ಹಿಂದೂ ಮುಖಂಡರ ಹತ್ಯೆಗೆ ಯತ್ನ ಕೇಸ್: ಹಂತಕರಿಗಿತ್ತು ಪ್ರತಿ ತಿಂಗಳು 10 ಸಾವಿರ ವೇತನ

Public TV
1 Min Read
CCB 5

ಬೆಂಗಳೂರು: ಹಿಂದೂ ಮುಖಂಡರ ಹತ್ಯೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಹಂತಕರು ದಿನಕ್ಕೊಂದು ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಿದ್ದಾರೆ. ಮುಸ್ಲಿಂ ವಿರೋಧಿ ಕೆಲಸ ಮಾಡುವವರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ತರಬೇತಿ ಕೊಡಲಾಗುತ್ತಿತ್ತು. ಅಷ್ಟೇ ಅಲ್ಲದೇ ಜೀವನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ  ವೇತನ ಕೊಡುತ್ತಿದ್ದರಂತೆ.

ಕಳೆದ ಒಂದೆರಡು ತಿಂಗಳಿಂದ ಈ ಹಣ ಸಂದಾಯ ಆಗುತ್ತಿರಲಿಲ್ಲವಂತೆ. ಬರೋಬ್ಬರಿ ಕಳೆದ ಒಂದೂವರೆ ವರ್ಷದಿಂದ ಹಣ ಸಂದಾಯ ಆಗುತ್ತಿತ್ತು ಎನ್ನುವ ಮಾಹಿತಿಯನ್ನು ಆರೋಪಿಗಳು ಹೊರಹಾಕಿದ್ದಾರೆ. ಆದರೆ ಯಾರು, ಯಾವಾಗ ಎಲ್ಲಿ ಹಣ ಕೊಡುತ್ತಿದ್ದರು ಎನ್ನುವುದು ಮಾತ್ರ ಸ್ಪಷ್ಟವಾಗಿ ಹೇಳಿಲ್ಲ. ಬಂಧಿತರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದನ್ನೂ ಓದಿ: ಸಿಎಎ ಪರ ಬ್ಯಾಟಿಂಗ್ ಮಾಡಿದ್ದಕ್ಕೆ ಟಾರ್ಗೆಟ್ – ಸೂಲಿಬೆಲೆ, ತೇಜಸ್ವಿ ಕೊಲೆಗೆ ಸ್ಕೆಚ್

CCB 2

ಈ ಹಂತಕರ ಉದ್ದೇಶ ಕೇವಲ ಸಿಎಎ ಪರ ಜನಜಾಗೃತಿ ಮಾಡಿದವರ ಹತ್ಯೆ ಮಾಡುವುದು ಅಷ್ಟೇ ಆಗಿರಲಿಲ್ಲ. ಮುಸ್ಲಿಂ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಹತ್ಯೆ ಮಾಡುವುದು ಉದ್ದೇಶವನ್ನು ಹೊಂದಿದ್ದರು. ಅದು ಕೂಡ ಇವರ ಮೇಲಿದ್ದ ಮಾಸ್ಟರ್ ಮೈಂಡ್ ಯಾವ ಟಾರ್ಗೆಟ್ ನೀಡುತ್ತಾನೋ ಅದನ್ನು ಮಾಡಿ ಮುಗಿಸುವುದಷ್ಟೇ ಇವರ ಕೆಲಸ ಆಗಿತ್ತು ಎಂಬ ಮೂಲಗಳಿಂದ ಮಾಹಿತಿ ಲಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *