ಬ್ಲಾಕ್‌ಲಿಸ್ಟ್‌ನಲ್ಲಿದ್ರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕ ಒತ್ತಾಯ

Public TV
1 Min Read
BDA

-ಇದು 600 ಕೋಟಿ ರಿಲೀಸ್ ರಹಸ್ಯ!

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಂಪನಿ ಬ್ಲಾಕ್‍ಲಿಸ್ಟ್ ನಲ್ಲಿ ಇದ್ದರೂ ಅದೇ ಕಂಪನಿಗೆ ಟೆಂಡರ್ ಕೊಡುವಂತೆ ಶಾಸಕರೊಬ್ಬರು ಬಿಡಿಎ ಕಮಿಷನರ್ ಮೇಲೆ ಒತ್ತಡದ ಮೇಲೆ ಒತ್ತಡ ಹೇರುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಭಾರೀ ಮೊತ್ತದ ಕೋನದಾಸಪುರದ ಉದ್ದೇಶಿತ ವಸತಿ ಸಮುಚ್ಚಯದ ಟೆಂಡರ್ ಗಾಗಿ ಬಿಡಿಎ ಕಮಿಷನರ್ ಮೇಲೆ ಒತ್ತಡ ಹೇರುತ್ತಿದ್ದು, ಶಾಸಕ ಸೋಮಶೇಖರ್ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್‌ ಕಂಪನಿಗೆ ನೀಡುವಂತೆ ವಕಾಲತ್ತು ವಹಿಸುತ್ತಿದ್ದಾರೆ. ಚಂದ್ರಕಾಂತ್ ರಾಮಲಿಂಗಂ ಕನ್ಸ್‌ಸ್ಟ್ರಕ್ಷನ್‌ ಕಂಪನಿಯ ಮಾಲೀಕನಾಗಿದ್ದು, ಇವರ ಕಂಪನಿಗೆ ಯಾವುದೇ ಟೆಂಡರ್ ಕೊಡಬಾರದು ಎಂದು ಕಂಪನಿಯನ್ನು ಬ್ಲಾಕ್‍ಲಿಸ್ಟ್ ಗೆ ಸೇರಿಸಲಾಗಿದೆ. ಆದರೂ ಅವರಿಗಾಗಿ ಶಾಸಕ ಸೋಮಶೇಖರ್ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

vlcsnap 2019 03 22 09h03m07s913

ಚಂದ್ರಕಾಂತ್

ಶಾಸಕ ಸೋಮಶೇಖರ್ ಮತ್ತು ಚಂದ್ರಕಾಂತ್ ಆಪ್ತರಾಗಿದ್ದಾರೆ. ಹೀಗಾಗಿ ರಾಮಲಿಂಗಂಗೆ ಕಾಮಗಾರಿ ಕೈಗೆತ್ತಿಕೊಳ್ಳಲು ವರ್ಕ್ ಆರ್ಡರ್ ನೀಡುವಂತೆ ಬಿಡಿಎ ಕಮಿಷನರ್ ರಾಕೇಶ್ ಸಿಂಗ್‍ಗೆ ಒತ್ತಡ ಹಾಕುತ್ತಿದ್ದರು. ಸರಿ ಸುಮಾರು 600 ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದೆ. ಇತ್ತ ಬಿಡಿಎ ಅಧ್ಯಕ್ಷ ಸೋಮಶೇಖರ್ ಒತ್ತಡಕ್ಕೆ ರಾಕೇಶ್‍ಸಿಂಗ್ ಮಣಿಯಲಿಲ್ಲ. ಕೊನೆಗೆ ಗುತ್ತಿಗೆ ನೀಡದೆ ಇದ್ದುದಕ್ಕೆ ರಾಕೇಶ್ ಸಿಂಗ್ ಮೇಲೆ ಆರೋಪಗಳನ್ನು ಮಾಡಿ ವರ್ಗಾವಣೆ ಮಾಡುವಂತೆ ಸಿಎಂ ಕುಮಾರಸ್ವಾಮಿಗೆ ಸೋಮಶೇಖರ್ ದೂರು ಸಲ್ಲಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ರಾಕೇಶ್ ಸಿಂಗ್ ವರ್ಗಾವಣೆ ಮಾಡದೇ ಹೋದರೆ ಬೆಂಗಳೂರು ಉತ್ತರ ಗೆಲ್ಲೋದು ಕಷ್ಟವಾಗುತ್ತದೆ. ಎಲೆಕ್ಷನ್ ಫಂಡ್ ಬೇಕು ಅಂದರೆ ನಾನು ಹೇಳುವ ಗುತ್ತಿಗೆದಾರನಿಗೆ ಗುತ್ತಿಗೆ ಕೊಡಬೇಕು. ಒಂದು ವೇಳೆ ರಾಕೇಶ್ ಸಿಂಗ್ ಅವರನ್ನು ವರ್ಗಾವಣೆ ಮಾಡದೇ ಹೋದರೆ ನಾವ್ಯಾರು ಜೆಡಿಎಸ್‍ಗೆ ಸಪೋರ್ಟ್ ಮಾಡುವುದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

BDA 1

ರಾಕೇಶ್ ಸಿಂಗ್‍

ಈಗಾಗಲೇ ಕೆಂಪೇಗೌಡ ಲೇಔಟ್‍ನಲ್ಲಿ ಕಾಮಗಾರಿಯನ್ನು ಸೋಮಶೇಖರ್ ಬೆಂಬಲಿಗರು ಸ್ಥಗಿತಗೊಳಿಸಿದ್ದಾರೆ. ಬೇಕಾದವರಿಗೆ ಗುತ್ತಿಗೆ ನೀಡಿಲ್ಲವೆಂದು ಕಾಮಗಾರಿ ಸ್ಥಗಿತಗೊಳಿಸಿದ್ದು, ಇಬ್ಬರ ಜಗಳದಿಂದ ಸೈಟ್ ಮಾಲೀಕರಿಗೆ ಸಮಸ್ಯೆ ಎದುರಾಗಿದೆ. ಇತ್ತ ಮನೆ ಕಟ್ಟುವುದಕ್ಕೂ ಆಗದೆ, ಅತ್ತ ಸೈಟ್ ಹತ್ತಿರ ಹೋಗುವುದಕ್ಕೂ ಆಗದೆ ಮಾಲೀಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *