Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಧಿಕಾರವಿಲ್ಲದಿದ್ರೆ ಬಿಎಸ್‍ವೈ ಸತ್ತು ಹೋಗ್ತಿದ್ರು- ಎಸ್.ಆರ್.ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಅಧಿಕಾರವಿಲ್ಲದಿದ್ರೆ ಬಿಎಸ್‍ವೈ ಸತ್ತು ಹೋಗ್ತಿದ್ರು- ಎಸ್.ಆರ್.ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ

Districts

ಅಧಿಕಾರವಿಲ್ಲದಿದ್ರೆ ಬಿಎಸ್‍ವೈ ಸತ್ತು ಹೋಗ್ತಿದ್ರು- ಎಸ್.ಆರ್.ಶ್ರೀನಿವಾಸ್ ವಿವಾದಾತ್ಮಕ ಹೇಳಿಕೆ

Public TV
Last updated: October 3, 2019 6:20 pm
Public TV
Share
2 Min Read
TMK S R SRINIVAS a
SHARE

– ಮೋದಿ ಎದುರು ನಿಂತು ಮಾತಾಡೋ ಸಂಸದರಿಲ್ಲ

ತುಮಕೂರು: ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರವಿಲ್ಲದಿದ್ದರೆ ಅವರು ಸತ್ತು ಹೋಗುತ್ತಿದ್ದರು ಎಂದು ಮಾಜಿ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರು 100 ಬಾರಿ ಒಂದೇ ಸುಳ್ಳು ಹೇಳಿ ಅದನ್ನು ಸತ್ಯ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಹುಮತವಿಲ್ಲದಿದ್ದರು ಕೂಡ ನನಗೆ ಬಹುಮತವಿದೆ ಎಂದು ಹೇಳಿ ವಿಧಾನಸೌಧದಲ್ಲಿ ಬಿಎಸ್‍ವೈ ಭಾಷಣ ಮಾಡಿದ್ದರು. ಆದರೆ ಅಧಿಕಾರ ಪಡೆಯಲು ವಿಧಾನಸೌಧದಲ್ಲಿ 214 ಶಾಸಕರಲ್ಲಿ 213 ಶಾಸಕರು ಇರಬೇಕು ಎಂಬ ಕನಿಷ್ಠ ಜ್ಞಾನ ಅವರಿಗೆ ಇರಲಿಲ್ಲ. ವಾಮಮಾರ್ಗದ ಮೂಲಕ ಬಿಜೆಪಿಯವರು ಅಧಿಕಾರ ಪಡೆದುಕೊಂಡು ತಮಗೇನು ಗೊತ್ತಿಲ್ಲ ಎಂದು ಹೇಳುತ್ತಾರೆ. ಎಂತಹ ನಾಟಕ ಆಡುತ್ತಾರೆ ಎಂದು ಬಿಎಸ್‍ವೈ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

BSY A

ಮೊದಲು ಬಿಎಸ್‍ವೈ ಗುಡುಗಿದರೆ ವಿಧಾನಸೌಧದಲ್ಲಿ ನಡುಗುತ್ತಾರೆ ಎಂಬ ಮಾತು ಇತ್ತು. ಆದರೆ ಇಂದು ಬಿಎಸ್‍ವೈ ದೆಹಲಿಗೆ ತೆರಳಿದರೆ ಅವರೇ ನಡುಗುತ್ತಾರೆ. ರಾಜ್ಯದ ಸ್ಥಿತಿ ನೋಡಿದರೆ ಸಮರ್ಥರಿಗೆ ಆಡಳಿತ ನೀಡಬೇಕಾಗಿತ್ತು ಎಂಬ ಅಂಶ ತಿಳಿಯುತ್ತದೆ. 25 ಸಂಸದರಲ್ಲಿ ಒಬ್ಬರು ಗಂ…. ಇಲ್ಲ. ಮೋದಿ ಎದುರು ನಿಂತು ಮಾತನಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಆಕ್ಷೇಪಾರ್ಹ ಪದಗಳನ್ನು ಎಸ್.ಆರ್.ಶ್ರೀನಿವಾಸ್ ಉಪಯೋಗಿಸಿದರು. ಅಲ್ಲದೇ ಪ್ರವಾಹ ಸಂತ್ರಸ್ತರಿಗೆ ಪರಿಹಾರ ತರುವ ಯೋಗ್ಯತೆ ಸಂಸದರಿಗೆ ಇಲ್ಲ ಎಂದು ಆರೋಪಿಸಿದರು.

ಯಾರು ಶಕ್ತಿವಂತರು, ಹೋರಾಟಗಾರರು ಇದ್ದಾರೆ ಎಂಬುವುದು ನಮ್ಮ ರಾಜ್ಯ ಸರ್ಕಾರವನ್ನು ನೋಡಿದರೆ ತಿಳಿಯುತ್ತದೆ. ಸಮರ್ಥರಿಗೆ ಆಡಳಿತ ನೀಡದಿದ್ದರೆ ಏನಾಗುತ್ತದೆ ಎಂಬುವುದು ಜನರಿಗೆ ಈಗ ಅರ್ಥವಾಗುತ್ತಿದೆ. ಆದರೆ ಇಂದಿಗೂ ದೇವೇಗೌಡ ಅವರು ಹೋರಾಟ ಮಾಡಿ ಪಕ್ಷ ಕಟ್ಟುವ ಕಾರ್ಯದಲ್ಲಿ ನಡೆಸುತ್ತಿದ್ದಾರೆ. ದೇವೇಗೌಡರಿಗೆ ಮತ ನೀಡುವ ಬದಲು ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಸುವವರಿಗೆ ಅಧಿಕಾರ ನೀಡಿದ್ದೀರಿ. ಕ್ಷೇತ್ರದಲ್ಲಿ ಗೆಲುವು ಪಡೆದಿರುವವರು ನನ್ನ ಮುಂದೆ ಬಂದು ನಿಂತು ಮಾತನಾಡಲಿ. ಅಪ್ಪ-ಮಕ್ಕಳು ಇಬ್ಬರು ಕಳ್ಳರು ಎಂದು ಹೇಳಿ ಸಂಸದ ಜಿ.ಎಸ್.ಬಸವರಾಜ್ ವಿರುದ್ಧವೂ ಏಕವಚನದಲ್ಲಿ ಆರೋಪ ಮಾಡಿದರು.

TMK S R SRINIVAS COPY

ಎಚ್‍ಡಿಡಿಯಿಂದ ಅಂತರ: ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತ ಬಳಿಕ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್, ಎಚ್‍ಡಿಡಿ ಅವರಿಂದ ಅಂತರ ಕಾಯ್ದುಕೊಂಡರಾ? ಎಂಬ ಪ್ರಶ್ನೆ ಇಂದಿನ ಸಭೆಯಲ್ಲಿ ಕಾರ್ಯಕರ್ತರನ್ನು ಕಾಡಿತ್ತು. ಸದಾ ಕ್ಷೇತ್ರದಲ್ಲಿ ನಡೆಯುವ ಸಭೆಗಳಲ್ಲಿ ಎಚ್‍ಡಿಡಿ ಪಕ್ಕದಲ್ಲೇ ಇರುತ್ತಿದ್ದ ಎಸ್.ಆರ್.ಶ್ರೀನಿವಾಸ್ ಅವರು ಇಂದು ದೂರ ದೂರ ಕಂಡು ಬಂದರು. ವೇದಿಕೆ ಮೇಲೂ ಎಚ್‍ಡಿಡಿ ಅವರಿಂದ ಅಂತರ ಕಾಯ್ದುಕೊಂಡರು. ಇದಕ್ಕೂ ಮುನ್ನ ಭೈರವಿ ಮಹಿಳಾ ಸಂಘದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೂ ಎಚ್‍ಡಿಡಿ ಅವರಿಂದ ದೂರ ಉಳಿದ ಎಸ್.ಆರ್.ಶ್ರೀನಿವಾಸ್, ಶಂಕು ಸ್ಥಾಪನೆ ನಡೆಯುತ್ತಿದ್ದರೂ ತಮ್ಮ ಪಾಡಿಗೆ ತಾವು ಉಪಾಹಾರ ಸೇವಿಸುತ್ತಿದ್ದರು. ಇತ್ತೀಚೆಗಷ್ಟೇ ಶ್ರೀನಿವಾಸ್ ಅವರು, ಎಚ್‍ಡಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

TAGGED:bs yeddyurappajdsPublic TVSR Srinivastumkuruಎಸ್.ಆರ್.ಶ್ರೀನಿವಾಸ್ಜೆಡಿಎಸ್ತುಮಕೂರುಪಬ್ಲಿಕ್ ಟಿವಿಬಿಎಸ್ ಯಡಿಯೂರಪ್ಪ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

PM Modi 3
Latest

ಭಾರತ, ಫ್ರಾನ್ಸ್ ಬಾಂಧವ್ಯ ಮತ್ತಷ್ಟು ಗಟ್ಟಿ – 20 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ

Public TV
By Public TV
6 minutes ago
Goods Train Derailment near ramanagar
Bengaluru City

ಬಿಡದಿ-ರಾಮನಗರ ಮಧ್ಯೆ ಹಳಿ ತಪ್ಪಿದ ಗೂಡ್ಸ್ ರೈಲು – ಬೆಂಗಳೂರು-ಮೈಸೂರು ರೈಲ್ವೆ ಸಂಚಾರದಲ್ಲಿ ವ್ಯತ್ಯಯ

Public TV
By Public TV
10 minutes ago
PM Narendramodi and Emmanuel Macron virtually inaugurated the Tata Airbus Light Helicopter Final Assembly Line facility at Vemagal in Kolar
Karnataka

ಕೋಲಾರದಲ್ಲಿ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣಾ ಘಟಕಕ್ಕೆ ಚಾಲನೆ – 20 ವರ್ಷಗಳಲ್ಲಿ 500 ಕಾಪ್ಟರ್ ನಿರ್ಮಾಣ

Public TV
By Public TV
1 hour ago
DK Shivakumar 3
Bengaluru City

ಮಹದೇವಪ್ಪ ದೊಡ್ಡವರು, ಈಗ ಅವ್ರೂ ನಮ್ಮ ಹೈಕಮಾಂಡ್‌ನ ಭಾಗ: ಡಿಕೆಶಿ ಸೈಲೆಂಟ್‌ ಪಂಚ್‌

Public TV
By Public TV
1 hour ago
indian railways
Bengaluru City

ಹೋಳಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Public TV
By Public TV
1 hour ago
Big Bash League
Cricket

ಭಾರತದಲ್ಲಿ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ – ಪಾಕ್‌ ಆಟಗಾರರ ಕಥೆ ಏನು?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?