಂದ್ರ ಅವರು ಇದ್ದಾರೆ. ಸಹ ನಿರ್ದೇಶಕನಾಗಿದ್ದ ನನ್ನನ್ನು ಕರೆದು ಚಿತ್ರ ಮಾಡು ಅಂತ ಧೈರ್ಯ ತುಂಬಿದವರು ಮೇಡಂ. ಮುಂದೆ ಏನೇ ಆದರೂ ಅದರ ಸಂಪೂರ್ಣ ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಆಕ್ಷನ್, ಥ್ರಿಲ್ಲರ್ ಡಿಟೆಕ್ಟಿವ್ ಚಿತ್ರದಲ್ಲಿ ಕೊಲೆ ಮುಂತಾದವು ಇರುತ್ತದೆ. ಅದನ್ನು ಹೊರತುಪಡಿಸಿ ಬೇರೆ ಮಾದರಿಯಲ್ಲಿ ಹೇಳಲು ಹೊರಟಿದ್ದೇವೆ. ಈಗಲೇ ಸಾರಾಂಶ ಹೇಳಲು ಆಗದು. ಎಲ್ಲವನ್ನು ಚಿತ್ರದಲ್ಲಿ ನೋಡಿ. ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳನ್ನು ಮಾಡಿರೆಂದು ಉಪ್ಪಿ ಸರ್ ಹೇಳಿದ್ದಾರೆ. ಅದರಂತೆ ಶೇಕಡ ೧೦೦ರಷ್ಟು ಹೊಸತನ ಕೊಡುತ್ತೇವೆ ಎಂಬ ಭರವಸೆ ಇದೆ. ತೀಕ್ಷತೆ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗುತ್ತದೆ. ಅದರಂತೆ ಚುರುಕುತನ ಇರಬೇಕು. ಅದನ್ನು ಶಕ್ತಿಯಿಂದ ಗೆಲ್ಲೋಕೆ ಆಗೋಲ್ಲ. ಯುಕ್ತಿಯಿಂದ ಗೆಲ್ಲಬಹುದು ಎಂಬುದೇ ತೀಕ್ಷದ ಒನ್ ಲೈನ್ ಎಂದು ನಿರ್ದೇಶಕ ತ್ರಿವಿಕ್ರಮರಘು ಒಂದಷ್ಟು ಮಾಹಿತಿಯನ್ನು ತೆರೆದಿಟ್ಟರು.

Share This Article
Leave a Comment

Leave a Reply

Your email address will not be published. Required fields are marked *