426 ಪಾಸಿಟಿವ್, 4 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ – 270 ಮಂದಿಗೆ ಲಸಿಕೆ

Public TV
1 Min Read
Corona Vaccine 3

ಬೆಂಗಳೂರು: ಇಂದು ಕರ್ನಾಟಕದಲ್ಲಿ 426 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 433 ಜನ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

WhatsApp Image 2021 02 03 at 8.39.31 PM

ಇಂದು ಒಟ್ಟು 331 ಮಂದಿಗೆ ಲಸಿಕೆ ನೀಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಈ ಪೈಕಿ 270 (ಶೇ.82)ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಇಂದು ಗದಗ, ಹಾವೇರಿ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,40,596ಕ್ಕೆ ಏರಿಕೆ ಆಗಿದೆ. ಈ ಪೈಕಿ 9,22,437 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 5,915 ಸಕ್ರಿಯ ಪ್ರಕರಣಗಳಿವೆ.

WhatsApp Image 2021 02 03 at 8.39.51 PM 1

ಒಟ್ಟು ಇಲ್ಲಿಯವರೆಗೆ 12,225 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 146 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 4,848 ಆಂಟಿಜನ್ ಟೆಸ್ಟ್, 65,918 ಆರ್‍ಟಿ ಪಿಸಿಆರ್ ಸೇರಿದಂತೆ ಒಟ್ಟು 70,766 ಪರೀಕ್ಷೆ ಮಾಡಲಾಗಿದೆ.

ಎಂದಿನಂತೆ ಬೆಂಗಳೂರು ನಗರದಲ್ಲಿ 231 ಮಂದಿಗೆ ಸೋಂಕು ಬಂದಿದೆ. ದಕ್ಷಿಣ ಕನ್ನಡ 61, ತುಮಕೂರು 25, ಕಲಬುರಗಿ 18, ದಾವಣಗೆರೆ 12 ಹಾಗೂ ಮೈಸೂರಿನಲ್ಲಿ 10 ಮಂದಿಗೆ ಸೋಂಕು ಬಂದಿದೆ.

WhatsApp Image 2021 02 03 at 8.40.09 PM

ಬೆಂಗಳೂರು ನಗರದಲ್ಲಿ 74, ಕಲಬುರಗಿ 13, ದಕ್ಷಿಣ ಕನ್ನಡ 6, ಮೈಸೂರು ಹಾಗೂ ಉಡುಪಿಯಲ್ಲಿ ತಲಾ 5 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *