Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: “ಸೋಲೇ ಇಲ್ಲ, ಅಧಿಕಾರದಿಂದ ಇಳಿಸಕ್ಕಾಗಲ್ಲ- ಪ್ರಧಾನಿ ಮೋದಿಗೆ ಅಖಂಡ ಸಾಮ್ರಾಜ್ಯ ಯೋಗ!”
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | “ಸೋಲೇ ಇಲ್ಲ, ಅಧಿಕಾರದಿಂದ ಇಳಿಸಕ್ಕಾಗಲ್ಲ- ಪ್ರಧಾನಿ ಮೋದಿಗೆ ಅಖಂಡ ಸಾಮ್ರಾಜ್ಯ ಯೋಗ!”

Districts

“ಸೋಲೇ ಇಲ್ಲ, ಅಧಿಕಾರದಿಂದ ಇಳಿಸಕ್ಕಾಗಲ್ಲ- ಪ್ರಧಾನಿ ಮೋದಿಗೆ ಅಖಂಡ ಸಾಮ್ರಾಜ್ಯ ಯೋಗ!”

Public TV
Last updated: April 6, 2019 3:03 pm
Public TV
Share
3 Min Read
modi ammannaya
SHARE

ಉಡುಪಿ: ಪ್ರಧಾನಿ ನರೇಂದ್ರ ಮೋದಿಗೆ ಅಖಂಡ ಸಾಮ್ರಾಜ್ಯ ಯೋಗ ಇದೆ. ನರೇಂದ್ರ ಮೋದಿ ಛಲವಾದಿ ಮತ್ತು ಹಠವಾದಿ. ಅವರನ್ನು ಯಾವುದೇ ಹುದ್ದೆಯಿಂದ ಇಳಿಸಲು ಸಾಧ್ಯವಿಲ್ಲದಂತಹ ಯೋಗ ಅವರಿಗಿದೆ ಎಂದು ಉಡುಪಿ ಜಿಲ್ಲೆ ಕಾಪುವಿನ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೋದಿ ಸ್ವ-ಇಚ್ಛೆಯಿಂದ ನಿವೃತ್ತಿ ಆದ್ರೆ ಮಾತ್ರ ಅವರು ಅಧಿಕಾರ ಬಿಡಬಹುದು. ಅವರು ಅಧಿಕಾರ ಬಿಡಬಹುದೇ ಹೊರತು ಅಧಿಕಾರ ಅವರನ್ನು ಬಿಡಲ್ಲ ಎಂದು ಹೇಳಿದರು.

parakash e1554542772514

ಚಾಂದ್ರಮಾನ ಯುಗಾಧಿಯ ಫಲ ಹೇಳಿದ ಅವರು, ಮುಂದಿನ ಯುಗಾದಿಯ ಒಳಗೆ ಎರಡು ಪ್ರಮುಖ ಗ್ರಹಣಗಳು ಬರುತ್ತದೆ. 2019ರ ಜುಲೈ 26ಕ್ಕೆ ಖಂಡಗ್ರಾಸ ಚಂದ್ರಗ್ರಹಣ ನಡೆಯುತ್ತದೆ. ಡಿಸೆಂಬರ್, 26ಕ್ಕೆ ಸೂರ್ಯಗ್ರಹಣ ಬರುತ್ತದೆ, ಅಂದು ಸೂರ್ಯ ಸ್ವಲ್ಪವೇ ಕಾಣಿಸಿಕೊಂಡು ಸುತ್ತಲೂ ಕತ್ತಲಾಗುವಷ್ಟು ಈ ಗ್ರಹಣ ಪ್ರಬಲವಾಗಿರುತ್ತದೆ. ಈ ವಿಕಾರಿ ಸಂವತ್ಸರದ ಗ್ರಹಸ್ಥಿತಿಯನ್ನು ನೋಡಿದಾಗ 72 ವರ್ಷಕ್ಕೊಮ್ಮೆ ನಡೆಯುವ ಮಹಾ ದುರಂತ ನಡೆಯುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಧನುರಾಶಿಯಲ್ಲಿ ಶನಿಕೇತು ಯೋಗ, ಸಪ್ತಮದಲ್ಲಿ ರಾಹು, ಕುಜನು ಶನಿಯನ್ನು ಎಂಟನೇ ದೃಷ್ಟಿಯಲ್ಲಿ ನೋಡುವುದರಿಂದ ಏಳು ದಶಕದಲ್ಲಿ ಒಮ್ಮೆ ಸಂಭವಿಸುವ ದುರಂತಕ್ಕೆ ಕಾರಣವಾಗಬಹುದು. ಈ ಹಿಂದೆ 1945-46 ಹಾಗೂ 1800 ರಲ್ಲಿ ಇಂತಹ ದುರಂತ ನಡೆದು ಜನಾಂಗ ನಾಶವಾಗಿದ್ದನ್ನೂ ನೆನಪಿಸಿದ್ದಾರೆ. ಜನರು ಮನುಷ್ಯತ್ವ, ಸೌಹಾರ್ದತೆ ಪಾಲಿಸಬೇಕೆಂದು ಸೂಚನೆ ನೀಡಿದ್ದಾರೆ.

modi karnataka e1554542829937

ಮೋದಿಗೆ ಅಖಂಡ ಸಾಮ್ರಾಜ್ಯ:
2019 ರ ಚುನಾವಣೆಯಲ್ಲಿ ಮೋದಿ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಸರ್ಕಾರ ಮಾಡೋದು ಖಚಿತ ಎಂದು ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ. ಮೋದಿ ಜಾತಕದಲ್ಲಿ ಅಖಂಡ ಸಾಮ್ರಾಜ್ಯ ಯೋಗ ಇದೆ. ಜೊತೆಗೆ ಪರ್ವತ ಯೋಗ, ಗಜಕೇಸರಿಯೋಗದ ಭಾಗ್ಯವೂ ಇದೆ. ಹಾಗಾಗಿ ಎರಡನೇ ಬಾರಿಗೆ ಮೋದಿ ಪ್ರಧಾನಿಯಾಗೋದನ್ನ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪ್ರತಿಯಾಗಿ ಮಹಾ ಘಟ್ ಬಂಧನದಲ್ಲಿ ಪ್ರಧಾನಿಯಾಗುವ ಯೋಗ ಯಾರಿಗೂ ಇದ್ದಂತಿಲ್ಲ. ಮೊದಲಾಗಿ ಅವರಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಹಲವರು ಆಕಾಂಕ್ಷಿಗಳಿದ್ದಾರೆ. ಘಟಬಂಧನದಲ್ಲಿ ಸ್ಪಷ್ಟತೆ ಇಲ್ಲದ ಕಾರಣ ಜಾತಕಫಲ ಹಾಗೂ ರಾಜಕೀಯ ವಾತಾವರಣ ಮೋದಿಗೆ ಅನುಕೂಲಕರವಾಗಿದೆ. ಈ ಚುನಾವಣೆಯಲ್ಲಿ ಮೋದಿಯನ್ನು ಏನೂ ಮಾಡಲು ಸಾಧ್ಯವಿಲ್ಲ. ನ್ಯಾಯಯುತವಾದ ಹಠ ಸಾಧನೆ ಮಾಡುವ ಗುಣ ಪ್ರಧಾನಿ ಮೋದಿಯಲ್ಲಿದೆ. ಮೋದಿಯವರಂತ ಜಾತಕ, ಘಟಬಂಧನದಲ್ಲಿ ಯಾರಲ್ಲೂ ಇಲ್ಲ. ನರೇಂದ್ರ ಮೋದಿಯವರದ್ದು ರಾಜ ಸನ್ಯಾಸ. ಸ್ವಾರ್ಥ ಇಲ್ಲದ, ದೇಶದ ಅಭಿವೃದ್ಧಿಗೆ ಹಠ ಸಾಧಿಸುವ ಗುಣ ಕಾಣಬಹುದು.

prakash 1 e1554542875682

ಕಳೆದ ನಾಲ್ಕು ದಶಕಗಳಿಂದ ದೇಶೋದ್ಧಾರದ ಹಠ ಸಾಧನೆಯ ಗುಣ ಕಾಪಾಡಿಕೊಂಡು ಬಂದಿರುವುದನ್ನು ಅವರ ಜಾತಕದಿಂದ ತಿಳಿಯಬಹುದು. ಚಾಣಕ್ಯ, ಕೃಷ್ಣರಂತೆ ತಾವೇ ಇಚ್ಛಿಸಿ ನಿರ್ಗಮಿಸುವವರೆಗೂ ಮೋದಿ ಆಡಳಿತ ಅಭಾದಿತ ಎಂದಿದ್ದಾರೆ. ವಿಪಕ್ಷಗಳ ಮುಖಂಡರು ಪುಲ್ವಾಮ ಘಟನೆ ಮತ್ತು ಪಾಕಿಸ್ತಾನದ ಕುರಿತಾಗಿ ಆಡುತ್ತಿರುವ ಮಾತುಗಳಿಂದಲೂ ಮೋದಿಗೆ ಅನುಕೂಲವಾಗಿದೆ. ಇದು ಪ್ರಕೃತಿ ಮೋದಿಗೆ ಕಲ್ಪಿಸಿದ ಅನುಕೂಲ ಎಂದು ಅಮ್ಮಣ್ಣಾಯ ಅಭಿಪ್ರಾಯಪಟ್ಟಿದ್ದಾರೆ.

ಅವಮಾನವನ್ನು ಸಹಿಸಿ ಬೆಳೆಯುವ ಗುಣ ಮೋದಿಯವರ ಜಾತಕದಲ್ಲಿದೆ, ಆದರೆ ಮಹಾಘಟಬಂಧನದಲ್ಲಿ ಅಂತಹ ನಾಯಕರು ಯಾರೂ ಇಲ್ಲ. ಪ್ರಣವ್ ಮುಖರ್ಜಿ ಇದ್ದಿದ್ದರೆ ಘಟಬಂಧನ ಒಂದಿಷ್ಟು ಗಟ್ಟಿಯಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಮೋದಿಯರಿಗೆ ಕೇತುಭುಕ್ತಿಯೂ ನಡೆಯುತ್ತಿದೆ. ಹಾಗಾಗಿ ಇನ್ನಷ್ಟು ವಿಪತ್ತುಗಳನ್ನು ಎದುರಿಸಬೇಕಾದೀತು. ಪಾಕಿಸ್ತಾನದ ದಾಳಿಯನ್ನು ತಳ್ಳಿಹಾಕುವಂತಿಲ್ಲ. ಅಣುವಿಕೋಪಕ್ಕೆ ಹೋದರೂ ಅಚ್ಚರಿಯಿಲ್ಲ. ಇದು ವಿಕಾರಿ ಸಂವತ್ಸರ, ವಿಪರೀತ ಕಲಹದಿಂದ ಜನಾಂಗೀಯ ಕಲಹ ಆಗುವ ಸಾಧ್ಯೆತೆಯೂ ಇದೆ ಎಂದಿದ್ದಾರೆ.

Mahagatbandhan Aug3 142633 730x419 m

ಮಹಾ ಘಟಬಂಧನದಲ್ಲೇ ಗೊಂದಲ:
ಈ ಘಟಬಂಧನಕ್ಕೆ ಆಯುಷ್ಯ ಖಂಡಿತವಾಗಿಯೂ ಇಲ್ಲ. ದೇಶದ ರಕ್ಷಣೆ ನೆಮ್ಮದಿಯ ಬದುಕು ಬಯಸುವವರಿಗೆ ಘಟ್ ಬಂಧನ್ ಬೇಕಾಗಿಲ್ಲ. ರಾಹುಲ್ ಗಾಂಧಿ ಈಗಾಗಲೇ 72 ಸಾವಿರ ಕೊಡೋದಾಗಿ ಹೇಳಿದ್ದಾರೆ. ಇಂತಹ ಸೌಕರ್ಯಗಳ ಆಸೆ ಪಡುವ ಜನರಿಗೆ ಘಟಬಂಧನದ ಮೇಲೆ ನಿರೀಕ್ಷೆಗಳಿರಬಹುದು. ಎಣ್ಣೆ ಸೀಗೆ ಒಟ್ಟಾಗುವುದಿಲ್ಲ. ಹಾಗೆಯೇ ಘಟಬಂಧನದಲ್ಲಿ ಸೇರಿದವರಲ್ಲಿ ಒಮ್ಮತ ಕಾಣುವುದಿಲ್ಲ. ಎಲ್ಲರಿಗೂ ಉನ್ನತ ಹುದ್ದೆಯ ಆಸೆ ಇದೆ. ಘಟಬಂಧನ ಚೂರುಚೂರಾಗುತ್ತೆ. ಯುಪಿಎ ಘಟಬಂಧನದಲ್ಲಿ ಸರಿಯಾದ ಸಂಖ್ಯೆ ಇತ್ತು. ಆದರೆ ಅವರು ಅದನ್ನು ಉಳಿಸಿಕೊಂಡಿಲ್ಲ. ಜಾಗೃತ ಪ್ರಜೆಗಳಿಗೆ ರಾಜಕೀಯ ಪ್ರಜ್ಞೆ ಇದೆ. ಉತ್ತಮ ಘಟಬಂಧನ ಈ ದೇಶದ ಅಗತ್ಯ. ಆದರೆ ಭಾರತೀಯ ಪರಂಪರೆಯನ್ನು ಸೋಲಿಸುವ ಘಟಬಂಧನದಿಂದ ಪ್ರಯೋಜನವಿಲ್ಲ. ಈ ದೇಶದಲ್ಲಿ ಹಿಂದೂ ಧರ್ಮ ಮಾತ್ರ ಇರಬೇಕು ಅಂತಲ್ಲ, ಆದರೆ ಹಿಂದೂ ಧರ್ಮಕ್ಕೆ ಅಪಾಯ ಮತ್ತು ಧರ್ಮಬೇಧ ಹುಟ್ಟು ಹಾಕುವ ಗುಣವೇ ಘಟಬಂಧನದಲ್ಲಿ ಹೆಚ್ಚು ಕಾಣಿಸುತ್ತಿದೆ ಎಂದು ಅಮ್ಮಣ್ಣಾಯ ಅಭಿಪ್ರಾಯಪಟ್ಟಿದ್ದಾರೆ.

