ನಡುಬೀದಿಯಲ್ಲೇ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಶಾಸಕ ನಾಗೇಂದ್ರ!

Public TV
1 Min Read
mys mla awaz 1

ಮೈಸೂರು: ಸಿಎಂ ಜಿಲ್ಲೆಗೆ ಬರುತ್ತಿರುವ ವಿಷಯ ತಿಳಿಸಿಲ್ಲ ಅಂತ ಸಿಟ್ಟಿಗೆದ್ದ ಶಾಸಕರೊಬ್ಬರು ನಡುಬೀದಿಯಲ್ಲೇ ಅಧಿಕಾರಿಯನ್ನು ಎಲ್ಲರ ಮುಂದೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ.

ಜಿಲ್ಲೆಯ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅಧಿಕಾರಿಯನ್ನು ನಿಂದಿಸಿ ಅವಾಜ್ ಹಾಕಿದ್ದಾರೆ. ಸಿಎಂ ಅವರು ಜಿಲ್ಲೆಗೆ ಬರುತ್ತಿರುವ ವಿಷಯವನ್ನು ಅಧಿಕಾರಿಗಳು ತಮಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ನಾಗೇಂದ್ರ ಅವರು ನಡುಬೀದಿಯಲ್ಲೇ ಅಧಿಕಾರಿಗೆ ಬೈದಿದ್ದಾರೆ. ಇಲ್ಲಿಗೆ ಯಾಕೆ ಬಂದಿದ್ಯಾ ರಜೆ ಹಾಕಿ ನೀನು? ಸಿಎಂ ಬರಬೇಕಾದ್ರೆ ಹೇಳಬೇಕು ಅನ್ನೋ ಯೋಗ್ಯತೆ ಇಲ್ಲ ನಿಂಗೆ ಲೋಫರ್ ತಂದು ಎಂದು ಹೇಳಿ ಅಧಿಕಾರಿಗೆ ನಿಂದಿಸಿದ್ದಾರೆ.

mys mla awaz

ಮೈಸೂರಿನ ಲ್ಯಾನ್ಸ್ ಕಟ್ಟಡ ವೀಕ್ಷಣೆ ವೇಳೆ ಸ್ಥಳೀಯ ಶಾಸಕರ ನಿರ್ಲಕ್ಷ್ಯ ತೋರಿದ್ದು, ಸಿಎಂ ಅವರು ಕಟ್ಟಡ ವೀಕ್ಷಣೆಗೆ ಬರುತ್ತಾರೆ ಅಂತ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿರಲಿಲ್ಲ. ಆದರಿಂದ ಕೋಪಗೊಂಡ ನಾಗೇಂದ್ರ ಅವರು ಅಧಿಕಾರಿಗೆ ಬೈದು ಸಮಾಧಾನಪಟ್ಟುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *