Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೇವಲ 7 ನಿಮಿಷದಲ್ಲಿ ಟೀಂ ಇಂಡಿಯಾದ ಕೋಚ್‌ ಆದ ಕಥೆ ಬಿಚ್ಚಿಟ್ಟ ಗ್ಯಾರಿ ಕರ್ಸ್ಟನ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಕೇವಲ 7 ನಿಮಿಷದಲ್ಲಿ ಟೀಂ ಇಂಡಿಯಾದ ಕೋಚ್‌ ಆದ ಕಥೆ ಬಿಚ್ಚಿಟ್ಟ ಗ್ಯಾರಿ ಕರ್ಸ್ಟನ್‌

Cricket

ಕೇವಲ 7 ನಿಮಿಷದಲ್ಲಿ ಟೀಂ ಇಂಡಿಯಾದ ಕೋಚ್‌ ಆದ ಕಥೆ ಬಿಚ್ಚಿಟ್ಟ ಗ್ಯಾರಿ ಕರ್ಸ್ಟನ್‌

Public TV
Last updated: June 16, 2020 12:36 pm
Public TV
Share
3 Min Read
kirsten 1200
SHARE

– ಅನುಭವ ಇಲ್ಲದೇ ಇದ್ದರೂ ಒಲಿದು ಬಂತು ಕೋಚ್‌ ಹುದ್ದೆ
– ಹಳೆ ನೆನಪು ಹಂಚಿಕೊಂಡ ಕರ್ಸ್ಟನ್‌

ನವದೆಹಲಿ: ಟೀ ಇಂಡಿಯಾದ ಯಶಸ್ವಿ ಕೋಚ್‌ ಎಂದೇ ಪ್ರಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್‌ ಕೇವಲ ಏಳು ನಿಮಿಷದಲ್ಲಿ ಹುದ್ದೆಯನ್ನು ಅಲಕರಿಸಿದ್ದರಂತೆ.

ಹೌದು. ಮಾಜಿ ಆರಂಭಿಕ ಆಟಗಾರ ಗ್ಯಾರಿ ಕರ್ಸ್ಟನ್‌ ಈ ಹಿಂದೆ ಕೋಚ್‌ ಆಗಿ ನೇಮಕಗೊಂಡ ಸ್ವಾರಸ್ಯಕರ ವಿಚಾರವನ್ನು ಈಗ ಹಂಚಿಕೊಂಡಿದ್ದಾರೆ. ಈ ವೇಳೆ ಮೇಲ್‌ ಬಂದಾಗ ಏನಾಯ್ತು, ಸಂದರ್ಶನದ ವೇಳೆ ಯಾರು ಏನು ಪ್ರಶ್ನೆ ಕೇಳಿದ್ದರು? ಎಲ್ಲವನ್ನು ಈಗ ವಿವರಿಸಿದ್ದಾರೆ.

gary kirsten 2

ಆಸ್ಟ್ರೇಲಿಯಾದ ಗ್ರೇಗ್‌ ಚಾಪೆಲ್‌ 2005ರಿಂದ 2007ರವರೆಗೆ ಕೋಚ್‌ ಆಗಿದ್ದರು. ಈ ವೇಳೆ ಆಟಗಾರರ ಮತ್ತು ಕೋಚ್‌ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ಬಿಸಿಸಿಐ ಹೊಸ ಕೋಚ್‌ ನೇಮಕ ಮಾಡಲು ಸುನಿಲ್‌ ಗವಾಸ್ಕರ್‌, ರವಿಶಾಸ್ತ್ರಿಯನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ನೇಮಿಸಿತ್ತು.

ಕರ್ಸ್ಟನ್‌ ನೆನಪು ಹಂಚಿಕೊಂಡದ್ದು ಹೀಗೆ
“ಒಂದು ದಿನ ಹಿರಿಯ ಕ್ರಿಕೆಟ್‌ ಆಟಗಾರ ಸುನಿಲ್‌ ಗವಾಸ್ಕರ್‌ ನನಗೆ ಇಮೇಲ್‌ ಮಾಡಿ, ಟೀಂ ಇಂಡಿಯಾ ಕೋಚ್‌ ಹುದ್ದೆಗೆ ನಿಮ್ಮನ್ನು ಪರಿಗಣಿಸಬಹುದೇ” ಎಂದು ಕೇಳಿದ್ದರು. ಇಮೇಲ್‌ ನೋಡಿ,”ಯಾರೋ ಆನ್‌ಲೈನ್‌ ವಂಚಕರು ಮೇಲ್‌ ಮಾಡಿರಬಹುದು” ಎಂದು ಭಾವಿಸಿ ನಾನು ಉತ್ತರ ನೀಡದೇ ಸುಮ್ಮನ್ನಾಗಿದ್ದೆ. ಆದರೆ ಗವಾಸ್ಕರ್‌ ಅವರಿಂದ ಮತ್ತೊಂದು ಇಮೇಲ್‌ ಬಂದಿತ್ತು. “ಇದರಲ್ಲೂ ನೀವು ಸಂದರ್ಶನಕ್ಕೆ ಬರಬಬಹುದೇ” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು.

dhoni gary kirsten

 

ಈ ಇಮೇಲ್‌ ಅನ್ನು ಪತ್ನಿಗೆ ತೋರಿಸಿದಾಗ ಆಕೆ, “ತಪ್ಪಾದ ವ್ಯಕ್ತಿಗೆ ಮೇಲ್‌ ಸೆಂಡ್‌ ಮಾಡಿದ್ದಾರೆ” ಎಂದು ಹೇಳಿದ್ದಳು. ನಿಜವಾಗಿಯೂ ನಾನು ಕೋಚ್‌ ಆಗಲು ಆಸಕ್ತಿ ಇರಲಿಲ್ಲ. ಅಷ್ಟೇ ಅಲ್ಲದೇ ಅನುಭವ ಸಹ ಇರಲಿಲ್ಲ. ಆದರೂ ನೋಡಿಯೋ ಬೀಡೋಣ ಎಂದು ತೀರ್ಮಾನಿಸಿ ಸಂದರ್ಶನಕ್ಕೆ ಹಾಜರಾದೆ.

ಈ ಸಂದರ್ಭದಲ್ಲಿ ಅನಿಲ್‌ ಕುಂಬ್ಳೆ ನನಗೆ ಸಿಕ್ಕಿದರು. ಟೀಂ ಇಂಡಿಯಾದ ನಾಯಕರಾಗಿದ್ದ ಕುಂಬ್ಳೆ ನನ್ನನ್ನು ನೋಡಿ,”ಇಲ್ಲಿ ಏನು ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ನಾನು,”ಕೋಚ್‌ ಹುದ್ದೆಯ ಸಂದರ್ಶನಕ್ಕೆ ಬಂದಿದ್ದೇನೆ. ಮುಂದೆ ನಾನೇ ನಿಮಗೆ ಮಾರ್ಗದರ್ಶನ ನೀಡಲಿದ್ದೇನೆ” ಎಂದು ಹೇಳಿದಾಗ ಕುಂಬ್ಳೆ ನಕ್ಕರು. ನನಗೂ ನಗುವನ್ನು ತಡೆಯಲು ಆಗಲಿಲ್ಲ.

kumble pti 759

 

ಅನುಭವ ಇಲ್ಲದ ಕಾರಣ ನಾನು ಯಾವುದೇ ತಯಾರಿ ಇಲ್ಲದೇ ಸಂದರ್ಶನಕ್ಕೆ ಹಾಜರಾಗಿದ್ದೆ. ರವಿಶಾಸ್ತ್ರಿ ಅವರು, “ದಕ್ಷಿಣ ಆಫ್ರಿಕಾ ತಂಡ ಭಾರತವನ್ನು ಹೇಗೆ ಮಣಿಸಬಹುದು” ಎಂದು ಪ್ರಶ್ನಿಸಿದರು. ಇದಕ್ಕೆ ನಾನು ನಮ್ಮ ತಂಡದ ತಂತ್ರಗಳನ್ನು ಹೇಳದೇ ಮೂರು ನಿಮಿಷದಲ್ಲಿ ಉತ್ತರ ನೀಡಿದ್ದೆ. ಈ ಉತ್ತರ ಎಲ್ಲರಿಗೂ ಖುಷಿ ನೀಡಿತು. ಇದಾದ ನಾಲ್ಕು ನಿಮಿಷಕ್ಕೆ ಒಪ್ಪಂದದ ಪತ್ರ ನನ್ನ ಕೈ ಸೇರಿತ್ತು.

ಪತ್ರ ಸಿಕ್ಕಿದ ಕೂಡಲೇ ಓದಲು ಆರಂಭಿಸಿದೆ. ಮೊದಲ ಪುಟದಲ್ಲಿ ನನ್ನ ಹೆಸರು ಇರಲಿಲ್ಲ. ಬದಲಾಗಿ ಗ್ರೇಗ್‌ ಚಾಪೆಲ್‌ ಹೆಸರು ಇತ್ತು. ಗಮನಕ್ಕೆ ಬಂದ ಕೂಡಲೇ ಬಿಸಿಸಿಐ ಕಾರ್ಯದರ್ಶಿಗೆ ನನ್ನ ಹೆಸರು ಇದರಲ್ಲಿ ಇಲ್ಲ. ನೀವು ಹಳೆಯ ಪತ್ರ ನೀಡಿದ್ದೀರಿ ಎಂದು ತಿಳಿಸಿದೆ. ಬಳಿಕ ಅವರು ಪತ್ರವನ್ನು ಓದಿ ಚಾಪೆಲ್‌ ಹೆಸರನ್ನು ಅಳಿಸಿ ನನ್ನ ಹೆಸರನ್ನು ಬರೆದು ಹಿಂತಿರುಗಿಸಿದ್ದರು ಎಂದು ಹಳೆಯ ನೆನಪುಗಳನ್ನು ಗ್ಯಾರಿ ಕರ್ಸ್ಟನ್‌ ಹಂಚಿಕೊಂಡಿದ್ದಾರೆ.

gary kirsten rcb

ಕರ್ಸ್ಟನ್‌ ಅವರು 2008ರಲ್ಲಿ ಕೋಚ್‌ ಹುದ್ದೆ ಅಲಂಕರಿಸಿದ ಬಳಿಕ ಭಾರತ ತಂಡವು ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ(2009) ಮೊದಲ ಸ್ಥಾನಕ್ಕೆ ಏರಿತ್ತು. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ವೇಳೆ ಟೀಂ ಇಂಡಿಯಾ ಆಟಗಾರರು ಕರ್ಸ್ಟನ್‌ ಅವರನ್ನು ಎತ್ತಿಕೊಂಡು ಕುಣಿದಾಡಿದ್ದರು.

ಟೀಂ ಇಂಡಿಯಾ ಆಟಗಾರರಲ್ಲಿ ಹೊಂದಾಣಿಕೆ ಇಲ್ಲ. ಡ್ರೆಸ್ಸಿಂಗ್‌ ರೂಂ ವಾತಾವರಣ ಸರಿ ಇಲ್ಲ ಎಂಬ ಆರೋಪಗಳು ಕೇಳಿ ಬಂದಿತ್ತು. ಆದರೆ ಕರ್ಸ್ಟನ್‌ ಆಯ್ಕೆ ಆದ ಬಳಿಕ ಟೀಂ ಇಂಡಿಯಾದ ಸ್ವರೂಪವೇ ಬದಲಾಯಿತು. ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದ ಕಾರಣ ಇಂದು ತಂಡ ಮೇಲೆ ಉತ್ತಮ ಪರಿಣಾಮ ಬೀರಿತ್ತು. 2018ರಲ್ಲಿ ಐಪಿಎಲ್‌ ಸರಣಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೋಚ್‌ ಆಗಿ ಆಯ್ಕೆ ಆಗಿದ್ದರು.

TAGGED:coachcricketGary Kirstenkannada newsTeam indiaಕೋಚ್ಕ್ರಿಕೆಟ್ಗ್ಯಾರಿ ಕರ್ಸ್ಟನ್‌ಟೀಂ ಇಂಡಿಯಾದಕ್ಷಿಣ ಆಫ್ರಿಕಾ
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

zameer ahmed
Bengaluru City

ದಾವಣಗೆರೆಯಲ್ಲಿ ಪ್ರಚಾರಕ್ಕೆ ನಕಾರ – ಸಚಿವ ಜಮೀರ್ ಅಹ್ಮದ್ ಸೇರಿ ಮೂವರ ವಿರುದ್ಧ ಹೈಕಮಾಂಡ್‌ಗೆ ದೂರು

Public TV
By Public TV
3 minutes ago
school children22
Bagalkot

1ನೇ ತರಗತಿ ದಾಖಲಾತಿಗೆ 60 ದಿನಗಳ ವಿನಾಯಿತಿ – ರಾಜ್ಯ ಸರ್ಕಾರ ಅಧಿಕೃತ ಆದೇಶ

Public TV
By Public TV
9 minutes ago
Hulikal Ghat Cm Compensation
Districts

ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Public TV
By Public TV
36 minutes ago
murder case accused karwar
Latest

ಆಸ್ತಿಯಲ್ಲಿ ಪಾಲು ಕೇಳಿದ ವ್ಯಕ್ತಿಯ ಕೊಲೆ ಕೇಸ್‌ – ಮೂವರಿಗೆ ಜೀವಾವಧಿ ಶಿಕ್ಷೆ

Public TV
By Public TV
41 minutes ago
Karnataka PUC Result Student passes with 111 marks out of 100 Hindi
Bengaluru City

2nd PUC Result 2026 – 100ಕ್ಕೆ 111 ಅಂಕ ನೀಡಿದ ಪಿಯು ಬೋರ್ಡ್‌!

Public TV
By Public TV
1 hour ago
Train
Bengaluru City

ಮೈಸೂರು-ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ರೈಲುಗಳ ಸಂಚಾರ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?