Share This Article
Facebook Whatsapp Whatsapp Telegram

Cinema news

Deepika Padukone Ranveer Singh
2ನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌ ದಂಪತಿ
Bollywood Cinema Latest Top Stories
darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood

You Might Also Like

Tamil Nadu factory blast 20 killed several injured as massive blast rips through firecracker factory in Virudhunagar
Crime

ತಮಿಳುನಾಡಿನಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ – 20 ಸಾವು, ಹಲವರ ಸ್ಥಿತಿ ಚಿಂತಾಜನಕ

Public TV
By Public TV
5 minutes ago
Anurag Thakur
Bengaluru City

ಹಿಂದಿನಿಂದ ಬಂದು ಮಹಿಳೆಯರಿಗೆ ಕಾಂಗ್ರೆಸ್‌ ಚೂರಿ, ದೇಶದ ತಾಯಂದಿರು ಇವರನ್ನು ಕ್ಷಮಿಸಲ್ಲ: ಅನುರಾಗ್‌ ಠಾಕೂರ್‌

Public TV
By Public TV
12 minutes ago
Mallikarjun Kharge 2
Bengaluru City

ನಾವು ಮಹಿಳಾ ಮೀಸಲಾತಿ ಪರ ಇದ್ದೇವೆ, ಮೋದಿಯ ಸುಳ್ಳು ಆರೋಪ ಖಂಡಿಸುತ್ತೇನೆ: ಖರ್ಗೆ ಕೆಂಡಾಮಂಡಲ

Public TV
By Public TV
56 minutes ago
Tejasvi Surya
Bengaluru City

ನಾರಿಶಕ್ತಿಗೆ ವಿಪಕ್ಷಗಳ ವಿರೋಧ – ಇದರ ಪರಿಣಾಮ ಪ.ಬಂಗಾಳ ಚುನಾವಣೆಯಲ್ಲೇ ಗೊತ್ತಾಗಲಿದೆ: ತೇಜಸ್ವಿ ಸೂರ್ಯ ಭವಿಷ್ಯ

Public TV
By Public TV
1 hour ago
Patahi Airport
Latest

ಬಿಹಾರದಲ್ಲಿ ಮತ್ತೊಂದು ಏರ್‌ಪೋರ್ಟ್‌ ನಿರ್ಮಾಣ – ಶೀಘ್ರದಲ್ಲೇ ವಿಮಾನ ಸೇವೆ ಆರಂಭ

Public TV
By Public TV
1 hour ago
a man from Belthangady who was going to sabarimala temple fell from the train and died in kerala
Dakshina Kannada

ಶಬರಿಮಲೆ ಯಾತ್ರೆಗೆ ತೆರಳಿದ್ದ ಬೆಳ್ತಂಗಡಿಯ ವ್ಯಕ್ತಿ ರೈಲಿನಿಂದ ಬಿದ್ದು ದುರ್ಮರಣ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?