ಹಾಸನ: ವಿದ್ಯುತ್ ಮೀಟರ್ ಬೋರ್ಡ್ ಅಳವಡಿಕೆಯಲ್ಲಿ ಲೋಪ ಆಗಿದ್ದನ್ನು ಪ್ರಶ್ನಿಸಿದ್ದಕ್ಕೆ ಜೆಇ ಮೇಲೆ ಲೈನ್ಮ್ಯಾನ್ (ಪವರ್ ಮ್ಯಾನ್) ಹಲ್ಲೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಗರೆ ಸೆಸ್ಕಾಂ ಶಾಖೆಯ ಕೃಷ್ಣ ಹಲ್ಲೆಗೊಳಗಾದ ಕಿರಿಯ ಇಂಜಿನಿಯರ್. ವಿದ್ಯುತ್ ಮೀಟರ್ ಬೋರ್ಡ್ ಕಳೆದು ಹಾಕಿ, ಜ್ಯೂನಿಯರ್ ಲೈನ್ ಮ್ಯಾನ್ ಬೇರೆ ಮೀಟರ್ ಬೋರ್ಡ್ ಅಳವಡಿಸಿದ್ದ. ಈ ಬಗ್ಗೆ ದೂರು ಬಂದ ಕಾರಣ, ಪರಿಶೀಲನೆ ನಡೆಸಿದಾಗ ಬೇರೆ ಮೀಟರ್ ಬೋರ್ಡ್ ಅಳವಡಿಸಿರುವುದು ಬಯಲಿಗೆ ಬಂದಿತ್ತು. ಹೀಗಾಗಿ ಕಳೆದು ಹಾಕಿರುವ ಮೀಟರ್ ಬೋರ್ಡ್ ತಂದುಕೊಡುವಂತೆ ಜೆಇ ಕೃಷ್ಣ ಸೂಚನೆ ನೀಡಿದ್ದರು. ಇದನ್ನೂ ಓದಿ: 3 ಸಾವಿರ ಲೀಟರ್ ಮದ್ಯವನ್ನ ಕಾಲುವೆಗೆ ಸುರಿದ ತಾಲಿಬಾನ್
ಮೀಟರ್ ಬೋರ್ಡ್ ಕೊಡುತ್ತೇನೆ ಎಂದು ಕರೆಸಿಕೊಂಡ ಲೈನ್ಮ್ಯಾನ್ ಬಳಿಕ ಕಿರಿಯ ಇಂಜಿನಿಯರ್ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಕೂಡಲೇ ಕುಸಿದು ಬಿದ್ದ ಕೃಷ್ಣರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಈ ಸಂಬಂಧ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕನ ಮಗ ಇಂದು IPS ಅಧಿಕಾರಿ