Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

‘ದಿಯಾ’ ಅಷ್ಟು ಭಾವನೆಗಳನ್ನ ತುಂಬಿದ್ದಾದ್ರೂ ಹೇಗೆ..?

Public TV
Last updated: October 14, 2020 1:40 pm
Public TV
Share
8 Min Read
DIA
SHARE

– ರುವಾರಿ ಅಶೋಕ್ ಹೇಳೊದೇನು?

ಒಬ್ಬ ಸಿನಿಪ್ರೇಕ್ಷಕನಾದವನು ಒಂದು ಸಿನಿಮಾವನ್ನ ಹೇಗೆ ಆಯ್ಕೆ ಮಾಡ್ಕೋಳ್ತಾನೆ ಗೊತ್ತಾ..? ಒಂದು ನಾಯಕ ಅಥವಾ ನಾಯಕಿ ವಿಚಾರದಲ್ಲಿ ಯಾರಾದ್ರೂ ಒಬ್ರು ಟ್ಯಾಲೆಂಟ್ ಆಗಿದ್ರೆ ಅವರ ಸಿನಿಮಾಗಳಿಗೆ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಹುಟ್ಟಿಕೊಳ್ತಾರೆ. ಆ ವರ್ಗದವರು ಸಿನಿಮಾವನ್ನ ನೋಡ್ತಾರೆ. ತುಂಬಾ ಚ್ಯೂಸಿಯಾಗಿರುವ ಪ್ರೇಕ್ಷಕ ಸುಮಾರು ವರ್ಗದಲ್ಲಿ ಅಂದಾಜಿಸಿ ಸಿನಿಮಾ ಆಯ್ಕೆ ಮಾಡಿಕೊಳ್ತಾನೆ. ಅದರಲ್ಲಿ ನಿರ್ದೇಶಕ ಯಾರು ಎಂಬುದರ ಮೇಲೂ ಸಿನಿಮಾ ನೋಡುಗರು ಇದ್ದಾರೆ. ಅಶೋಕ್ ಅನ್ನೋ ಹೆಸರು ಕೇಳಿದ್ರೆ ಇನ್ಮುಂದೆ ಯಾರು ಬೇಕಾದ್ರೂ ಸಿನಿಮಾ ನೋಡುವ ಹುಮ್ಮಸ್ಸು ಬರುತ್ತೆ. ಆ ತಾಕತ್ತನ್ನ ಸೃಷ್ಟಿ ಮಾಡಿರೋದೆ ಈ ಕೆ.ಎಸ್ ಅಶೋಕ್.

ಎಸ್. ರೀಲ್ ದೆವ್ವವನ್ನು ಒಂದಷ್ಟು ದಿನ ಜನರ ಬಾಯಲ್ಲಿ ರಿಯಲ್ ದೆವ್ವವಾಗಿ ಓಡಾಡಿಸಿದ 6-5=2 ಸಿನಿಮಾದ ರುವಾರಿ, ಭಾವನೆಗಳಲ್ಲೇ ಹಾಗೇ ತೇಲಿಸಿ ದಿಯಾ ಸಿನಿಮಾದಿಂದ ಹೀಗೂ ಸಿನಿಮಾ ಮಾಡಬಹುದಾ ಎಂಬ ಉದ್ಘಾರ ಮನಸ್ಸಲ್ಲಿ ಬರುವಂತೆ ಮಾಡಿದ ಅದೇ ಡೈರೆಕ್ಟರ್ ಅಶೋಕ್ ಬಗ್ಗೆ ನಾವಿವತ್ತು ಮಾತಾಡ್ತಾ ಇದ್ದೀವಿ. ನಿಮ್ಗೆಲ್ಲಾ ಅಶೋಕ್ ಅವರ ನಿರ್ದೇಶನ ಹೇಗಿರುತ್ತೆ ಅಂತ ಗೊತ್ತು. ಆದ್ರೆ ನಮ್ಗೆ ಅಷ್ಟಕ್ಕೆ ಕುತೂಹಲ ತಣಿಯುತ್ತಾ. ನೋ ವೇ ಚಾನ್ಸೇ ಇಲ್ಲ. ಈ ಐಡಿಯಾಗಳೆಲ್ಲಾ ಹೇಗೆ ಬರುತ್ತೆ ಅನ್ನೋ ಕುತೂಹಲ ನಿಮ್ಗೂ ಹುಟ್ಟಿರ್ಲೇ ಬೇಕು ಅಲ್ವಾ. ಅದನ್ನ ಅರಿತುಕೊಂಡೇ ಅವರನ್ನ ಕಾಂಟ್ಯಾಕ್ಟ್ ಮಾಡಿ ಒಂದಷ್ಟು ಒಳಾಂಗಣ ವಿಚಾರಗಳನ್ನ ತಿಳಿದುಕೊಂದ್ದೀವಿ. ಅದೆಲ್ಲವೂ ಕಂಪ್ಲೀಟ್ ಡಿಟೈಲ್ ಆರ್ಟಿಕಲ್ ನಲ್ಲಿ ನಿಮ್ಗೆ ಸಿಗಲಿದೆ.

ashok

ಎಲ್ಲರಂತೆ ನಾನೂ ಯೋಚಿಸಿದ್ರೆ ವಿಭಿನ್ನ ಸಿನಿಮಾ ಹೇಗೆ ಕೊಡೋದು?:
ಅಶೋಕ್ ಎಂಬ ಹೆಸರು ಕೇಳಿದ್ರೆ ಈಗ ಎಲ್ಲರ ಕಿವಿ ನಿಮಿರುತ್ತೆ. ಸಕ್ಸಸ್ ಫುಲ್ ಡೈರೆಕ್ಟರ್, ಮಾಡಿದ್ರೆ ಮತ್ತೊಂದು ಸಕ್ಸಸ್ ಸಿನಿಮಾನೇ ಮಾಡ್ತಾರೆ ಅನ್ನೋ ನಂಬಿಕೆ. ಹೀಗಾಗಿ ಈ ಪ್ರಶ್ನೆಯನ್ನ ಅವರ ಮುಂದೆ ಇಟ್ಟಾಗ, ಸಿನಿಮಾವನ್ನ ಎಲ್ಲರು ಮಾಡ್ತಾರೆ. ಅದೇ ಸಬ್ಜೆಕ್ಟ್, ಅದೇ ಪ್ಲೇಸ್ ಗಳು. ಆದ್ರೆ ಇರೋ ಸಬ್ಜೆಕ್ಟ್ ನಲ್ಲೇ ಏನೋ ಇದೆ ಅಂತ ಅನ್ನಿಸಬೇಕು ಅಂತ ಸಿನಿಮಾಗಳನ್ನ ಕೊಡಬೇಕು. ಹೊಸ ಸಿನಿಮಾ ಮಾಡ್ಬೇಕು ಅನ್ನೋದು ನನ್ನ ಗುರಿ. ಸಿನಿಮಾ ಮಾಡ್ಬೇಕಲ್ಲ ಅಂತ ಆಲ್ಟ್ರನೇಟ್ ಸಿನಿಮಾ ಮಾಡೋದಲ್ಲ. ಅದೇ ಪ್ರೀತಿ, ಅದೇ ದುಷ್ಮನಿ ವಿಚಾರಗಳೇ ನಾವೂ ಬದುಕುತ್ತಿರುವ ಪ್ರಪಂಚದಲ್ಲಿರೋದು. ಹೀಗಾಗಿ ಜನರಿಗೆ ರೀಚ್ ಮಾಡುವಾಗ ಕೊಡೊ ಪ್ರೆಸೆಂಟೇಷನ್ ಇದೆಯಲ್ಲ ಅದು ಬಹಳ ಮುಖ್ಯವಾಗುತ್ತೆ. ಆ ಸಿನಿಮಾ ನೋಡಿದ್ರೆ ನಂಗೇನೆ ಎಕ್ಸೈಟ್ ಅನ್ನಿಸ್ಬೇಕು. ಸಬ್ಜೆಕ್ಟ್ ನಲ್ಲಿ ನಂಗೇನೆ ಕುತೂಹಲ ಮೂಡ್ಲಿಲ್ಲ ಅಂದ್ರೆ ನಾನು ಆ ವಿಚಾರವನ್ನ ಟಚ್ ಮಾಡೋಕು ಹೋಗಲ್ಲ? ಅನ್ನೋದು ನಿರ್ದೇಶಕರ ಮಾತು. ಇದಕ್ಕೆ ಇರ್ಬೇಕು ನಮ್ಮ ನಡುವೆ ಇರೋ ಸಣ್ಣ-ಸಣ್ಣ ಸಬ್ಜೆಕ್ಟ್ ಗಳನ್ನು 3 ಗಂಟೆಗಳ ಕಾಲ ಕೂತಲ್ಲೇ ಕೂರುವಂತೆ ಮಾಡೋದು.

ಸಕ್ಸಸ್ ಬೇಕು ಅಂದ್ರೆ ಪೇಪರ್ ವರ್ಕ್ ಮಾಡಿ:
ಒಬ್ಬ ನಿರ್ದೇಶಕನಿಗೆ ರಿಸರ್ಚ್ ಕ್ಯಾರೆಕ್ಟರ್ ಇಲ್ಲ ಅಂದ್ರೆ ಯಶಸ್ಸು ಅನ್ನೋದು ಕಷ್ಟವೇ ಆಗುತ್ತೆ. ಅದನ್ನೇ ಡೈರೆಕ್ಟರ್ ಅಶೋಕ್ ಅವರು ಕೂಡ ಹೇಳಿದ್ದಾರೆ. ಒಂದು ಸಿನಿಮಾದ ಆಳ ಅಗಲ ಅರಿಯಬೇಕಾದ್ರೆ ಪೇಪರ್ ವರ್ಕ್ ತುಂಬಾ ಮುಖ್ಯ ಆಗುತ್ತೆ. ತುಂಬಾ ಪೇಪರ್ ವರ್ಕ್ ಮಾಡಿದಾಗ ಮಾತ್ರ ಒಂದೊಳ್ಳೆ ಸಿನಿಮಾ ಕೊಡೊದಕ್ಕೆ ಸಾಧ್ಯವಾಗುತ್ತೆ. ಸಿನಿಮಾಗೆ ಯಾವ್ದೋ ಒಂದ್ ಸಬ್ಜೆಕ್ಟ್ ಸಿಗುತ್ತೆ. ಸ್ಟೋರಿ ಬರೆಯೋನ ಕೆಪಾಸಿಟಿ ಇದೆ ಅಂತ ನಮ್ಮ ತಲೆಗೆ ಬಂದಂಗೆ ಸ್ಟೋರಿ ಬರೆದುಕೊಂಡು ಹೋಗೋದಲ್ಲ. ಆ ವಿಚಾರದ ಬಗ್ಗೆ ಒಂದಷ್ಟು ರಿಸರ್ಚ್ ಮಾಡಬೇಕು, ಒಂದಷ್ಟು ಮಂದಿಯನ್ನ ಮಾತಾಡಿಸಬೇಕು. ಆಗ ನಮ್ಮ ತಲೆಯಲ್ಲಿ ಇರುವ ವಿಚಾರಕ್ಕಿಂತ ಡಿಫ್ರೆಂಟ್ ಡಿಫ್ರೆಂಟ್ ವಿಚಾರಗಳು ತಿಳಿಯುತ್ತವೆ. ಸ್ಟೋರಿ ತೆಗೆದುಕೊಂಡು ಹೋಗಬೇಕೆಂದುಕೊಂಡ ರೀತಿಯೇ ಬದಲಾಗುತ್ತೆ ಅನ್ನೋದು ಅವರ ನಂಬಿಕೆ. ಅವರು ಕೂಡ ಇದನ್ನೇ ಅಂತೆ ಫಾಲೋ ಮಾಡೋದು. ಹೇಗೆ ಅನ್ನೋದನ್ನ ಮುಂದೆ ಹೇಳಿದ್ದಾರೆ ನೋಡಿ.

DIA MOVIE 1

ಐಡಿಯಾ ಕೆನ್ ಚೇಂಜ್ ಯುವರ್ ಲೈಫ್?
6-5=2 ಈ ಸಿನಿಮಾವನ್ನ ಜನ ಆಗ ಹುಚ್ಚೆದ್ದು ನೋಡಿದ್ರು. ಆ ಸಿನಿಮಾ ನಿಜ ಅಂದ್ಕೊಂಡಿದ್ರಲ್ಲಿ ನಾನು ಕೂಡ ಒಬ್ಳು. ಈ ಸಿನಿಮಾ ಬಗ್ಗೆ ಡೈರೆಕ್ಟರ್ ಏನಂದ್ರು ಗೊತ್ತಾ..?. ನಾನು ಮೊದಲಿಗೆ ಮಾಡಿದ್ದು ಹಾರಾರ್ ಸಿನಿಮಾ. ಆ ಸಿನಿಮಾ ಬರೋಕು ಮುನ್ನ ಹಾರಾರ್ ಮೂವಿಗಳು ಎಷ್ಟ್ ಬಂದಿಲ್ಲ ಅಲ್ವಾ. ಆದ್ರೆ ಜನ ಆ ಸಿನಿಮಾವನ್ನ ತುಂಬಾ ಪ್ರೀತಿಸಿದ್ರು. ಈಗ್ಲೂ ನೋಡ್ತಾರೆ. ಅದಕ್ಕೆಲ್ಲಾ ರಿಸರ್ಚ್ ಕಾರಣ. ಹಾರಾರ್ ಅನ್ನೋದನ್ನ ಇಟ್ಕೊಂಡು ಹಳ್ಳಿ-ಹಳ್ಳಿ ಸುತ್ತಿದಾಗ, ಒಂದಷ್ಟು ಜನರನ್ನ ಮಾತಾಡಿಸಿದಾಗ ಅದೆಷ್ಟೋ ವಿಚಾರಗಳು ಸಿಕ್ಕಿದ್ವು. ಹಾಗಾಗಿಯೇ ಅಂತ ಒಂದೊಳ್ಳೆ ಸಿನಿಮಾವನ್ನ ಮಾಡೋಕೆ ಸಾಧ್ಯ ಆಯ್ತು. ಇನ್ನು ಮೊನ್ನೆ ಮೊನ್ನೆ ಸಕ್ಸಸ್ ಕೊಟ್ಟಂತ ದಿಯಾ ಸಿನಿಮಾನು ಹಾಗೇ. ಐಡಿಯಾ ಕೆನ್ ಚೆಂಜ್ ಯುವರ್ ಲೈಫ್ ಅಂತಾರಲ್ಲ ಹಾಗೇ. ಪೇಪರ್ ಓದುವಾಗ ಒಂದ್ ಹೆಡ್ ಲೈನ್ ಕಾಣಿಸ್ತು. ಮಿಸ್ ಕಾಲ್ ನಿಂದಾದ ಪರಿಚಯ, ಮುಂದೆ ಏನಾಯ್ತು ಅಂತ. ಅದೇ ಸಬ್ಜೆಕ್ಟ್ ತಗೊಂಡೆ, ರಿಸರ್ಚ್ ಮಾಡ್ದೆ, ಪೇಪರ್ ವರ್ಕ್ ಮಾಡ್ದೆ, ಸಾಕಷ್ಟು ಪುಸ್ತಕಗಳನ್ನ ಓದಿದೆ. ಫೈನಲಿ ಒಂದು ಹಂತಕ್ಕೆ ಸ್ಕ್ರಿಪ್ಟ್ ರೆಡಿ ಮಾಡಿ, ಆತ್ಮೀಯರಲ್ಲಿ ತೋರಿಸಿದೆ. ಎಲ್ಲರು ಚೆನ್ನಾಗಿದೆ ಅಂದ್ರು. ಸಿನಿಮಾ ಶುರು ಮಾಡಿ, ಶೂಟಿಂಗ್ ಮುಗ್ಸಿ, ರಿಲೀಸ್ ಮಾಡಿ, ಸಕ್ಸಸ್ ಕಂಡ್ವಿ.

ದಿಯಾ ಹಣ ಮಾಡುತ್ತೆ ಅಂತ ಗೊತ್ತಿರ್ಲಿಲ್ಲ, ಗೆಲ್ಲುತ್ತೆ ಅನ್ನೋ ನಂಬಿಕೆ ಇತ್ತು:
ಹೆತ್ತವಳಿಗೆ ಹೆಗ್ಗಣ ಮುದ್ದು ಅನ್ನೋ ಮಾತಿದೆ. ತಾವೂ ಮಾಡಿದ ಸಿನಿಮಾ ಹೇಗೆ ಇದ್ದರು ಚೆನ್ನಾಗಿದೆ ಎಂದುಕೊಳ್ಳುವ ಕೆಲವರ ನಡುವೆ ಇವರು ಭಿನ್ನ. ದಿಯಾ ಈಗಾಗಲೇ ಸಕ್ಸಸ್ ಕಂಡ ಸಿನಿಮಾ. ಆದ್ರೆ ಇಷ್ಟೊಂದು ಸಕ್ಸಸ್ ಕಾಣುತ್ತೆ ಅಂತ ನಿರ್ದೇಶಕರಿಗೆ ಗೊತ್ತಿರಲಿಲ್ಲವಂತೆ. ಸಿನಿಮಾ ಇಷ್ಟಪಡ್ತಾರೆ ಅಂತ ಶೇ.100 ಗೊತ್ತಿತ್ತು. ಆದ್ರೆ ಹಣ ಗಳಿಸುತ್ತೆ ಅಂತ ಗೊತ್ತಿರಲಿಲ್ಲ. ಯಾಕಂದ್ರೆ ಕಮರ್ಷಿಯಲ್ ಪರ್ಪಸ್ ನಲ್ಲಿ ಮಾಡೋ ಸಿನಿಮಾಗಳೇ ಬೇರೆ ರೀತಿ ಇರುತ್ತವೇ. ದಿಯಾ ಆ ಮಟ್ಟಿಗೆ ಮಾಡೋಕೆ ಆಗಿರಲಿಲ್ಲ. ದಿಯಾದಲ್ಲಿ ಹಾಡಿಗಾಗ್ಲಿ, ಫೈಟ್ ಗಾಗ್ಲಿ ಪ್ರಾಶಸ್ತ್ಯ ಕೊಟ್ಟಿಲ್ಲ. ಆದ್ರೆ ಬಾಲಿವುಡ್ ನಲ್ಲೆಲ್ಲಾ ಇಂಥ ಸಿನಿಮಾಗಳು ಸಾಕಷ್ಟಿವೆ. ಹೀಗಾಗಿ ಆ ಭಾವನೆಗಳು ಇಲ್ಲು ಕ್ಲಿಕ್ ಆಗ್ತಾವೆ ಅಂತ ಗೊತ್ತಿತ್ತು. ಹೀಗಾಗಿ ಸಾಂಗ್ ಇಲ್ಲದೆಯೂ ರೋಮ್ಯಾಂಟಿಕ್ ಕಥೆಯೊಂದಿಗೆ ಪ್ರಯತ್ನ ಪಡೋಣಾ ಎಂಬ ಚಾಲೆಂಜ್ ಇಟ್ಟುಕೊಂಡೆ ಸಿನಿಮಾ ಟ್ರೈ ಮಾಡಿದ್ದು.

DIA MOVIE 2

ನಾನ್ ಮಾಡಿದ ಸಿನಿಮಾ ಎಲ್ಲಿ ನೋಡಿದ್ರು, ಅದೇ ಭಾವನೆ:
ದಿಯಾ ಓಟಿಟಿ ನಲ್ಲಿ ಓಡಿದ ರಭಸಕ್ಕೆ, ಪ್ರೇಕ್ಷಕರೇ ಬೇಸರ ಮಾಡಿಕೊಂಡ್ರು. ಥಿಯೇಟರ್ ನಲ್ಲಿ ಓಡಿದ್ರೆ ಪ್ರೊಡ್ಯೂಸರ್ ಗೆ ಒಳ್ಳೆ ಲಾಭ ಆಗ್ತಾ ಇತ್ತು ಅಂತ. ಆದ್ರೆ ಈ ಬಗ್ಗೆ ಅಶೋಕ್, ದಿಯಾ ಥಿಯೇಟರ್ ನಲ್ಲಿ ಓಡೋ ಸಿನಿಮಾ ಅಂತ ಅನ್ನಿಸಿಲ್ಲ. ಮೂವಿಗಳನ್ನ ಥಿಯೇಟರ್ ನಲ್ಲಿ ನೋಡುವಷ್ಟು ತೂಕ ಇರ್ಬೇಕು ಅಲ್ವಾ. ಸ್ಟಾರ್ ಸಿನಿಮಾಗಳನ್ನ ಥಿಯೇಟರ್ ನಲ್ಲೇ ನೋಡ್ಬೇಕು. ಹಣ ಕೊಟ್ಟು ನೋಡಿದಾಗ ಹೌದು ನನ್ನ ಹಣಕ್ಕೆ ಸಾರ್ಥಕತೆ ಇದೆ ಅಂತ ಅನ್ನಿಸುತ್ತೆ. ಮನರಂಜನೆ ಅಷ್ಟು ಸಿಗುತ್ತೆ. ಸ್ಟಾರ್ ಸಿನಿಮಾಗಳು ಥಿಯೇಟರ್ ಅನುಭವವನ್ನ ಫೀಲ್ ಮಾಡಿಸ್ತಾರೆ. ಆದ್ರೆ ನಾನ್ ಮಾಡಿದ ಸಿನಿಮಾಗಳು ಥಿಯೇಟರ್ ಸಿನಿಮಾ ಅನ್ನೋಕ್ ಆಗಲ್ಲ. ಯಾಕಂದ್ರೆ ಆ ಸಿನಿಮಾಗಳನ್ನ ಥಿಯೇಟರ್ ನಲ್ಲಿ ನೋಡಿದಾಗ ಎಷ್ಟು ಎಮೋಷನಲ್ ಫೀಲ್ ಆಗುತ್ತೊ ಮೊಬೈಲ್ ನೋಡಿದಾಗಲೂ ಅಷ್ಟೇ ಎಮೋಷನಲ್ ಫೀಲ್ ಆಗುತ್ತೆ. ಅದೆ ಒಬ್ಬ ಸ್ಟಾರ್ ಸಿನಿಮಾವನ್ನ ಮೊಬೈಲ್ ನಲ್ಲಿ ನೋಡಿದ್ರೆ ಆ ಫೀಲ್ ಸಿಗೋದೆ ಇಲ್ಲ. ಫೈಟ್, ಆಕ್ಷನ್, ಆ ಸೌಮಡ್ ಇವನ್ನೆಲ್ಲಾ ಫೀಲ್ ಮಾಡೋಕೆ ನೀವೂ ಥಿಯೇಟರ್ ಗೆ ಹೋಗ್ಬೇಕು. ಥಿಯೇಟರ್ ಗೆ ವರ್ಥ್ ಆಗಿರೋ ಸಿನಿಮಾಗಳನ್ನ ಮಾಡಿದ್ರೆ ನಾವು ಅದನ್ನ ನಿರೀಕ್ಷೆ ಮಾಡಬಹುದು. ಇಲ್ಲಂದ್ರೆ ಥಿಯೇಟರ್ ನಲ್ಲಿ ಕಷ್ಟ ಆಗುತ್ತೆ. ಅಂತ ತುಂಬಾ ಸಿಂಪಲ್ ಆಗಿ ಉತ್ತರಿಸಿದ್ದಾರೆ.

ಹಿಂದಿಯಲ್ಲಿ ನಿರ್ದೇಶನಕ್ಕಿಳಿಯುವ ಸಾಧ್ಯತೆ ಇದೆ:
ಈಗಾಗಲೇ ದಿಯಾ ಸಿನಿಮಾ ತೆಲುಗು, ತಮಿಳು, ಹಿಂದಿ ರೈಟ್ಸ್ ನ್ನ ಪಡೆದಾಗಿದೆ. ಹಿಂದಿಯಲ್ಲಿ ನಿರ್ದೇಶನ ಯಾರ್ ಮಾಡ್ತಾರೆ ಅನ್ನೋ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಿದ್ದಾರೆ. ದಿಯಾ ಇದೀಗ ಹಿಂದಿ, ತಮಿಳು ತೆಲುಗು ಎಲ್ಲಾ ರಿಮೇಕ್ ರೈಟ್ಸ್ ಪಡೆದುಕೊಂಡಿದೆ. ಹಿಂದಿ ರಿಮೇಕ್ ಮಾಡುವುದರ ಬಗ್ಗೆ ಮಾತುಕತೆ ನಡೀತಾ ಇದೆ. ಹಿಂದಿಯಲ್ಲಿ ಕೂಡ ನಾನೇ ಡೈರೆಕ್ಟ್ ಮಾಡ್ತಾ ಇದ್ದೀನಿ. ಇದರ ಜೊತೆ ಜೊತೆಗೆ ಬೇರೊಂದು ಸಿನಿಮಾದ ಕಥೆ ಬಗ್ಗೆಯೂ ಥಿಂಕ್ ಮಾಡ್ತಾ ಇದ್ದೀನಿ. ಹಾರಾರ್, ರೋಮ್ಯಾಂಟಿಕ್ ಸಿನಿಮಾಗಳನ್ನ ಪ್ರೇಕ್ಷಕರಿಗೆ ನೀಡಿದ್ದಾಯ್ತು. ಈಗ ಸೀರಿಯಲ್ ಕಿಲ್ಲರ್ ಸಿನಿಮಾ ಮಾಡ್ಬೇಕು ಅಂದ್ಕೊಂಡಿದ್ದೀನಿ. ಹೀಗಾಗಿ ಈ ಮಧ್ಯೆ ಆ ಸ್ಕ್ರಿಪ್ಟ್ ಕಡೆ ಗಮನ ಕೊಟ್ಟಿದ್ದೇನೆ.

dia 1

ನನ್ನಿ ತಾಳ್ಮೆಗೆ ಸೆಟ್ ನಲ್ಲಿರುವವರೇ ಬೈತಾರೆ:
6-5=2, ದಿಯಾ ಅಂತ ಸಕ್ಸಸ್ ಮೂವಿ ಕೊಟ್ಟಾಗ್ಲೇ ಎಲ್ಲರೂ ಕೂಡ ಯಾರಿದು ಅಶೋಕ್ ಅಂತ ಸರ್ಚ್ ಮಾಡೇ ಮಾಡಿರ್ತೀರಾ. ಅವರಿಗೆಲ್ಲಾ ಅವರ ತಾಳ್ಮೆಯ ರೂಪವೇ ಪರಿಚಯವಾಗಿರುತ್ತೆ. ಆಗ ಅನ್ಸಿರುತ್ತೆ ಒಬ್ಬ ಡೈರೆಕ್ಟರ್ ಆಗಿ ಇಷ್ಟು ತಾಳ್ಮೆ ಹೇಗೆ ಸಾಧ್ಯ, ಕ್ಯಾಮೆರಾ ಮುಂದೆ ಹೀಗೆ ಇರಬಹುದಾ ಅನ್ನೋ ಪ್ರಶ್ನೆಗಳು ಮೂಡಿರಬಹುದು. ಖಂಡಿತ ಇಲ್ಲ ಅಶೋಕ್ ಅವರ ನಿಜಸ್ವರೂಪವೇ ಅದು. ಮುಂದೆ ಓದಿ ಅವರೇ ಅವರ ಬಗ್ಗೆ ಹೇಳಿಕೊಂಡಿದ್ದಾರೆ. ಶ್ರೀರಂಗಪಟ್ಟಣದ ಕ್ಯಾತನಹಳ್ಳಿ ಎಂಬ ಪುಟ್ಟ ಗ್ರಾಮದಿಂದ ಬಂದವನು ನಾನು. ಸಿನಿಮಾ ನೋಡಿ ಹುಚ್ಚು ಇರುವವರೇ ಸಿನಿಮಾ ಇಂಡಸ್ಟ್ರಿಗೆ ಬರೋದು. ಸಿನಿಮಾ ನೋಡುವಾಗ ಛೆ ಈ ಸೀನು ಹೀಗೆ ಮಾಡಬಾರದಿತ್ತು, ಆ ಫೈಟ್ ಹಿಂಗೆ ಇದ್ದಿದ್ರೆ ಸೂಪರ್ ಎಂಬೆಲ್ಲಾ ಬಿಟ್ಟಿ ಕಮೆಂಟ್ ಹೊಡಿತಾ ಇರ್ತೀವಿ. ನಾನು ಸಿನಿಮಾ ಮಾಡೋಣಾ ಅಂತ ಮನಸ್ಸಿಗೆ ಬರುತ್ತೆ. ಆ ರೀತಿ ಅನ್ನಿಸಿ ಸಿನಿಮಾಗೆ ಬಂದವನು. ಇಂಜಿನಿಯರಿಂಗ್ ಮುಗ್ಸಿ ಒಂದು ಕಂಪನಿಯಲ್ಲಿ ವರ್ಕ್ ಮಾಡ್ತಾ ಇದ್ದೆ. ವರ್ಕ್ ಬಿಟ್ಟು ಚೆನ್ನೈನಲ್ಲಿ ಸಿನಿಮಾ ಕೋರ್ಸ ಸೇರಿಕೊಂಡೆ. ಆನಂತರ ಅಸಿಸ್ಟೆಂಟ್ ಆಗಿ ಕೆಲಸ ಶುರು ಮಾಡಿದೆ. ಮಾಡ್ತಾ ಮಾಡ್ತಾ ದಿಯಾ ಆಂಡ್ 6-5=2 ಎರಡು ಸಿನಿಮಾ ಸ್ಕ್ರಿಪ್ಟ್ ಬರೆದಿದ್ದೆ. ನಿರಾಮಪಕರು ಸಿಕ್ಕ ಮೇಲೆ ಈ ಎರಡು ಸಿನಿಮಾಗಳನ್ನ ನಾನೇ ಮಾಡಿದೆ.

ನಾನು ಓದಿದ್ದು ನವೋದಯ ಶಾಲೆಯಲ್ಲಿ. ಅಲ್ಲಿ ಶಿಸ್ತು, ತಾಳ್ಮೆ ಎರಡನ್ನು ಕಲಿಯಬೇಕಾಗುತ್ತದೆ. ಹೀಗಾಗಿ ನನಗೆ ಬಾಲ್ಯದಿಂದ ಬಂದ ತಾಳ್ಮೆ ಈಗಲೂ ಮುಂದುವರಿಯುತ್ತಿದೆ. ಅದೊಂಥರ ನಂಗು ಬೇಜಾರೇ. ದೇವರು ಸ್ವಲ್ಪ ಜಾಸ್ತಿ ಕೊಟ್ ಬಿಟ್ಟಿದ್ದಾನೆ. ಯಾಕಂದ್ರೆ ಸೆಟ್ ನಲ್ಲಿ ಕೆಲಸ ಸರಿ ಆಗ್ಲಿಲ್ಲ ಅಂದ್ರೆ ಕೂಗಾಡ್ತಾರೆ. ನಾನು ತಾಳ್ಮೆಯಿಂದ ಹೇಳ್ತೆನೆ. ನಂಗೆ ಫೈನಲಿ ಔಟ್ ಪುಟ್ ಚೆನ್ನಾಗಿ ಬರ್ಬೇಕು. ತಾಳ್ಮೆ ಅದಕ್ಕೆ ಅನುಕೂಲ ಮಾಡಿಕೊಟ್ಟಿದೆ.

dia 2

ಒಟ್ಟಾರೆ ಎರಡು ಸಕ್ಸಸ್ ಫುಲ್ ಸಿನಿಮಾ ಕೊಟ್ಟ ತಾಳ್ಮೆಯ ಸ್ವರೂಪಿ ಅಶೋಕ್ ಬಾಲಿವುಡ್ ಗೆ ಜಂಪ್ ಆಗ್ತಾ ಇದ್ದಾರೆ. ಜೊತೆಗೆ ಮತ್ತೊಂದು ಸ್ಕ್ರಿಪ್ಟ್ ಕೂಡ ಮಾಡ್ತಾ ಇದ್ದಾರೆ. ಮತ್ತೊಂದು ಒಳ್ಳೆ ಸಿನಿಮಾವನ್ನ ನೋಡಬಹುದು ಎಂಬ ನಿರೀಕ್ಷೆ ಹಾಗೆ ಉಳಿದಿದೆ.

TAGGED:diaKannadaMoviePublic TVsandalwoodಕನ್ನಡ ಸಿನಿಮಾದಿಯಾಪಬ್ಲಿಕ್ ಟಿವಿಸ್ಯಾಂಡಲ್‍ವುಡ್
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
4 hours ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
5 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
8 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
17 hours ago

You Might Also Like

Temba Bavuma Aiden Markram
Cricket

ಚೋಕರ್ಸ್‌ ಪಟ್ಟ ಕಳಚಿ ಚಾಂಪಿಯನ್‌ ಆಗಲು ಆಫ್ರಿಕಾಗೆ ಬೇಕಿದೆ ಕೇವಲ 69 ರನ್‌!

Public TV
By Public TV
2 hours ago
Vijayapura Rain
Districts

ವಿಜಯಪುರ | ಭಾರಿ ಮಳೆ – ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

Public TV
By Public TV
2 hours ago
ಸಾಂದರ್ಭಿಕ ಚಿತ್ರ
Belgaum

ಬೆಳಗಾವಿ | ಧಾರಾಕಾರ ಮಳೆಗೆ ಕೊಚ್ಚಿಹೋದ ಆಟೋ – ಚಾಲಕ ದುರ್ಮರಣ

Public TV
By Public TV
2 hours ago
Leopard
Districts

ಗ್ರಾಮಸ್ಥರ ನಿದ್ದೆಗೆಡಿಸಿದ ಚಿರತೆ – ಡ್ರೋನ್ ಕ್ಯಾಮೆರಾದಲ್ಲಿ ಸೆರೆ

Public TV
By Public TV
2 hours ago
Hardhik Vibhuthi 2
Latest

ವಿಮಾನ ದುರಂತ – ನಿಶ್ಚಿತಾರ್ಥ ಮುಗಿಸಿ ಹೊರಟ ಜೋಡಿಯ ದಾರುಣ ಅಂತ್ಯ

Public TV
By Public TV
3 hours ago
Basavasagar dam
Districts

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?