ರಕ್ಷಿಸು ಅಂದ್ರೆ ನಾನೇ ಕಿಡ್ನಾಪ್ ಮಾಡಿಸಿದ್ದು ಅಂದ- ಪೆಪ್ಪರ್ ಸ್ಪ್ರೇ ಉಳಿಸಿತು ಯುವತಿ ಪ್ರಾಣ

Public TV
1 Min Read
pepper spray 2

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿರ್ಭಯಾ ಮಾದರಿಯ ಭಾರೀ ದುರಂತವೊಂದು ತಪ್ಪಿದೆ. ಪೆಪ್ಪರ್ ಸ್ಪ್ರೇ ಯುವತಿಯ ಮಾನ, ಪ್ರಾಣವನ್ನು ಉಳಿಸಿದೆ.

ಸಚಿನ್ ಯುವತಿಯನ್ನು ಕಿಡ್ನಾಪ್ ಮಾಡಿದ ಮಾಜಿ ಸಹೋದ್ಯೋಗಿ. ಯುವತಿ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುವಾಗ ಆಕೆಯನ್ನು ಮಾಜಿ ಸಹೋದ್ಯೋಗಿ ಕಿಡ್ನಾಪ್ ಮಾಡಿದ್ದಾನೆ. ಬಿಳಿ ಕಾರಲ್ಲಿ ಬಂದವರು ಯುವತಿಗೆ ಮಂಪರು ಬರಿಸಿ ಕಿಡ್ನಾಪ್ ಮಾಡಿದ್ದಾರೆ.

ಸಚಿನ್ ತನ್ನ ಕೆಂಪು ಸ್ವಿಫ್ಟ್ ಕಾರಲ್ಲಿ ಹಿಂದೆಯೇ ಬಂದನು. ಈ ವೇಳೆ ಯುವತಿ ನನ್ನನ್ನು ರಕ್ಷಿಸು ಎಂದು ಕೇಳಿಕೊಂಡಿದ್ದಕ್ಕೆ ಕಿರಾತಕ ಸಚಿನ್ ನಾನೇ ಕಿಡ್ನಾಪ್ ಮಾಡಿಸಿದ್ದು ಎಂದು ಹೇಳಿದ್ದಾನೆ. ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆಕೆಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.

pepper spray

ಕೊನೆಗೆ ಕಿರಾತಕರು ಯುವತಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಹೊಡೆದಿದ್ದಾರೆ. ಆದರೆ ಪೆಪ್ಪರ್ ಸ್ಪ್ರೇ ಘಾಟು ಕಾರಲ್ಲಿ ಹರಡಿದ್ದ ಕಾರಣ ಸ್ವತಃ ಸಚಿನ್ ಒದ್ದಾಡಿದ್ದಾನೆ. ಕೊನೆಗೆ ಸಚಿನ್ ಫ್ರೆಶ್ ಏರ್ ಗಾಗಿ ಕಾರ್ ಡೋರ್ ಓಪನ್ ಮಾಡಿದ್ದನು. ಆಗ ಯುವತಿ ಕಾರಿನಿಂದ ಜಿಗಿದು ಎಸ್ಕೇಪ್ ಆದಳು.

ಕುಣಿಗಲ್ ಬೈಪಾಸ್‍ನಲ್ಲಿ ಕಂಗಾಲಾಗಿ ಓಡ್ತಿದ್ದ ಯುವತಿಯನ್ನು ಆಟೋ ಚಾಲಕ ರಕ್ಷಿಸಿದ್ದಾರೆ. ಈ ಘಟನೆ ಕಳೆದ ಬುಧವಾರ ನಡೆದಿದ್ದು, ಟಿ ದಾಸರಹಳ್ಳಿಯಿಂದ ಯುವತಿ ಕಿಡ್ನಾಪ್ ಆಗಿದ್ದಳು. ಈ ಬಗ್ಗೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *