Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ವಜ್ರಮುಷ್ಠಿ ಕಾಳಗದ ಉದ್ದೇಶ ತಿಳಿಸಿದ ಜಟ್ಟಿ

Public TV
Last updated: October 8, 2019 1:11 pm
Public TV
Share
2 Min Read
MYS JETTY final
SHARE

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ಖಾಸಗಿ ದಸರಾದಲ್ಲಿ ವಜ್ರಮುಷ್ಠಿ ಕಾಳಗಕ್ಕೆ ವಿಶೇಷವಾದ ಸ್ಥಾನಮಾನವಿದೆ. ಈ ಕಾಳಗ ನಡಯದೇ ವಿಜಯದಶಮಿ ಕಾರ್ಯಕ್ರಮ ಸಂಪನ್ನವಾಗಲ್ಲ ಅನ್ನೋ ಪ್ರತೀತಿ ಹಿಂದಿನಿಂದಲೂ ಇದೆ. ಮೈನವಿರೇಳಿಸುವಂತಹ ಸಮರ ಕಲೆಯಾದ ಈ ವಜ್ರಮುಷ್ಠಿ ಕಾಳಗವನ್ನು ರಾಜ ಮಹಾರಾಜರ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಈ ಕಾಳಗದ ಉದ್ದೇಶವನ್ನು ಜಟ್ಟಿಯೊಬ್ಬರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಜಟ್ಟಿ ಕಾಳಗದಲ್ಲಿ ಭಾಗವಹಿಸಲು ನಡೆಸಿದ ತಯಾರಿ ಬಗ್ಗೆ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ನಾರಾಯಣ ಜಟ್ಟಿ ಮಾತನಾಡಿ, ಆರು ತಿಂಗಳ ಮುಂಚೆ ಕಷ್ಣ ಜಟ್ಟಿಯವರು ತಯಾರಿ ನಡೆಸುವಂತೆ ಸೂಚನೆ ಕೊಡುತ್ತಾರೆ. ಹೀಗಾಗಿ ಊರಲ್ಲೇ ಫಿಟ್ನೆಸ್ ಗಾಗಿ ವ್ಯಾಯಾಮ, ಯೋಗ ಹಾಗೂ ಕರಾಟೆ, ಮಾರ್ಷಲ್ ಆರ್ಟ್ಸ್(Martial Arts) ತರಬೇತಿ ಪಡೆಯುತ್ತೇನೆ ಎಂದರು.

MYS JETTY

20 ವರ್ಷದಿಂದ ಅಂದರೆ 1999 ನಿಂದ ಇಲ್ಲಿಯವರೆಗೂ ಜಟ್ಟಿ ಕಾಳಗದಲ್ಲಿ ಭಾಗವಹಿಸುತ್ತಿದ್ದೇನೆ. ಇಲ್ಲಿ ಸೋಲು-ಗೆಲುವೆಂಬುದಿಲ್ಲ. ಶಾಂತಿಗಾಗಿ ಇದರಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಚಾಮುಂಡೇಶ್ವರಿ ತಾಯಿಗೆ ನಮ್ಮ ರಕ್ತ ಅರ್ಪಿಸುವ ಉದ್ದೇಶ ತಲಾತಲಾಂತರಗಳಿಂದ ಬೆಳೆದು ಬಂದಿದೆ ಎಂದು ಅವರು ತಿಳಿಸಿದರು.

ಕುಲದೇವತೆಯ ಶಾಂತಿಗಾಗಿ ವಜ್ರಮುಷ್ಠಿ ಕಾಳಗವನ್ನು ಬೇರೆಲ್ಲೂ ಆಡದೇ ಅರಮನೆಯಲ್ಲಿ ಮಾತ್ರ ಆಡುತ್ತೇವೆ. ಇದರಿಂದಾಗುವ ಗಾಯ 2 ದಿನದಲ್ಲಿ ವಾಸಿಯಾಗುತ್ತದೆ. ದೊಡ್ಡ ಗಾಯವೇನೂ ಆಗಲ್ಲ. ಯಾಕೆಂದರೆ ದೇವಿಯ ವರ ಇದೆ ಅನಿಸುತ್ತದೆ. ಮರು ದಿನ ಟಿಂಚರ್ ಹಾಕಿದರೆ ಸರಿ ಹೋಗುತ್ತದೆ ಎಂದರು.

ಈ ಮೊದಲು ತಂದೆ ಭಾಗವಹಿಸುತ್ತಿದ್ದರು. ಸದ್ಯ ನಾನು ಪಾಲ್ಗೊಳ್ಳುತ್ತಿದ್ದೇನೆ. ಮುಂದೆ ನನ್ನ ಮಕ್ಕಳು ಜಟ್ಟಿ ಕಾಳಗದಲ್ಲಿ ಭಾಗವಹಿಸಬಹುದು. ಅವಕಾಶ ಸಿಕ್ಕಿದಾಗ ಬಂದು ಕಾಳಗದಲ್ಲಿ ಪಾಲ್ಗೊಳ್ಳುತ್ತೇವೆ. ಯಾಕೆಂದರೆ ಹೊಸಬರು ಬಂದಾಗ ಅವರಿಗೆ ನಾವು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ 2, 3 ಅಥವಾ 5 ವರ್ಷಕ್ಕೊಮ್ಮೆ ಚಾನ್ಸ್ ಸಿಗುತ್ತದೆ.

MYS JETTY 2 e1570520432997

ಇದಕ್ಕೂ ಮೊದಲು ಚನ್ನಪಟ್ಟಣದ ನರಸಿಂಹ ಜಟ್ಟಿ ಮಾತನಾಡಿ, ಈ ಹಿಂದೆ 2010ರಲ್ಲಿ ಭಾಗವಹಿಸಿದ ಬಳಿಕ ಈ ಬಾರಿ ಭಾಗವಹಿಸಿರುವುದಾಗಿ ತಿಳಿಸಿದರು. 2010ರಲ್ಲಿ ಜಟ್ಟಿ ಕಾಳಗದಲ್ಲಿ ಗೆದ್ದಿದ್ದೇವೆ. ವಂಶಪಾರಂಪರಿಕವಾಗಿ ಜಟ್ಟಿ ಕಾಳಗದಲ್ಲಿ ಭಾಗವಹಿಸುತ್ತಿದ್ದೇವೆ. ಇನ್ನು ಮುಂದೆ ಜಟ್ಟಿ ಕಾಳಗದಲ್ಲಿ ನಮ್ಮ ಕಿರಿಯರು ಕೂಡ ಭಾಗವಹಿಸಬೇಕು ಎಂದು ತಿಳಿಸಿದರು.

ಅರಮನೆ ಆವರಣದಲ್ಲಿರುವ ವರಹಸ್ವಾಮಿ ದೇವಸ್ಥಾನದ ಬಳಿ ಜಟ್ಟಿಗಳಿಗೆ ಕೆಮ್ಮಣ್ಣು ಹಾಗೂ ಕೈಗೆ ಬಟ್ಟೆಗಳನ್ನು ಕಟ್ಟುವ ಮೂಲಕ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಚನ್ನಪಟ್ಟಣ, ಚಾಮರಾಜನಗ ಹಾಗೂ ಮೈಸೂರು ಹೀಗೆ ಒಟ್ಟು 4 ಜಟ್ಟಿಗಳು ಈ ಕಾಳಗದಲ್ಲಿ ಭಾಗವಹಿಸಿದ್ದಾರೆ.

TAGGED:jetty kalagamysurumysuru dasara 2019Public TVVajramushti Kalagaಜಟ್ಟಿ ಕಾಳಗಪಬ್ಲಿಕ್ ಟಿವಿಮೈಸೂರುಮೈಸೂರು ದಸರಾ 2019ವಜ್ರಮುಷ್ಠಿ ಕಾಳಗ
Share This Article
Facebook Whatsapp Whatsapp Telegram

You Might Also Like

Temba Bavuma 2
Cricket

ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

Public TV
By Public TV
23 seconds ago
Koppal nava brindavana
Districts

ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

Public TV
By Public TV
17 minutes ago
WTC SA 3
Cricket

ದ. ಆಫ್ರಿಕಾ ಈಗ ʻವಿಶ್ವ ಟೆಸ್ಟ್‌ ಚಾಂಪಿಯನ್‌ʼ – 27 ವರ್ಷಗಳ ಬಳಿಕ ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಂಡ ಹರಿಣರು

Public TV
By Public TV
22 minutes ago
Chikkodi Crime
Belgaum

ಅಣ್ಣ ಶ್ರೀಮಂತ ಆಗ್ಬಿಟ್ಟ ಅಂತ ತಮ್ಮ ಮಾಡಿದ್ದೆಂತ ನೀಚ ಕೆಲ್ಸ ಗೊತ್ತಾ? – ಹಂತಕ ಸಿಕ್ಕಿಬಿದ್ದಿದ್ದೇ ರೋಚಕ!

Public TV
By Public TV
25 minutes ago
Untitled 1 copy
Latest

11A ಸೀಟ್ ಮಿಸ್ಟರಿ – 2 ವಿಮಾನ ಪತನ, ಒಂದೇ ಕಡೆ ಕುಳಿತಿದ್ದ ಇಬ್ಬರು ಮೃತ್ಯುಂಜಯರು!

Public TV
By Public TV
53 minutes ago
Mallikarjun Kharge
Latest

ವಿಮಾನ ದುರಂತ ಸ್ಥಳಕ್ಕೆ ಭೇಟಿ – ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ ಮಲ್ಲಿಕಾರ್ಜುನ ಖರ್ಗೆ

Public TV
By Public TV
54 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?