1 ರೂಪಾಯಿಗಾಗಿ ವ್ಯಕ್ತಿಯನ್ನು ಕಾಲಿನಿಂದಲೇ ಒದ್ದು ಕೊಂದ್ರು!

Public TV
1 Min Read
MURDER

ಥಾಣೆ: ಕೇವಲ ಒಂದು ರೂಪಾಯಿಗಾಗಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು 54 ವರ್ಷದ ಮನೋಹರ ಗಾಮ್ನೆ ಎಂದು ಗುರುತಿಸಲಾಗಿದ್ದು, ಈ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಮ್ನೆ ಮನೆ ಸಮೀಪದ ಅಂಗಡಿಯಲ್ಲಿ ಮೊಟ್ಟೆ ಖರೀದಿಸಲು ಹೋಗಿದ್ದಾರೆ. ಅಂಗಡಿಯಲ್ಲಿ ತಾನು ಖರೀದಿಸಿದ ಮೊಟ್ಟೆಗೆ ಒಂದು ರೂಪಾಯಿ ಕಡಿಮೆ ಕೊಟ್ಟಿದ್ದಾರೆ. ಇದರಿಂದ ಅಂಗಡಿಯ ಮಾಲೀಕ ವ್ಯಕ್ತಿಯ ಜೊತೆ ಜಗಳ ಮಾಡಿದ್ದಾನೆ.

MURDER 1

ಜಗಳ ವಿಕೋಪಕ್ಕೆ ಹೋಗಿ ಅಂಗಡಿಯ ಮಾಲೀಕ ಗಾಮ್ನೆಗೆ ಕಾಲಿನಿಂದ ಒದ್ದು, ಕೈಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮವಾಗಿ ಗಾಮ್ನೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಥಾಣೆ ಪೊಲೀಸ್ ಪಿಆರ್ ಒ ಸುಖದಾ ನಾರ್ಕರ್ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಆರೋಪಿ ಅಂಗಡಿ ಮಾಲೀಕ ಸುಧಾಕರ್ ಪ್ರಭು (45) ನನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

MURDER 2

Arrest 2

Share This Article
Leave a Comment

Leave a Reply

Your email address will not be published. Required fields are marked *