ಖಾಸಗಿ ಬಸ್‍ಗೆ ಕಾರ್ ಡಿಕ್ಕಿ- ಬಾಲಕಿ ಸೇರಿ ಮೂವರು ಗಂಭೀರ

Public TV
0 Min Read
Mysore accident collage

ಮೈಸೂರು: ಖಾಸಗಿ ಬಸ್ ಹಾಗೂ ಚಾವರ್ಲೆಟ್ ಕಾರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕಪಿಲಾ ಸೇತುವೆ ಮೇಲೆ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಚಾಮರಾಜನಗರ ಜಿಲ್ಲೆಯ ಚಂದಕವಾಡಿ ಗ್ರಾಮದ ಮಹದೇವಸ್ವಾಮಿ(38), ರತ್ನಮ್ಮ(43) ಹಾಗೂ ದಿಶಾ(8) ಎಂಬುವುದಾಗಿ ಗುರುತಿಸಲಾಗಿದೆ.

Mysore accident2

ಖಾಸಗಿ ಬಸ್ ನರಸೀಪುರ ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದು, ಕಾರ್ ಕೂಡ ಮೈಸೂರು ಕಡೆ ಬರುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿದೆ. ಸದ್ಯ ಗಾಯಾಳುಗಳನ್ನು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Mysore Accident

ಘಟನೆ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *