ಮರಳು ದಂಧೆಗೆ ಅಂಕುಶ ಹಾಕಲು ಹೋದ ಎಸ್‍ಪಿಗೆ ರೇಣುಕಾಚಾರ್ಯ ಅವಾಜ್

Public TV
1 Min Read
Renukacharya 2

ದಾವಣಗೆರೆ: ಕಾನೂನು ಸುವ್ಯವಸ್ಥೆ ಸರಿಪಡಿಸಲು ಮುಂದಾಗಿರುವ ನೂತನ ಎಸ್‍ಪಿ ರಿಷ್ಯಂತ್‍ಗೆ ಪ್ರಚಾರ ಪ್ರಿಯ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವಾಜ್ ಹಾಕಿದ್ದಾರೆ.

ಹೊನ್ನಾಳಿಯ ಅಕ್ರಮ ಮರಳು ಅಡ್ಡೆಗಳ ಮೇಲೆ ನಿನ್ನೆ ನಡೆದ ಪೊಲೀಸ್ ರೇಡ್‍ಗೆ ಸಿಟ್ಟಾಗಿರುವ ರೇಣುಕಾಚಾರ್ಯ, ಸಿಪಿಐ ದೇವರಾಜ್‍ಗೆ ಕರೆ ಮಾಡಿ ಎಸ್‍ಪಿ ರಿಷ್ಯಂತ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಎಸ್‍ಪಿ ದೊಡ್ಡ ಹೀರೋನೇನ್ರೀ.. ಬಂದ ತಕ್ಷಣ ರೇಡ್ ಮಾಡಿಸಿದ್ದಾರೆ.. ಇಲ್ಲಿ ಸ್ಟಂಟ್ ಮಾಡೋಕೆ ಬಂದ್ರೆ ನಡೆಯಲ್ಲ.. ಮರಳುಗಾರಿಕೆ ಮಾಡೋರೇನು ರೇಪ್ ಮಾಡಿದ್ದಾರಾ? ಕೊಲೆ ಮಾಡಿದ್ದಾರಾ..? ಅವ್ರ ತಂಟೆಗೆ ಹೋದ್ರೆ ನಾನು ಸುಮ್ನೆ ಇರಲ್ಲ. ತಾಕತ್ ಇದ್ರೆ ಸೀಜ್ ಮಾಡಿರೋ ಮರಳನ್ನು ತುಂಬಿ ನೋಡೋಣ ಎಂದೆಲ್ಲಾ ನಾಲಗೆ ಹರಿಬಿಟ್ಟಿದ್ದಾರೆ.

rishyanth medium

ಎಸ್‍ಪಿ ರಿಷ್ಯಂತ್ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹರಳಹಳ್ಳಿ, ಹಿರೇಮಳಲಿಯ ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಶಾಸಕ ರೇಣುಕಾಚಾರ್ಯ, ಸಿಪಿಐ ದೇವರಾಜ್ ಗೆ ಕರೆ ಮಾಡಿ ಎಸ್‍ಪಿಗೆ ಅವಾಜ್ ಹಾಕಿದ್ದಾರೆ. ಇನ್ನು ಈ ವೀಡಿಯೋವನ್ನು ರೇಣುಕಾಚಾರ್ಯ ಅವರೇ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *