ಕುಕ್ಕೆಯಲ್ಲಿ ವಿಶೇಷ ಶಿವರಾತ್ರಿ ಆಚರಣೆಗೆ ಹೈಕೋರ್ಟ್ ತಡೆ

Public TV
0 Min Read
KUKKE

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ನಡೆಯಬೇಕಿದ್ದ ವಿಶೇಷ ಶಿವರಾತ್ರಿ ಆಚರಣೆಗೆ ಹೈಕೋರ್ಟ್ ನಿಂದ ತಡೆ ನೀಡಲಾಗಿದೆ.

kukke subramanya

ಶೈವರು ಮತ್ತು ಮಧ್ವರ ನಡುವೆ ಭಿನ್ನಾಭಿಪ್ರಾಯವಿದ್ದರೂ ಧಾರ್ಮಿಕ ದತ್ತಿ ಇಲಾಖೆ ವಿಶೇಷ ಶಿವರಾತ್ರಿ ಆಚರಣೆಗೆ ಆದೇಶ ನೀಡಿತ್ತು. ವಿಶೇಷ ಶಿವರಾತ್ರಿ ವೇಳೆ ಬಿಲ್ವಾರ್ಚನೆ, ರುದ್ರಪಾರಾಯಣ, ರುದ್ರಹೋಮ ಹಮ್ಮಿಕೊಳ್ಳಲಾಗಿತ್ತು.

kukke 2

ಈ ಆದೇಶದ ವಿರುದ್ಧ ಬೆಂಗಳೂರು ಮೂಲದ ಮುರುಳೀಧರ್ ಮತ್ತು ವಿಜಯ ಸಿಂಹಾಚಾರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಇಂದು ಹೈಕೋರ್ಟ್, ಹಳೆಯ ಸಂಪ್ರದಾಯದಂತೆ ಶಿವರಾತ್ರಿ ಆಚರಣೆ ಮಾಡಿ. ಹೊಸ ಪದ್ಧತಿ ಬೇಡ ಅಂತಾ ಆದೇಶ ಹೊರಡಿಸಿದೆ.

Kukke Shri Subrahmanya Temple

Share This Article
Leave a Comment

Leave a Reply

Your email address will not be published. Required fields are marked *