ಕಾಂಗ್ರೆಸ್ ಸಂಕಷ್ಟದಲ್ಲಿದೆ, ಗವರ್ನಮೆಂಟ್ ಲಿಟ್ಲ್ ಬ್ಯಾಡ್: ಸೌಮ್ಯಾ ರೆಡ್ಡಿ

Public TV
1 Min Read
soumya reddy 1

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಪಕ್ಷವನ್ನು ಉಳಿಸಿಕೊಳ್ಳಿ ಎಂದು ಸೋನಿಯಾ ಗಾಂಧಿ ಅವರನ್ನು ಭೇಟಿಯಾದಾಗ ಹೇಳಿದೆ ಎಂದು ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

Congress MLAs A

ಮಾಧ್ಯಮಗಳ ಜೊತೆ ಜಯನಗರದ ತಮ್ಮ ಕಚೇರಿಯಿಂದ ಮಾತನಾಡಿದ ಅವರು, ನಾನು ಅಖಿಲ ಭಾರತ ಮಹಿಳೆ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿದ್ದೇನೆ. ಹೀಗಾಗಿ ಸೋನಿಯಾ ಗಾಂಧಿಯವರನ್ನ ಭೆಟಿಯಾದಾಗ ರಾಜ್ಯದ ಪರಿಸ್ಥಿತಿಯನ್ನು ಅವರಿಗೆ ತಿಳಿಸಿದೆ. ಕಾಂಗ್ರೆಸ್ ರಾಜ್ಯದಲ್ಲಿ ಸಂಕಷ್ಟದಲ್ಲಿದೆ. ಹೀಗಾಗಿ ಕಾಂಗ್ರೆಸ್ಸನ್ನು ಉಳಿಕೊಳ್ಳಿ ಎಂದು ಮಾಹಿತಿ ಮುಟ್ಟಿಸಿದೆ ಅಷ್ಟೇ. ನಾನು ರಾಜೀನಾಮೆ ನೀಡಲ್ಲ. ಒಂದು ವೇಳೆ ರಾಜೀನಾಮೆ ನೀಡುವುದಾದರೆ ನಿಮಗೆ ಹೇಳುತ್ತೇನೆ ಎಂದು ಹೇಳಿದರು.

Sowmya Reddy Sonia

ಅತೃಪ್ತ ಶಾಸಕರ ರಾಜೀನಾಮೆ ಕುರಿತು ಮಾತನಾಡಿ, ನನ್ನ ತಂದೆಗೆ ಬಹಳ ನೋವಾಗಿದೆ ಮತ್ತು ಬೇಸರವಾಗಿದೆ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ತಂದೆ 45 ವರ್ಷ ಪಕ್ಷ ಕಟ್ಟಿ ದುಡಿದಿದ್ದಾರೆ. ಒಂದು ವರ್ಷದಿಂದ ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳು ಆಗ್ತಿಲ್ಲ. ಗವರ್ನಮೆಂಟ್ ಲಿಟ್ಲ್ ಬ್ಯಾಡ್. ನನ್ನ ನಿರ್ಧಾರ ಏನೆಂದು ಹೇಳುತ್ತೇನೆ. ಎಲ್ಲರ ಜೊತೆ ಚರ್ಚೆ ಮಾಡಿ ನಿರ್ಧರ ತೆಗೆದುಕೊಳ್ಳುತ್ತೇನೆ. ನನಗೆ ಬೇಸರವಾಗಿರುವುದು ನಿಜ. ಯಾಕೆಂದರೆ ಕೆಲವೊಂದು ಹೇಳಲು ಆಗದಿರುವ ವಿಚಾರಗಳೂ ಕೂಡ ಇದೆ. ಆದರು ಅಧಿವೇಶಕ್ಕೆ ನಾನು ಹೋಗುತ್ತೆನೆ ಎಂದರು.

ramalinga reddy chitchat

ನಾನು ರಾಜೀನಾಮೆ ಕೊಡಲ್ಲ. ನಮ್ಮ ತಂದೆ ಯಾಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಸ್ಪತಃ ಅವರೆ ಈ ಬಗ್ಗೆ ತಿಳಿಸಿದ್ದರು. ಆದರೆ ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವವರು ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *