ಕೊರಟಾಲ ಶಿವ ಸಿನಿಮಾದಲ್ಲಿ ಒಂದಾಗ್ತಾರಾ ದಕ್ಷಿಣದ ಸ್ಟಾರ್ಸ್ ?

Public TV
2 Min Read
dhanush allu

ಬ್ಬರು ಟಾಲಿವುಡ್‌ನ ಐಕಾನ್ ಸ್ಟಾರ್, ಇನ್ನೊಬ್ಬರು ತಮಿಳಿನ ಮಾಸ್ ಮಾರಿ, ಈ ಇಬ್ಬರು ಸ್ಟಾರ್‌ಗಳು ಒಂದೇ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡರೆ, ಅಭಿಮಾನಿಗಳ ಕಣ್ಣಿಗೆ ಹಬ್ಬವೋ ಹಬ್ಬ. ಯೆಸ್..`ಪುಷ್ಪ’ ಸ್ಟಾರ್ ಅಲ್ಲು ಅರ್ಜುನ್ ಮತ್ತು ತಮಿಳಿನ ರೌಡಿ ಬೇಬಿ ಖ್ಯಾತಿಯ ಧನುಷ್ ಈ ಇಬ್ಬರೂ ನಟರು ಸೌತ್ ಸಿನಿರಂಗದ ಬಹುಬೇಡಿಕೆಯ ನಟರು. ಈ ಇಬ್ಬರೂ ಸ್ಟಾರ್‌ಗಳು ಒಂದೇ ಚಿತ್ರದಲ್ಲಿ ಒಟ್ಟಿಗೆ ನಟಿಸುವುದಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ. ಹಾಗಾಗಿ ಬರಲಿರುವ ಅವರ ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟಾಗಿದೆ. ಇದನ್ನೂ ಓದಿ : ಸಿನಿಮಾ ಶೀರ್ಷಿಕೆ ಮೂಲಕ ಅಪ್ಪುನ ನೆನಪಿಸಿಕೊಂಡ ಗೋಲ್ಡನ್ ಸ್ಟಾರ್ : ಗಣಿ-ಗುಬ್ಬಿ ಕಾಂಬಿನೇಷನ್ ಚಿತ್ರಕ್ಕೆ ‘ಬಾನದಾರಿಯಲ್ಲಿ’ ಟೈಟಲ್

Allu Arjun

ಸದ್ಯ, ಈ ಇಬ್ಬರೂ ಸ್ಟಾರ್‌ಗಳು ಒಟ್ಟಿಗೆ ಚಿತ್ರ ಮಾಡೋ ಸುದ್ದಿಯಂತೂ ಟಾಲಿವುಡ್ ಗಲ್ಲಿ ಗಲ್ಲಿಯಲ್ಲೂ ಸೌಂಡ್ ಮಾಡುತ್ತಿದೆ. ಬಾಕ್ಸ್ಆಫೀಸ್ ಉಡೀಸ್ ಮಾಡೋ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಮತ್ತು ಬಾಲಿವುಡ್, ಹಾಲಿವುಡ್ ಅಂತಾ ಸೌಂಡ್ ಮಾಡ್ತಿರೋ ಧನುಷ್ ಒಂದೇ ಚಿತ್ರದಲ್ಲಿ ತೋರಿಸೋಕೆ ಹೊರಟಿದ್ದಾರೆ ನಿರ್ದೇಶಕ ಕೊರಟಾಲ ಶಿವ. ಈ ನಟರಿಗಾಗಿಯೇ ಅವರು ಡಿಫರೆಂಟ್ ಸಬ್‌ಜೆಕ್ಟ್ ಹುಡುಕಿದ್ದಾರಂತೆ. ಹಾಗಂತ ಚಿತ್ರತಂಡದಿಂದ ಟೈಟಲ್ ಆಗಲಿ, ಈ ಚಿತ್ರದ ಬಗ್ಗೆ ಮಾಹಿತಿ ಆಗಲಿ ಅಧಿಕೃತವಾಗಿ ರಿವೀಲ್ ಆಗಿಲ್ಲ. ಆದ್ರೆ ಈ ಇಬ್ಬರೂ ಸ್ಟಾರ್‌ಗಳು ಒಟ್ಟಿಗೆ ಬರೋ ಸುದ್ದಿಯಂತೂ ಅವರವರ ಫ್ಯಾನ್ಸ್ ಗೆ ಥ್ರಿಲ್ ನೀಡಿದೆ. ಇದನ್ನೂ ಓದಿ : ಜುಲೈ 28ರಂದು ಗುಮ್ಮನ ಕಥೆ – ಯುಗಾದಿ ದಿನ ಡಬಲ್ ಖುಷಿ ಕೊಟ್ಟ ‘ವಿಕ್ರಾಂತ್ ರೋಣ’ ಟೀಮ್

dhanush BOMB

ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರ ಆಗಿರಲಿದ್ದು, ಈ ಮಲ್ಟಿಸ್ಟಾರ್ ಮೂವ್ಹಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗಲಿದೆ. ನಿರ್ದೇಶಕ ಕೊರಟಾಲ ಶಿವ ಸದ್ಯ `ಆಚಾರ್ಯ’ ಚಿತ್ರದ ರಿಲೀಸ್‌ನಲ್ಲಿ ಬ್ಯುಸಿ ಆಗಿದ್ದರೆ, ಅತ್ತ ಅಲ್ಲು ಅರ್ಜುನ್ `ಪುಷ್ಪ ಪಾರ್ಟ್ ೨’ನಲ್ಲಿ ಬ್ಯುಸಿಯಾಗಿದ್ದಾರೆ. ನಟ ಧನುಷ್ ಕೂಡ ಬಾಲಿವುಡ್, ಹಾಲಿವುಡ್ ಚಿತ್ರ ಅಂತಾ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿರೋ ಅಭಿಮಾನಿಗಳಂತೂ ಸುದ್ದಿ ನಿಜವಾಗಲಿ ಎಂದು ಹಾರೈಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *