ದಿಢೀರನೇ ಸೊಂಟದೆತ್ತರಕ್ಕೆ ಹಾರಿದ ಕಾಳಿಂಗ ಸರ್ಪ – ವಿಡಿಯೋ ನೋಡಿ

Public TV
1 Min Read
CKM SNAKE

ಚಿಕ್ಕಮಗಳೂರು: 13 ಅಡಿಯ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಾಗ ಮೂರು-ನಾಲ್ಕು ಬಾರಿ ಉರಗತಜ್ಞರ ಮೇಲೆಯೇ ದಾಳಿ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ದ್ವಾರಮಕ್ಕಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶ್ರೀಧರಗೌಡ ಎಂಬವರ ಮನೆ ಅಂಗಳಕ್ಕೆ ಕಾಳಿಂಗ ಸರ್ಪ ಆಗಮಿಸಿದೆ. ತಕ್ಷಣ ಅದನ್ನು ಸೆರೆ ಹಿಡಿಯಲು ಉರಗತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹರೀಂದ್ರ ಸೆರೆಹಿಡಿಯಲು ಎಳೆದಾಡುತ್ತಿದ್ದಾಗ ಆಕ್ರೋಶಗೊಂಡ ಕಾಳಿಂಗ ಹರೀಂದ್ರ ಅವರ ಮೇಲೆಯೇ ದಾಳಿಗೆ ಯತ್ನಿಸಿದೆ.

CKM

ಕಾಳಿಂಗ ಆಕ್ರೋಶ ಕಂಡ ಹರೀಂದ್ರ ಕೂಡ ಒಂದು ಕ್ಷಣ ವಿಚಲಿತಗೊಂಡಿದ್ದಾರೆ. ಕಾಳಿಂಗನ ಅಬ್ಬರ ಕಂಡು ಸ್ಥಳಿಯರು ಕೂಡ ಶಾಕ್ ಆಗಿದ್ದಾರೆ. ಅಂತಿಮವಾಗಿ ಒಂದು ಗಂಟೆಗಳ ಕಾಲ ನಿರಂತರ ಕಾರ್ಯಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಹರೀಂದ್ರ ಅವರು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

https://www.youtube.com/watch?v=lUEnsjtbahw

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *