Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!

Crime

ಪತ್ನಿ ಬಗ್ಗೆ ಮಾತನಾಡಿದ್ದ ಗೆಳೆಯನನ್ನೇ ಕೊಂದು 12 ಪೀಸ್ ಮಾಡಿ 2 ಸೂಟ್‍ಕೇಸ್‍ನಲ್ಲಿ ತುಂಬಿದ!

Public TV
Last updated: December 18, 2020 1:59 pm
Public TV
Share
3 Min Read
sushil
SHARE

– ಸ್ನೇಹಿತನಿಂದ್ಲೇ ಬ್ಯಾಂಕ್ ಅಧಿಕಾರಿಯ ಕಗ್ಗೊಲೆ
– ಪೊಲೀಸರು ಕೊಲೆ ರಹಸ್ಯ ಭೇದಿಸಿದ್ದು ಹೇಗೆ?

ಮುಂಬೈ: ಬ್ಯಾಂಕ್ ಅಧಿಕಾರಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದು ಬಳಿಕ 12 ಪೀಸ್ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿದ ವಿಲಕ್ಷಣ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸುಶೀಲ್ ಕುಮಾರ್ (31) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತ ಚಾಲ್ರ್ಸ್ ನಡಾರ್(41) ಹಾಗೂ ಆತನ ಪತ್ನಿ ಸಲೋಮಿ(31)ಯನ್ನು ಬಂಧಿಸಲಾಗಿದೆ.

Police Jeep 1 2 medium

ರಾಯ್‍ಗಢ ಜಿಲ್ಲೆಯ ನುಲ್ಹಾ ಸಮೀಪದ ರೈಲ್ವೇ ನಿಲ್ದಾಣದ ಬಳಿ ಸುಶೀಲ್ ಮೃತದೇಹ ದೊರಕಿದೆ. ಎರಡು ಸೂಟ್ ಕೇಸ್ ನಲ್ಲಿ ಶವವನ್ನು ತುಂಬಿಸಿ ಬಿಸಾಕಲಾಗಿತ್ತು. ಬ್ಯಾಂಕ್ ಸಿಬ್ಬಂದಿಯಾಗಿರುವ ಸುಶೀಲ್, ಡಿಸೆಂಬರ್ 12ರಿಂದ ಗಾಂದಿನಗರದಲ್ಲಿರುವ ತಕ್ಷಶಿಲಾ ಕಟ್ಟಡದಿಂದ ನಾಪತ್ತೆಯಾಗಿದ್ದನು.

ನಾನು ಕಚೇರಿಯ ಸಹೋದ್ಯೋಗಿಗಳ ಜೊತೆ ಟ್ರಿಪ್ ಗೆ ಹೋಗುತ್ತಿದ್ದೇನೆ. ಭಾನುವಾರ ಸಂಜೆ ವಾಪಸ್ ಬರುವುದಾಗಿ ಸುಶೀಲ್ ತನ್ನ ತಾಯಿಯ ಬಳಿ ಹೇಳಿ ಹೋಗಿದ್ದಾನೆ. ಆದರೆ ಮಗ ಮನೆಗೆ ವಾಪಸ್ ಬರದೇ ಇರುವುದರಿಂದ ಆತಂಕಗೊಂಡ ತಾಯಿ, ಸೋಮವಾರದಿಂದ ಮಗನನ್ನು ಹುಡುಕಲು ಆರಂಭಿಸಿದ್ದಾರೆ. ಮಗ ಕೆಲಸ ಮಾಡುತ್ತಿದ್ದ ಬ್ಯಾಂಕ್ ಶಾಖೆಯ ಬಳಿಯೂ ಹೋಗಿ ಹುಡುಕಾಟ ನಡೆಸಿದ್ದಾರೆ. ಆದರೆ ಸುಶೀಲ್ ಎಲ್ಲಿದ್ದಾನೆ ಎಂಬ ಬಗ್ಗೆ ಕಚೇರಿಯಲ್ಲಿದ್ದ ಸಿಬ್ಬಂದಿಗೂ ತಿಳಿಯದಾಗಿತ್ತು. ಹೀಗಾಗಿ ಕೊನೆಗೆ ತಾಯಿ ಡಿಸೆಂಬರ್ 14ರಂದು ವೊರ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

img 1608267803039 351

ತಾಯಿ ನೀಡಿದ ದೂರು ಸ್ವೀಕರಿಸಿ ಪೊಲೀಸರು ಸುಶೀಲ್ ಹುಡುಕಾಟ ಆರಂಭಿಸಿದ್ದಾರೆ. ಈ ಮಧ್ಯೆ ಪೊಲೀಸರಿಗೆ ಗುರುವಾರ ಬೆಳಗ್ಗೆ ಸುಶೀಲ್ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸುಶೀಲ್ ಪೋಷಕರನ್ನು ಕರೆಸಿದ್ದಾರೆ. ಅಂತೆಯೇ ಶವ ತಮ್ಮ ಮಗನದ್ದು ಎಂದು ಗುರುತು ಹಿಡಿದರು.

ಇತ್ತ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಬುಧವಾರ ಎರಡು ಸೂಟ್ ಕೇಸ್ ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸೂಟ್ ಕೇಸ್ ತೆರೆದು ನೋಡಿದಾಗ ಅದರಲ್ಲಿ ತುಂಡು ತುಂಡಾದ ದೇಹದ ಭಾಗಗಳು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಹಾಗೂ ಸಾಕ್ಷ್ಯ ನಾಶದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Police Jeep

ಸೂಟ್ ಕೇಸ್ ಮೇಲಿದ್ದ ಸ್ಟಿಕ್ಕರ್ ಮೂಲಕ ಇಡೀ ಪ್ರಕರಣವನ್ನು ಭೇದಿಸುವ ಪ್ರಯತ್ನ ಮಾಡಿದೆವು. ಸ್ಟಿಕ್ಕರ್ ಸಹಾಯದಿಂದ ಸೂಟ್ ಕೇಸ್ ಮಾರಾಟ ಮಾಡಿದವನ ಬಳಿ ಹೋದೆವು. ಆಗ ಆತ ಹೌದು ತನ್ನ ಅಂಗಡಿಯಿಂದಲೇ ಈ ಸೂಟ್ ಕೇಸ್ ಖರೀದಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ ಮುಂದಿನ ತನಿಖೆಗೆ ಸಹಾಯ ಕೂಡ ಮಾಡಿದ್ದಾನೆ ಎಂದು ಅಧಿಕಾರಿ ತಿಳಿಸಿದರು.

ಶವ ಸಿಕ್ಕ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಸ್ನೇಹಿತ ನಡಾರ್ ನನ್ನು ಗುರುತಿಸಲಾಗಿದೆ. ಬುಧವಾರ ತಡರಾತ್ರಿ ನಡಾರ್ ಹಾಗೂ ಆತನ ಪತ್ನಿ ನೆರಲ್ ನಲ್ಲಿರುವ ನಿವಾಸದಿಂದ ಏನನ್ನೋ ಎತ್ತಿಕೊಂಡು ಹೋಗುತ್ತಿರುವುದು ಬೆಳಕಿಗೆ ಬಂದಿದೆ.

Police

ಮುಂಬೈನ ಕಾಲ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಶೀಲ್ ಹಾಗೂ ಸಲೋಮಿ ಪರಿಚಯವಾಗಿದೆ. ಡಿಸೆಂಬರ್ 12ರಂದು ರಾತ್ರಿ ಸುಶೀಲ್ ನಡಾರ್ ಮನೆಗೆ ಬಂದಿದ್ದಾನೆ. ಅಲ್ಲದೆ ಈ ವೇಳೆ ನಡಾರ್ ಪತ್ನಿಯ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದಾನೆ. ಈ ಸಿಟ್ಟಿನಿಂದಲೇ ಪತಿ ಹಾಗೂ ಪತ್ನಿ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ದೇಹವನ್ನು 12 ಪೀಸ್ ಗಳನ್ನಾಗಿ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಗುರುವಾರ ರಾತ್ರಿ ಬಿಸಾಕಿದ್ದಾರೆ. ಮೃತದೇಹದಲ್ಲಿ ಬಲಕೈ ಮಿಸ್ ಆಗಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಈ ಇಬ್ಬರನ್ನು ಇಂದು ಕೋರ್ಟಿಗೆ ಹಾಜರುಪಡಿಸಲಾಗಿದೆ.

TAGGED:bankfriendhusbandmumbaiMurderPublic TVsuitcaseWifeಕೊಲೆಪತ್ನಿಪಬ್ಲಿಕ್ ಟಿವಿಬ್ಯಾಂಕ್ಮುಂಬೈಸೂಟ್ ಕೇಸ್ಸ್ನೇಹಿತ
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

Donald Trump 1
Latest

3 ದಿನಗಳ ಒಳಗಡೆ ಒಪ್ಪಿಕೊಳ್ಳಿ – ಇಲ್ಲದಿದ್ದರೆ ತೈಲ ಪೈಪ್‌ಲೈನ್‌ಗಳು ಸ್ಫೋಟಗೊಳ್ಳುತ್ತೆ: ಇರಾನಿಗೆ ಟ್ರಂಪ್‌ ವಾರ್ನಿಂಗ್‌

Public TV
By Public TV
14 minutes ago
The Madhya Pradesh ministers brother abused and threatened the woman officer
Crime

ʻನಿನ್ನ ಹೂತು ಹಾಕ್ಬಿಡ್ತೀನಿʼ – ಸಚಿವರ ಸಹೋದರನಿಂದ ಮಹಿಳಾ ಅಧಿಕಾರಿಗೆ ಬೆದರಿಕೆ

Public TV
By Public TV
1 hour ago
Chinnaswamy Stadium 1
Bengaluru City

ಚಿನ್ನಸ್ವಾಮಿ ಭದ್ರತಾ ಲೋಪ ಕೇಸ್‌ಗೆ ಟ್ವಿಸ್ಟ್‌ – ಸಂಬಳ ನೀಡದ್ದಕ್ಕೆ ಆರ್‌ಸಿಬಿ ಮ್ಯಾಚ್ ದಿನವೇ ಸೇಡು ತೀರಿಸಿಕೊಂಡ ಸಿಬ್ಬಂದಿ!

Public TV
By Public TV
1 hour ago
Ashok Pattan
Bengaluru City

ಮೇ 2ನೇ ವಾರದಲ್ಲಿ ಸಿಹಿ ಸುದ್ದಿ ಕೊಡುವ ಭರವಸೆ ಹೈಕಮಾಂಡ್ ಕೊಟ್ಟಿದೆ: ಅಶೋಕ್ ಪಟ್ಟಣ್

Public TV
By Public TV
2 hours ago
Kunigal MLA Ranganath
Bengaluru City

ಬರ್ತ್‌ಡೇ ಬಾಯ್ ಡಿಕೆಶಿಗೆ ಹೈಕಮಾಂಡ್ ‘ಬಂಪರ್ ಗಿಫ್ಟ್’! – ಮೇ 15ರೊಳಗೆ ಸಿಗಲಿದೆ ಸಿಹಿ ಸುದ್ದಿ: ಕುಣಿಗಲ್ ಶಾಸಕ ರಂಗನಾಥ್

Public TV
By Public TV
2 hours ago
mother and daughter die after falling into agricultural pond in anekal
Bengaluru Rural

ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಮಗಳು ಸಾವು – ಪತಿ ವಿರುದ್ಧ ದೂರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?