ಯಾದಗಿರಿ: ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬಟ್ಟೆ ತೊಳೆಯುವ ಪಾಠ ಹೇಳಿಕೊಟ್ಟು ಸದ್ಯ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಓ ಕವಿತಾ ಮನ್ನಿಕೇರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಂದು ರಜೆಯಿದ್ದರೂ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ತಾಲೂಕಿನ ಲಿಂಗೇರಿ ಸ್ಟೇಷನ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ನಿಲಯಕ್ಕೆ ಸಿಇಓ ಕವಿತಾ ಮನ್ನಿಕೇರಿ ಭೇಟಿ ನೀಡಿದ್ದರು. ಮೊದಲಿಗೆ ವಸತಿ ನಿಲಯದ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಶಾಲೆ ಆವರಣದಲ್ಲಿ ಚಿಕ್ಕ ಚಿಕ್ಕ ವಿದ್ಯಾರ್ಥಿಗಳು ಬಟ್ಟೆಗಳನ್ನು ತೊಳೆಯಲು ಹರಸಾಹಸ ಪಡುವುದನ್ನು ಕಂಡು ಅವರ ಬಳಿಗೆ ತೆರಳಿ, ಬಟ್ಟೆಗಳನ್ನು ಹೇಗೆ ತೊಳೆಯಬೇಕು ಅಂತ ಕಲಿಸಿಕೊಟ್ಟಿದ್ದಾರೆ.
ಬರಿ ಬಾಯಿ ಮಾತಿನಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆ ಹೇಗೆ ತೊಳಿಯಬೇಕು ಅಂತ ಹೇಳದೇ, ಖುದ್ದಾಗಿ ತಾವೇ ವಿದ್ಯಾರ್ಥಿಯೋರ್ವನ ಬಟ್ಟೆ ತೊಳೆದು ಹೇಗೆ ಬಟ್ಟೆಯನ್ನು ತೊಳೆಯಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ವಿದ್ಯಾರ್ಥಿಗಳ ಜೊತೆ ಸಾಕಷ್ಟು ಕಾಲಕಳೆದ ಸಿಇಓ ಕವಿತಾ ಅವರು, ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ಹೇಳಿಕೊಟ್ಟಿದ್ದಾರೆ. ಉನ್ನತ ಅಧಿಕಾರಿ ಎಂಬುದನ್ನು ಮರೆತು ಮಕ್ಕಳ ಜೊತೆ ತಾವು ಮಗುವಂತೆ ನಕ್ಕು ನಲಿದ ಕವಿತಾ ಅವರ ಸರಳತೆಗೆ ಜಿಲ್ಲೆಯ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv