Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಂಬಾನಿ ಜೇಬಿನಿಂದ ಬಡವರಿಗೆ ಹಣ: ರಾಹುಲ್ ಗಾಂಧಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಅಂಬಾನಿ ಜೇಬಿನಿಂದ ಬಡವರಿಗೆ ಹಣ: ರಾಹುಲ್ ಗಾಂಧಿ

Districts

ಅಂಬಾನಿ ಜೇಬಿನಿಂದ ಬಡವರಿಗೆ ಹಣ: ರಾಹುಲ್ ಗಾಂಧಿ

Public TV
Last updated: April 13, 2019 2:20 pm
Public TV
Share
3 Min Read
rahul
SHARE

– ಮೋದಿ ಡೈಲಾಗ್ ಕೇಳಿ ಯುವಕರೆಲ್ಲಾ ಸುಸ್ತು
– ಬಡ ಕುಟುಂಬದ ಮಹಿಳೆಯರ ಖಾತೆಗೆ ಹಣ
– ಕಳ್ಳ ಯಾವತ್ತೂ ದೇಶ ಭಕ್ತನಾಗಲು ಸಾಧ್ಯವಿಲ್ಲ

ಕೋಲಾರ: ಲೋಕಸಭಾ ಚುನಾವಣೆಯ ಭಾಷಣಗಳಲ್ಲಿ ಪ್ರಧಾನಿ ಮೋದಿ ಎಲ್ಲಿಯೂ ಉದ್ಯೋಗ ಖಾತ್ರಿ, ರೈತರ ಬಗ್ಗೆ ಮಾತನಾಡಿಲ್ಲ. 2014ರಲ್ಲಿ 15 ಲಕ್ಷ ರೂ. ಖಾತೆಗೆ ಹಾಕ್ತೀನಿ ಎಂದು ಹೇಳಿದವ್ರು ಎಲ್ಲಿಯೂ ತಮ್ಮ ಭಾಷಣದಲ್ಲಿ ಪ್ರಧಾನಿಗಳು ಉಲ್ಲೇಖಿಸಿಲ್ಲ. ಚೌಕಿದಾರ ಎಂದು ಹೇಳುವ ಮೋದಿ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

ಕೋಲಾರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸುಮಾರು ಆರು ತಿಂಗಳ ಹಿಂದೆ ನಮ್ಮ ಪಕ್ಷದ ಆರ್ಥಿಕ ತಜ್ಞರನ್ನು ಒಳಗೊಂಡ ಸಮಿತಿಯ ಸಭೆ ನಡೆಸಲಾಗಿತ್ತು. ಮೋದಿ 15 ಲಕ್ಷ ನೀಡ್ತೀನಿ ಅಂತಾ ಸುಳ್ಳು ಹೇಳಿದ್ದಾರೆ. ನಿಖರವಾಗಿ ರೈತರ ಖಾತೆಗೆ ಎಷ್ಟು ಹಣ ಹಾಕಬಹುದು ಎಂಬುದರ ಅಂಕಿ-ಅಂಶ ನೀಡಬೇಕೆಂದು ಕೇಳಿಕೊಂಡಿದ್ದೆ. ನಿಖರ ಅಂಕಿ ಅಂಶಗಳ ಪ್ರಕಾರ ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರ, ವರ್ಷಕ್ಕೆ 72 ಸಾವಿರ ನೀಡಲು ಸಾಧ್ಯ ಎಂಬುವುದು ತಿಳಿದಿದೆ. ಅದೇ ಅಂಕಿ-ಅಂಶಗಳನ್ನು ನಿಮ್ಮ ಮುಂದಿಟ್ಟಿದ್ದೇವೆ. ಪ್ರತಿ ಬಡ ಕುಟುಂಬದ ಮಹಿಳಾ ಸದಸ್ಯರ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ ಎಂದು ಹೇಳಿದರು.

"Chowkidaar lied about giving ₹15 lakhs.

I formed a team of our best economists and asked them to come up with a figure that we can transfer to India's poor without burdening our economy

We then decided on
₹6000 / month
₹72,000 / year
₹3,60,000 / five years": @RahulGandhi pic.twitter.com/3ntEKf4W8G

— Karnataka Congress (@INCKarnataka) April 13, 2019

ರಾಹುಲ್ ಭಾಷಣದ ಮುಖ್ಯಾಂಶಗಳು
ನಮ್ಮ ‘ನ್ಯಾಯ’ಯೋಜನೆಗೆ ಹಣ ಅಂಬಾನಿಯಿಂದ ಬರಲಿದೆ. ಮೋದಿಯವರ ಗೆಳೆಯ ಅನಿಲ್ ಅಂಬಾನಿ ಜೇಬಿನಿಂದ ಬಡವರಿಗೆ ಕಾಂಗ್ರೆಸ್ ಹಣ ನೀಡಲಿದೆ. ಚೌಕಿದಾರ ನೂರಕ್ಕೆ ನೂರು ಕಳ್ಳನಾಗಿದ್ದು, ತಮ್ಮದೇ ಆದ ತಂಡವನ್ನು ಹೊಂದಿದ್ದಾರೆ. ನಿಮ್ಮ ಜೇಬಿನಲ್ಲಿರುವ ಹಣ ತೆಗೆದು ನೀರವ್ ಮೋದಿಗೆ ನೀಡಿದ್ರು. ಚೋಕ್ಸಿ, ಲಲಿತ್ ಮೋದಿ, ಸೇರಿದಂತೆ ಎಲ್ಲ ಕಳ್ಳರು ನಿಮ್ಮ ಹಣ ತೆಗೆದುಕೊಂಡು ವಿದೇಶಕ್ಕೆ ಹೋದರು.

500 ಮತ್ತು 1 ಸಾವಿರ ರೂ. ನೋಟ್ ಅಮಾನ್ಯೀಕರಣಗೊಳಿಸಿ ಬಡವರು, ಸಣ್ಣ ವ್ಯಾಪಾರಸ್ಥರು ಬಿಸಿಲಿನಲ್ಲಿ ನಿಲ್ಲುವಂತೆ. ನರೇಂದ್ರ ಮೋದಿ ಕೇವಲ ಮನ್ ಕೀ ಬಾತ್ ಮಾಡುತ್ತಾರೆ. ನಮ್ಮದು ಕಾಮ್ ಕೀ ಬಾತ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಜಿಎಸ್‍ಟಿ ಸರಳೀಕರಣಗೊಳಿಸಲಾಗುವುದು. ಮೋದಿ ತಮ್ಮ ಎಲ್ಲ ಭಾಷಣಗಳಲ್ಲಿಯೂ ಹೊಸ ಹೊಸ ಭರವಸೆಗಳು ನೀಡುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ದೇಶದ ಯುವ ಜನತೆಗೆ ಏನು ಮಾಡಿದ್ದೀರಿ ಎಂಬುದನ್ನು ನೀವು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

klr cONGRES

ರೈತರು ಜೈಲಿಗೆ ಹೋಗಲ್ಲ:
ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ನೀವು ಏನು ಮಾಡಿದ್ದೀರಿ ಎಂಬುದನ್ನು ತಿಳಿಸಬೇಕು. ಅಂಬಾನಿಯನ್ನು ಆಲಿಂಗನ ಮಾಡಿಕೊಂಡು ಫೋಟೋ ತೆಗೆದುಕೊಳ್ಳುವ ನೀವು ರೈತರನ್ನು ಮಾತನಾಡಿಸಲ್ಲ ಯಾಕೆ? ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ರೈತರಿಗಾಗಿ ಸಂಸತ್ ನಲ್ಲಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಲಾಗುವುದು. ಅಧಿಕಾರಕ್ಕೆ ಬಂದ ಕೂಡಲೇ ನಿಮ್ಮ ಕಾಂಗ್ರೆಸ್ ಸರ್ಕಾರ ಮೊದಲ ಬಜೆಟ್ ನಲ್ಲಿ ತಿಳಿಸಲು ಪ್ರಯತ್ನಿಸುತ್ತೆವೆ. ರೈತರನ್ನು ಭಯಮುಕ್ತರನ್ನಾಗಿ ಮಾಡಲು ನಾವು ಕೆಲಸ ಮಾಡಲಿದ್ದೇವೆ. ಅನಿಲ್ ಅಂಬಾನಿಯಂತಹ ಉದ್ಯಮಿ ಸಾಲ ಪಡೆದರೂ ಹಣ ಮರುಪಾವತಿ ಮಾಡಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಸಾಲ ಮರುಪಾವತಿ ಮಾಡದ ರೈತ ಜೈಲಿಗೆ ಹೋಗಲ್ಲ ಎಂದು ಕಾಂಗ್ರೆಸ್ ಭರವಸೆ ನೀಡುತ್ತಿದೆ.

ಮೇಕ್ ಇನ್ ಇಂಡಿಯಾ ಸೇರಿದಂತೆ ಹಲವು ಘೋಷಣೆಗಳನ್ನು ಕೇಳಿ ಯುವಕರು ಸುಸ್ತಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಖಾಲಿ ಇರುವ ಎಲ್ಲ ಕೇಂದ್ರ ಸರ್ಕಾರದ ಹುದ್ದೆಗಳನ್ನು ಭರ್ತಿ ಮಾಡುತ್ತವೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಸುಳ್ಳು ಹೇಳಿದ್ದರು. ಪ್ರತಿ ಬಡವರ ಖಾತೆಗೆ ಹಣ ಹಾಕಲು ನಾವು ಬದ್ಧವಾಗಿದ್ದೇವೆ. ಕಳ್ಳ ಯಾವತ್ತೂ ದೇಶ ಭಕ್ತನಾಗಲು ಸಾಧ್ಯವಿಲ್ಲ.

ಈ ದಿನ ಮೋದಿ ಸರ್ಕಾರವು ಸೋಲಿನ ಭೀತಿಯಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿಗರ ಮೇಲೆ ಐಟಿ ದಾಳಿಯನ್ನು ಸಂಘಟಿಸುತ್ತಿದೆ. ಆದರೂ ಜನರು ಇವರ ಕುತಂತ್ರವನ್ನು ಅರ್ಥ ಮಾಡಿಕೊಂಡಿದ್ದು, ಪ್ರಸಕ್ತ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ.- @dineshgrao#KarnatakaWithMaithri pic.twitter.com/j3YCd0KdEe

— Karnataka Congress (@INCKarnataka) April 13, 2019

ನಮ್ಮೆದುರು ಎರಡು ರೀತಿಯ ಶಕ್ತಿಗಳಿವೆ. ಈ ಪೈಕಿ ಕಾಂಗ್ರೆಸ್ ಶಕ್ತಿಯು ದೇಶವನ್ನು ಜೋಡಿಸುವ ಮತ್ತು ಮುನ್ನಡೆಸುವ ಕಾರ್ಯಕ್ರಮಗಳನ್ನು ಜನರ ಮುಂದೆ ಇಡುತ್ತಿದ್ದರೆ ಇನ್ನೊಂದೆಡೆ ಬಿಜೆಪಿ ಎನ್ನುವ ಮತ್ತೊಂದು ಶಕ್ತಿಯು ದೇಶವನ್ನು ಒಡೆಯುವಂತಹ ಕೆಲಸ ಮಾಡುತ್ತಿದೆ. ದೇಶದ ಜನರು ಇದನ್ನ ಗಮನಿಸುತ್ತಿದ್ದಾರೆ. –@RahulGandhi#KarnatakaWithMaithri pic.twitter.com/gQSQMhP78i

— Karnataka Congress (@INCKarnataka) April 13, 2019

TAGGED:Kolarloksabhaelections2019rahulgandhiಕೋಲಾರರಾಹುಲ್ ಗಾಂಧಿಲೋಕಸಭಾ ಚುನಾವಣೆ 2019
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

Akeal Hosein and Sanju Samson
Cricket

ಸಂಜು ಬೆಂಕಿ ಶತಕ| ಚೆನ್ನೈ ಸೂಪರ್‌ ಆಟಕ್ಕೆ ಮುಂಬೈ ಪಲ್ಟಿ – 5ನೇ ಸ್ಥಾನಕ್ಕೆ ಹೈಜಂಪ್‌

Public TV
By Public TV
1 hour ago
Donald Trump USA India Relationship
Latest

ಭಾರತದ ಬಗ್ಗೆ ಬಾಯಿಗೆ ಬಂದಂತೆ ಟ್ರಂಪ್‌ ಪೋಸ್ಟ್‌ – ಈಗ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಅಮೆರಿಕ

Public TV
By Public TV
2 hours ago
Supreme Court 1
Court

ʻವಾಟ್ಸಾಪ್ ಯುನಿವರ್ಸಿಟಿʼಯಲ್ಲಿ ಬಂದ ಮಾಹಿತಿ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್‌

Public TV
By Public TV
2 hours ago
TAMILUNADU ELECTION
Latest

ತಮಿಳುನಾಡು ಇತಿಹಾಸದಲ್ಲೇ ದಾಖಲೆ ಬರೆದ ಮತದಾರ – 89.69% ರಷ್ಟು ಮತದಾನ

Public TV
By Public TV
3 hours ago
ELEPHANT ATTACK
Chikkamagaluru

ಮೂವರು ಇಟಿಎಫ್‌ ಸಿಬ್ಬಂದಿ ಮೇಲೆ ಕಾಡಾನೆ ದಾಳಿ – ಗಾರ್ಡ್‌ ಸ್ಥಿತಿ ಗಂಭೀರ

Public TV
By Public TV
3 hours ago
West Bengal voting
Latest

ಬಂಗಾಳದಲ್ಲಿ ದಾಖಲೆ – ಅತಿ ಹೆಚ್ಚು ಮತದಾರರು ಡಿಲೀಟ್ ಆದ ಕ್ಷೇತ್ರದಲ್ಲಿ ಹೆಚ್ಚು ವೋಟಿಂಗ್‌!

Public TV
By Public TV
3 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?