ಮಹಾಮಾರಿಗೆ ಶಿಕ್ಷಕ ಸಾವು – ಆಸ್ಪತ್ರೆ ಎದುರು ತಾಯಿ, ಮಗನ ಕಣ್ಣೀರು

Public TV
1 Min Read
CKB Teacher Death 1

– ವೈದ್ಯರ ವಿರುದ್ಧ ಕುಟುಂಬಸ್ಥರ ಆರೋಪ

ಚಿಕ್ಕಬಳ್ಳಾಪುರ: ಕೋವಿಡ್ 19 ಮಹಾಮಾರಿಗೆ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೃತಪಟ್ಟಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ ಅಂತ ಮೃತ ಶಿಕ್ಷಕನ ಕುಟುಂಬ ಆರೋಪಿಸಿದೆ.

CKB Teacher Death 2

ಚಿಂತಾಮಣಿ ನಗರದ 48 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕ ವೆಂಕಟೇಶಪ್ಪ ಮೃತ ದುರ್ದೈವಿ. ಶುಕ್ರವಾರ ಉಸಿರಾಟದ ಸಮಸ್ಯೆಯಿಂದ ಚಿಕ್ಕಬಳ್ಳಾಪುರ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶಪ್ಪ ಮೃತಪಟ್ಟಿದ್ದಾರೆ.

CKB Teacher Death 3

ಈ ಸಾವಿಗೆ ಆಸ್ಪತ್ರೆ ವೈದ್ಯರೇ ನೇರ ಕಾರಣ ಸಮರ್ಪಕ ಸೂಕ್ತ ಚಿಕಿತ್ಸೆ ನೀಡದ ಹಿನ್ನೆಲೆ ತಮ್ಮ ತಂದೆ ಸಾವನ್ನಪ್ಪಿದ್ದಾರೆ ಅಂತ ಮಗ ವಂಶಿಕೃಷ್ಣ ಆರೋಪಿಸಿದ್ದಾರೆ. ವೆಂಕಟೇಶಪ್ಪ ಸಾವಿನಿಂದ ತಾಯಿ- ಮಗನ ಕಣ್ಣೀರು ಹಾಕಿ ಗೋಳಾಡುತ್ತಿದ್ದು ಎಲ್ಲರ ಮನಕಲುವಂತಿತ್ತು.

Share This Article
Leave a Comment

Leave a Reply

Your email address will not be published. Required fields are marked *