ಆರ್​ಸಿಬಿ ಹಸಿರು ಬಣ್ಣ ಬಿಟ್ಟು ತಿಳಿನೀಲಿ ಜೆರ್ಸಿ ತೊಟ್ಟಿದ್ಯಾಕೆ ಗೊತ್ತಾ?

Public TV
1 Min Read
RCB

ದುಬೈ: ಅರಬ್ ನಾಡಿನಲ್ಲಿ ನಡೆಯುತ್ತಿರುವ ಐಪಿಎಲ್‍ನ ಮೊದಲ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಎಂದಿನ ಕೆಂಪು, ಕಪ್ಪು ಜೆರ್ಸಿ ಬಿಟ್ಟು ಈ ಬಾರಿ ತಿಳಿ ನೀಲಿ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ. ಈ ತಿಳಿ ನೀಲಿ ಜೆರ್ಸಿ ಧರಿಸಿದ ಹಿಂದೆ ಆರ್​ಸಿಬಿ ಮಹತ್ವದ ಗುರಿ ಹೊಂದಿದೆ.

RCB 1

ಆರ್​ಸಿಬಿ ಪಿಪಿಇ ಕಿಟ್‍ನಂಥ ತಿಳಿ ನೀಲಿ ಬಣ್ಣದ ಈ ಜೆರ್ಸಿಯೊಂದಿಗೆ ಕೆಕೆಆರ್ ವಿರುದ್ಧ ಕಣ್ಣಕ್ಕಿಳಿದು ಕೊರೊನಾ ವಾರಿಯರ್ಸ್‍ಗೆ ಗೌರವ ಸಲ್ಲಿಸಿದೆ. ಇದಲ್ಲದೆ ಪಂದ್ಯದ ಬಳಿಕ ಎಲ್ಲಾ ಆಟಗಾರರ ಜೆರ್ಸಿಯನ್ನು ಹರಾಜು ಹಾಕಲಾಗುತ್ತಿದ್ದು, ಇದರಿಂದ ಬಂದ ಹಣವನ್ನು ಭಾರತದಲ್ಲಿ ಕೊರೊನಾ ಲಸಿಕೆ ನೀಡಲು ಆರ್​ಸಿಬಿ ಫ್ರಾಂಚೈಸ್ ಮುಂದಾಗಿದೆ. ಈ ಮೂಲಕ ಸಮಾಜಸೇವೆಗೆ ತಮ್ಮ ಒಂದು ಪಂದ್ಯವನ್ನು ಮೀಸಲಿಟ್ಟಿದೆ.

RCB

ಈ ಹಿಂದೆ ಆರ್‍ಸಿಬಿ ತಂಡ ಪರಿಸರ ಜಾಗೃತಿಗಾಗಿ 1 ಪಂದ್ಯದಲ್ಲಿ ಹಸಿರು ಜೆರ್ಸಿತೊಟ್ಟು ಆಡುತ್ತಿತ್ತು. ಆದರೆ ಈ ಬಾರಿ ಹಸಿರು ಬಣ್ಣದ ಬದಲಾಗಿ ತಿಳಿ ನೀಲಿ ಬಣ್ಣದ ವಸ್ತ್ರದೊಂದಿಗೆ ಇಳಿದಿದೆ. ಇದನ್ನೂ ಓದಿ: ಆರ್​ಸಿಬಿಯಿಂದ ಹೀನಾಯ ಪ್ರದರ್ಶನ – ಕೆಕೆಆರ್​ಗೆ 9 ವಿಕೆಟ್‍ಗಳ ಭರ್ಜರಿ ಜಯ

Share This Article
Leave a Comment

Leave a Reply

Your email address will not be published. Required fields are marked *